More

    ಸಾವಲ್ಲೂ ಸಾರ್ಥಕತೆ ಮೆರೆದ ಭರತ್​ಗೌಡ: ಮಗನ ಕಳೆದುಕೊಂಡ ನೋವಲ್ಲೂ 7 ಜನ್ರ ಪ್ರಾಣ ಉಳಿಸಿದ ಪಾಲಕರು

    ತಿ.ನರಸೀಪುರ: ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಿದುಳು ನಿಷ್ಕ್ರಿಯವಾಗಿದ್ದ ಯುವಕನ ಅಂಗಾಂಗಗಳನ್ನು 7 ಜನರಿಗೆ ದಾನ ಮಾಡುವ ಮೂಲಕ ಪಾಲಕರು ಮಗನ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

    ತಿ.ನರಸೀಪುರ ತಾಲೂಕಿನ ಅತ್ತಹಳ್ಳಿ ಗ್ರಾಮದ ನಿಂಗರಾಜು ಹಾಗೂ ಸವಿತಾ ದಂಪತಿಯ ಪುತ್ರ ಭರತ್​ಗೌಡ(18) ಅವರ ಅಂಗಾಂಗವನ್ನು ದಾನ ಮಾಡಲಾಯಿತು. ಬನ್ನೂರಿನ ಸಂತೆಮಾಳದ ಬಳಿ ಮಾ.9ರಂದು ಎರಡು ಬೈಕ್​ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಭರತ್​ಗೌಡನನ್ನು ಮೈಸೂರಿನ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ಚಿಕಿತ್ಸೆ ನೀಡಿದರೂ ಮಿದುಳು ನಿಷ್ಕ್ರಿಯವಾಗಿದ್ದರಿಂದ ಪುತ್ರ ಜೀವಂತವಾಗಿ ಉಳಿಯದಿರುವುದನ್ನು ಮನಗಂಡ ಪಾಲಕರು ಅಂಗಾಂಗ ದಾನಕ್ಕೆ ಒಪ್ಪಿಗೆ ಸೂಚಿಸಿದರು. ಬಳಿಕ ವೈದ್ಯರು ಭರತ್​ಗೌಡನ ಹೃದಯ, ಮೂತ್ರಪಿಂಡ, ಮೂತ್ರಕೋಶ, ಕಣ್ಣು ಪಡೆದುಕೊಂಡು 7 ಜನರಿಗೆ ಕಸಿ ಮಾಡಿದ್ದಾರೆ. ಆ ಮೂಲಕ ಭರತ್ ಸಾವಿನಲ್ಲೂ​ 7 ಜನರ ಬದುಕಿಗೆ ಬೆಳಕಾಗಿ ಸಾರ್ಥಕತೆ ಮರೆದಿದ್ದಾರೆ.

    ಕಲಬುರಗಿಯಲ್ಲಿ ಘೋರ ದುರಂತ: ಗೋಧಿ ರಾಶಿ ಮಾಡುವ ಯಂತ್ರಕ್ಕೆ ಸಿಲುಕಿ ಪಿಯು ವಿದ್ಯಾರ್ಥಿನಿ ಸಾವು

    ಬ್ಲೂಟೂತ್ ಬಳಸೋ ಜನರೇ ಎಚ್ಚರ! ​ನಿಮ್ಗೂ ಬರಬಹುದು ಆಪತ್ತು…

    ಮಗನ ಸಾವಿನ ಹಿಂದೆ ಸೊಸೆ ಕೈವಾಡ? ಅಂತ್ಯಸಂಸ್ಕಾರ ಆಗಿದ್ದ ಶವ ಹೊರತೆಗಿಸಿ ಮರಣೋತ್ತರ ಪರೀಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts