More

    ಮೆಟ್ರೋ ಬರ್ತಿದ್ದಂತೆ ಟ್ರ್ಯಾಕ್​​ಗೆ ಜಿಗಿದ ವ್ಯಕ್ತಿ; ಸಾವು- ಬದುಕಿನ ಮದ್ಯೆ ಹೋರಾಟ

    ಬೆಂಗಳೂರು: ಮೆಟ್ರೋ ರೈಲು ಬರುತ್ತಿದ್ದಂತೆ ವ್ಯಕ್ತಿಯೊಬ್ಬ ಜಿಗಿದು ಆತ್ಮಹತ್ಯೆಗೆ ಪ್ರಯತ್ನಿಸಿರುವ ಘಟನೆ ಬೆಂಗಳೂರಿನ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ.

    ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ವ್ಯಕ್ತಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ. ಈ ವ್ಯಕ್ತಿ ಯಾರು? ಎನ್ನುವ ಯಾವುದೇ ಮಾಹಿತಿ ಇಲ್ಲ.  ಸ್ಥಳಕ್ಕೆ ಚಂದ್ರಾಲೆಔಟ್​​ ಪೊಲೀಸರು ಭೇಟಿ ನೀಡಿದ್ದಾರೆ.

    ಈ ಅವಘಡ ನಡೆದ ಹಿನ್ನಲೆ ಸ್ಥಳ ಮಹರಜು ಕಾರ್ಯವನ್ನು ಪೊಲೀಸ್​​ ಅಧಿಕಾರಿಗಳ ಮಾಡುತ್ತಿದ್ದಾರೆ. ಹೀಗಾಗಿ ಮೆಟ್ರೋ ಸಂಚಾರವನ್ನು ಕೆಲವು ಸಮಯ ಸ್ಥಗಿತ ಮಾಡಲಾಗಿದೆ. ಚಂದ್ರಾಲೆಔಟ್​​ ಪೊಲೀಸರು ಸ್ಥಳ ಮಹರಜು ಕಾರ್ಯ ಮಾಡುತ್ತಿದ್ದಾರೆ.

    ಅತ್ತಿಗುಪ್ಪೆ ನಿಲ್ದಾಣದಲ್ಲಿ ಮಧ್ಯಾಹ್ನ 2.10 ಕ್ಕೆ ರೈಲಿನ ಮುಂದೆ ಒಬ್ಬರು ಜಿಗಿದಿದ್ದಾರೆ. ಪ್ರಸ್ತುತ ರೈಲುಗಳು ಮಾಗಡಿ ರಸ್ತೆಯಿಂದ ವೈಟ್‌ಫೀಲ್ಡ್ ಫೀಲ್ಡ್ ನಡುವೆ ಮಾತ್ರ ಓಡುತ್ತಿವೆ ಮತ್ತು ಮಾಗಡಿ ರಸ್ತೆಯಿಂದ ಚಲ್ಲಘಟ್ಟದ ನಡುವೆ ಯಾವುದೇ ಸೇವೆಗಳಿಲ್ಲ ಎಂದು ನಮ್ಮ ಮೆಟ್ರೋ ಟ್ವೀಟ್​​ ಮಾಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts