ತಿ.ನರಸೀಪುರ: ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಿದುಳು ನಿಷ್ಕ್ರಿಯವಾಗಿದ್ದ ಯುವಕನ ಅಂಗಾಂಗಗಳನ್ನು 7 ಜನರಿಗೆ ದಾನ ಮಾಡುವ ಮೂಲಕ ಪಾಲಕರು ಮಗನ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ತಿ.ನರಸೀಪುರ ತಾಲೂಕಿನ ಅತ್ತಹಳ್ಳಿ ಗ್ರಾಮದ ನಿಂಗರಾಜು ಹಾಗೂ ಸವಿತಾ ದಂಪತಿಯ ಪುತ್ರ ಭರತ್ಗೌಡ(18) ಅವರ ಅಂಗಾಂಗವನ್ನು ದಾನ ಮಾಡಲಾಯಿತು. ಬನ್ನೂರಿನ ಸಂತೆಮಾಳದ ಬಳಿ ಮಾ.9ರಂದು ಎರಡು ಬೈಕ್ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಭರತ್ಗೌಡನನ್ನು ಮೈಸೂರಿನ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಚಿಕಿತ್ಸೆ ನೀಡಿದರೂ ಮಿದುಳು ನಿಷ್ಕ್ರಿಯವಾಗಿದ್ದರಿಂದ ಪುತ್ರ ಜೀವಂತವಾಗಿ ಉಳಿಯದಿರುವುದನ್ನು ಮನಗಂಡ ಪಾಲಕರು ಅಂಗಾಂಗ ದಾನಕ್ಕೆ ಒಪ್ಪಿಗೆ ಸೂಚಿಸಿದರು. ಬಳಿಕ ವೈದ್ಯರು ಭರತ್ಗೌಡನ ಹೃದಯ, ಮೂತ್ರಪಿಂಡ, ಮೂತ್ರಕೋಶ, ಕಣ್ಣು ಪಡೆದುಕೊಂಡು 7 ಜನರಿಗೆ ಕಸಿ ಮಾಡಿದ್ದಾರೆ. ಆ ಮೂಲಕ ಭರತ್ ಸಾವಿನಲ್ಲೂ 7 ಜನರ ಬದುಕಿಗೆ ಬೆಳಕಾಗಿ ಸಾರ್ಥಕತೆ ಮರೆದಿದ್ದಾರೆ.
ಕಲಬುರಗಿಯಲ್ಲಿ ಘೋರ ದುರಂತ: ಗೋಧಿ ರಾಶಿ ಮಾಡುವ ಯಂತ್ರಕ್ಕೆ ಸಿಲುಕಿ ಪಿಯು ವಿದ್ಯಾರ್ಥಿನಿ ಸಾವು
ಮಗನ ಸಾವಿನ ಹಿಂದೆ ಸೊಸೆ ಕೈವಾಡ? ಅಂತ್ಯಸಂಸ್ಕಾರ ಆಗಿದ್ದ ಶವ ಹೊರತೆಗಿಸಿ ಮರಣೋತ್ತರ ಪರೀಕ್ಷೆ