ರಾಯಚೂರು: ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ ಮಾಡಿದವನನ್ನು ಪೊಲೀಸು ಬಂಧಿಸಿದ್ದಾರೆ.
ಫೆ,25ರಂದು ಸಿಂಧನೂರು ತಾಲೂಕಿನಲ್ಲಿ ಘಟನೆ ನಡೆದಿತ್ತು. ಶಾಲೆಗೆ ಹೋಗಿದ್ದ ಬಾಲಕಿಯರು ಮನೆಗೆ ಊಟಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಈ ಕಾಮುಕ ಅವರನ್ನು ಅಂಗಡಿಯೊಳಗೆ ಕರೆದು ಅತ್ಯಾಚಾರ ಮಾಡಿದ್ದ.
ಅರುಣಕುಮಾರ ಠಾಕೂರ್ (50) ಬಂಧಿತ. ಈತ ದಿನಸಿ ಅಂಗಡಿ ಇಟ್ಟುಕೊಂಡಿದ್ದ. ಅದೇ ಅಂಗಡಿಗೆ ಬಾಲಕಿಯರನ್ನು ಕರೆದು ರೇಪ್ ಮಾಡಿದ್ದ. ಬಾಲಕಿಯರು ಮನೆಯಲ್ಲಿ ವಿಷಯ ತಿಳಿಸಿದ ನಂತರ ಅವರ ತಾಯಂದಿರು ಪೊಲೀಸರಿಗೆ ದೂರು ನೀಡಿದ್ದರು. ಆರೋಪಿ ಅರುಣ್ಕುಮಾರ್ ಪರಾರಿಯಾಗಿದ್ದ.
ಖಾವಿ ವೇಷ ಧರಿಸಿ ಓಡಾಡಿಕೊಂಡಿದ್ದ ಅರುಣಕುಮಾರ್ನನ್ನು ಪೊಲೀಸರು ಇಂದು ಬಂಧಿಸಿದ್ದಾರೆ.
ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಮೊದಲ ಕರೊನಾ ಪ್ರಕರಣ; 68ವರ್ಷದ ಮಹಿಳೆಗೆ ಸೋಂಕು
ವಿದ್ಯಾರ್ಥಿನಿ ಮೇಲೆ ಪದೇಪದೆ ರೇಪ್ ಮಾಡಿದ ಬಾಕ್ಸಿಂಗ್ ಕೋಚ್: ರೈಲಿನಲ್ಲೇ ನಡೆಯಿತು ಮೊದಲ ಅತ್ಯಾಚಾರ