More

    ಪಾದಯಾತ್ರೆಗೆ ಕ್ಷಣಕ್ಕೊಂದು ತಿರುವು: ಬಿಡದಿಯಲ್ಲಿ ಊಟದ ವ್ಯವಸ್ಥೆ ರದ್ದು, 5 ಮಂದಿ ಮಾತ್ರವೇ ಪಾದಯಾತ್ರೆ ಮಾಡ್ತಾರೆ…

    ರಾಮನಗರ: ಮೇಕೆದಾಟು ಪಾದಯಾತ್ರೆ ಹೋರಾಟ ಕ್ಷಣಕ್ಕೊಂದು ತಿರುವು ಪಡೆಯುತ್ತಿದ್ದು, ಇದೀಗ ಐವರು ನಾಯಕರು ಮಾತ್ರವೇ ಪಾದಯಾತ್ರೆ ಮುಂದುವರಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಮೇಕೆದಾಟು ಪಾದಯಾತ್ರೆಯ 5ನೇ ದಿನವಾದ ಇಂದು ಬಿಡದಿಯಲ್ಲಿ 10 ಸಾವಿರ ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಇದೀಗ ಈ ಊಟದ ವ್ಯವಸ್ಥೆಯನ್ನು ರದ್ದುಗೊಳಿಸಿದ್ದಾರೆ. ಆದರೆ, ಪಾದಯಾತ್ರೆ ನಡೆಯಲಿ ಬಿಡಲಿ, ಬಂದವರು ಹಸಿವಿನಿಂದ ಹೋಗಬಾರದು ಎಂದು ಮಾಯಗಾನಹಳ್ಳಿಯಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಜಿಲ್ಲಾಡಳಿತ ಪಾದಯಾತ್ರೆ ಮೇಲೆ‌ ನಿಷೇಧ ಏರಿದರೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್​, ಡಿ.ಕೆ.ಸುರೇಶ್​ ಸೇರದಂತೆ ಐದು ಮಂದಿಯಷ್ಟೇ ಪಾದಯಾತ್ರೆ ನಡೆಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಡಿ.ಕೆ.ಶಿವಕುಮಾರ್​, ಡಿ.ಕೆ.ಸುರೇಶ್​ ಇನ್ನೂ ಕನಕಪುರದ ತಮ್ಮ ನಿವಾಸದಲ್ಲಿದ್ದಾರೆ. ಇನ್ನೊಂದೆಡೆ ರಾಮನಗರದ ಐಜೂರು ವೃತ್ತದಲ್ಲಿ ಪೊಲೀಸರ ಕಾವಲಿನಲ್ಲಿ ಪಾದಯಾತ್ರೆಗೆ ಅಂತಿಮ ಸಿದ್ಧತೆ ನಡೆಯುತ್ತಿದೆ.

    ಪಾದಯಾತ್ರೆಗೆ ಪಣ ತೊಟ್ಟಿರುವ ಡಿಕೆಶಿ, ಒಂದುವೇಳೆ ತೊಡಕುಉಂಟಾದರೆ ಕೇವಲ 5 ಮಂದಿ ಅಂತರ ಕಾಪಾಡಿಕೊಂಡು ನಡೆಯೋಣ. ಕೋವಿಡ್ ನಿಯಮ ಪಾಲಿಸಿ ನಡೆಯೋಣ. ಹೀಗೆ ಮಾಡಿದರೆ ಅವರು ನಮ್ಮನ್ನ ತಡೆಯಲು ಸಾಧ್ಯವಿಲ್ಲ ಎಂದು ಡಿಕೆಶಿ ಹೇಳುತ್ತಿದ್ದಾರೆ ಎನ್ನಲಾಗಿದೆ.

    ಸಾಕಷ್ಟು ಕುತೂಹಲಕ್ಕೆ ಕಾರಣವಾಗಿರುವ ಐದನೇ ದಿನ ಪಾದಯಾತ್ರೆ ಹೈಕೋರ್ಟ್, ಜಿಲ್ಲಾಡಳಿತ, ಸರ್ಕಾರ ಹಾಗೂ ಕಾಂಗ್ರೆಸ್​ನ ಪ್ರತಿಷ್ಠೆಯ ನಡುವೆ ಏನೆಲ್ಲಾ ನಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

    ಪಾದಯಾತ್ರೆ ನಡೆಸದಂತೆ ರಾತ್ರೋರಾತ್ರಿ ನೋಟಿಸ್ ಜಾರಿ: ಇದೆಲ್ಲವೂ ಡಿಕೆಶಿಗೆ ಕರೊನಾ ಹಬ್ಬಿಸೋ ಯತ್ನ ಎಂದ ಸುರೇಶ್​

    ಮೇಕೆದಾಟು ಪಾದಯಾತ್ರೆ: ಬೆಂಗ್ಳೂರು-ಮೈಸೂರು ಹೆದ್ದಾರೀಲಿ ಸಂಚರಿಸುವ ವಾಹನಗಳಿಗೆ ಬದಲಿ ಮಾರ್ಗ ಪ್ರಕಟ

    ನನ್ನ ಬೈಯೋಕ್ಕೆ ಆಗಲ್ಲ, ಟ್ರೋಲ್​ ಮಾಡಿ ಖುಷಿಪಡ್ತಿದ್ದಾರೆ.. ಅವರಿಗೆ ನಾನೇ ಟಾರ್ಗೆಟ್ ಎನ್ನುತ್ತಲೇ ಮಹತ್ತರ ವಿಷ್ಯ ಬಿಚ್ಚಿಟ್ಟ ಡಿಕೆಶಿ

    ಕರುಳ ಕುಡಿಯನ್ನೇ ಕೊಚ್ಚಿ ಕೊಂದ ತಾಯಿ! ಆಕೆ ಮೈಮೇಲೆ ದೇವರು ಬರುತ್ತಿತ್ತಂತೆ… ಮೈಸೂರು ಜಿಲ್ಲೇಲಿ ಅಮಾನವೀಯ ಘಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts