ಮುಂಬೈ: ಕ್ಷಣ ಕ್ಷಣಕ್ಕೂ ರೋಚಕ ತಿರುವು ಪಡೆಯುತ್ತಿದೆ ‘ಮಹಾ’ ಡ್ರಾಮಾ. ಮೂರು ವರ್ಷಗಳ ಹಿಂದೆ ಕರ್ನಾಟಕದಲ್ಲಿ ಉಂಟಾಗಿದ್ದಂಥ ರಾಜಕೀಯ ಅಸ್ಥಿರತೆ ಇದೀಗ ಮಹಾರಾಷ್ಟ್ರದಲ್ಲೂ ತಲೆದೋರಿದೆ. ಸಚಿವ ಏಕನಾಥ ಶಿಂಧೆ ನೇತೃತ್ವದಲ್ಲಿ ಬಂಡಾಯವೆದ್ದ ಶಿವಸೇನೆಯ 40ಕ್ಕೂ ಅಧಿಕ ಶಾಸಕರು ರೆಬಲ್ ಆಗಿದ್ದು, ರಾಜ್ಯ ಸರ್ಕಾರ ಅತಂತ್ರ ಸ್ಥಿತಿಯಲ್ಲಿದೆ. ಬಂಡಾಯ ಶಾಸಕರ ಮನವೊಲಿಸಲು ಶರದ್ ಪವಾರ್ ಮತ್ತು ಉದ್ಧವ್ ಠಾಕ್ರೆ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದು, ಇನ್ನೂ ಫಲಿಸಿಲ್ಲ. ನಿನ್ನೆ ಗುಜರಾತ್ನ ಸೂರತ್ನಲ್ಲಿರುವ ಹೋಟೆಲೊಂದರಲ್ಲಿ ಬೀಡುಬಿಟ್ಟಿದ್ದ ಈ ಎಲ್ಲ ಶಾಸಕರು ಇಂದು ಗುವಾಹಟಿಗೆ ತೆರಳಿದ್ದಾರೆ. ಇಷ್ಟೆಲ್ಲಾ ಬೆಳವಣಿಗೆ ನಡುವೆ ಮಹಾರಾಷ್ಟ್ರದ ಗವರ್ನರ್ ಕೋಶಿಯಾ ಅವರಿಗೆ ಕರೊನಾ ಸೋಂಕು ದೃಢಪಟ್ಟಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸರ್ಕಾರ ಅತಂತ್ರ ಸ್ಥಿತಿಯಲ್ಲಿರುವ ಸಂದರ್ಭದಲ್ಲಿ ಸ್ಪೀಕರ್ ಮತ್ತು ಗವರ್ನರ್ ಪಾತ್ರ ಬಹಳ ಮುಖ್ಯ. ಒಂದು ವೇಳೆ ಏಕ್ನಾಥ್ ಶಿಂಧೆ ಹೇಳುವಂತೆ ಅವರ ಬಳಿ 40ಕ್ಕೂ ಶಾಸಕರ ಬೆಂಬಲ ಇದ್ರೆ, ನಾವು ಸರ್ಕಾರಕ್ಕೆ ಬೆಂಬಲ ಕೊಡುವುದಿಲ್ಲ, ಬಹುಮತ ಸಾಬೀತು ಮಾಡಲು ತಿಳಿಸಿ ಎಂದು ಹೇಳಬಹುದು. ಆಗ ಬಹುಮತ ಸಾಬೀತು ಪಡಿಸಲು ಗವರ್ನರ್ ಹೇಳಬೇಕಾಗುತ್ತೆ. ರಾಜಕೀಯ ವಲಯದಲ್ಲಿ ಇದೇ ವಿಚಾರ ಬಹಳ ಚರ್ಚೆಯಾಗುತ್ತಿದೆ. ಗವರ್ನರ್ ಅವರಿಗೆ ಕರೊನಾ ಸೋಂಕು ತಗುಲಿದ್ದು, ಅವರ ಅನುಪಸ್ಥಿತಿಯಲ್ಲಿ ಏನಾಗುತ್ತೆ? ಎಂಬ ಕುತೂಹಲ ಮೂಡಿದೆ. ಇಮದು ಮಧ್ಯಾಹ್ನ 12 ಗಂಟೆಯೊಳಗೆ ಮನೆಯಲ್ಲೇ ಕ್ಯಾಬಿನೆಟ್ ಮೀಟಿಂಗ್ ಮಾಡಲು ಉದ್ಧವ್ ಠಾಕ್ರೆ ಸಜ್ಜಾಗಿದ್ದಾರೆ.
ಸೂರತ್ನಿಂದ ಅಸ್ಸಾಂಗೆ ಹಾರಿದ 40 ಶಿವಸೇನಾ ಶಾಸಕರು: ಶಿಂಧೆ ಬಾಯಲ್ಲಿ ಬಾಳ್ ಠಾಕ್ರೆ ಹಿಂದುತ್ವ ಘೋಷಣೆ
ರಾ ರಾ ರಕ್ಕಮ್ಮ… ಹಾಡಿಗೆ ಡ್ಯಾನ್ಸ್ ಮಾಡಿ ಕಿಚ್ಚನ ಮನಗೆದ್ದ ಪೌರ ಕಾರ್ಮಿಕರಿಗೆ ಸಿಕ್ತು ಖಾಯಂ ಉದ್ಯೋಗ!