More

    ಮಗಳ ಪ್ರಿಯಕರನ ಎರಡೂ ಕೈ ಕತ್ತರಿಸಿ ಭೀಕರವಾಗಿ ಕೊಂದ ತಂದೆ! ಕಾರಣ ಕೇಳಿದ್ರೆ ಬೆಚ್ಚಿಬೀಳ್ತೀರಿ

    ಗುಂಟೂರು: ಪ್ರೇಯಸಿ ತಂದೆಯಿಂದಲೇ ಯುವಕನೊಬ್ಬ ಬರ್ಬರವಾಗಿ ಕೊಲೆಯಾಗಿದ್ದಾನೆ. ಈ ಹತ್ಯೆಯ ಭೀಕರತೆ ಬಗ್ಗೆ ಕೇಳಿದ್ರೆ ಅಯ್ಯೋ, ಪ್ರೀತಿ ಮಾಡಿದ್ದಕ್ಕೆ ಇದೆಂಥಾ ಕ್ರೂರ ಶಿಕ್ಷೆ ಎಂದು ವಿಧಿಯನ್ನೊಮ್ಮೆ ಶಪಿಸುತ್ತೀರಿ!

    ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಕೊಪ್ಪರಾವೂರು ಗ್ರಾಮದ ವೆಂಕಟೇಶ್​ ಕೊಲೆಯಾದವ. ಇದೇ ಗ್ರಾಮದ ಭಾಸ್ಕರ್​ರಾವ್​ ಎಂಬುವರ ಮಗಳು ಮತ್ತು ವೆಂಕಟೇಶ್​ ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು. ಇವರಿಬ್ಬರ ಗೆಳೆತನ ಪ್ರೀತಿಗೆ ತಿರುಗಿದ್ದು, ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದರು. ಇದಕ್ಕೆ ಯುವತಿಯ ಕುಟುಂಬಸ್ಥರು ವಿರೋಧಿಸಿದ್ದರು. ವೆಂಕಟೇಶ್​ನನ್ನು ಮನಸಾರೆ ಪ್ರೀತಿಸುತ್ತಿದ್ದ ಯುವತಿ, ಮದುವೆ ಆದರೆ ಆತನನ್ನೇ ಎಂದು ಪಟ್ಟು ಹಿಡಿದಿದ್ದಳು. ಪ್ರೇಮ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದ ಯುವತಿ ತಂದೆ, ಇದೇ ವಿಚಾರವಾಗಿ ಪಂಚಾಯಿತಿ ಕೂಡ ಮಾಡಿದ್ದ. ಕೆಲ ಸಮಯದವರೆಗೆ ಯುವತಿ-ಯುವಕ ದೂರ ಇರಬೇಕು. ಭೇಟಿ ಆಗಬಾರದು ಎಂದು ತಾಕೀತು ಮಾಡಿದ್ದ. ಇದಕ್ಕೆ ಪ್ರೇಮಿಗಳಿಬ್ಬರೂ ಒಪ್ಪಿದ್ದರು.

    ಆದರೆ, ಪರಸ್ಪರ ಫೋನ್​ ಮೂಲಕ ಮಾತನಾಡಿಕೊಳ್ಳುತ್ತಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಸಿಟ್ಟಿಗೆದ್ದ ಯುವತಿ ತಂದೆ, ನಿನ್ನೆ(ಮಂಗಳವಾರ) ರಾತ್ರಿ ಮಗಳ ಪ್ರಿಯಕರನಿಗೆ ಕರೆ ಮಾಡಿ ಕರೆಸಿಕೊಂಡಿದ್ದ. ವೆಂಕಟೇಶ್​ ಬರುತ್ತಿದ್ದಂತೆ ಯುವತಿ ತಂದೆ ಸೇರಿ 6 ಜನರ ತಂಡ ಮಾರಣಾಂತಿಕ ಹಲ್ಲೆ ಮಾಡಿದೆ. ಅಲ್ಲದೆ ವೆಂಕಟೇಶ್​ನ ಎರಡೂ ಕೈಗಳನ್ನ ಕತ್ತರಿಸಿದ್ದಾರೆ. ಕಾಲು ಕತ್ತರಿಸಲು ಯತ್ನಿಸಿ ಪರಾರಿಯಾಗಿದ್ದಾರೆ.

    ನೋವಿನಿಂದ ನರಳುತ್ತ ತೀವ್ರ ರಕ್ತಸ್ರಾವವಾಗಿ ಯುವಕ ಅರೆಪ್ರಜ್ಞಾಸ್ಥಿತಿಗೆ ತಲುಪಿದ್ದ. ಈ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ವೆಂಕಟೇಶ್​ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರಾದರೂ ಬದುಕಲಿಲ್ಲ. 6 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಬೆಳಗ್ಗೆ ಮಗ, ಸಂಜೆ ತಂದೆ, ಮರುದಿನ ಮಗಳು, ನಂತರ ಮತ್ತೊಬ್ಬ ಮಗಳ ಸಾವು… ಇನ್ನಿಬ್ಬರ ಸ್ಥಿತಿ ಚಿಂತಾಜನಕ

    ಲಾಕ್​ಡೌನ್​ ಹಿನ್ನೆಲೆ ರಾತ್ರೋರಾತ್ರಿ ಸ್ವಗ್ರಾಮಕ್ಕೆ ಹೊರಟಿದ್ದವರ ಬಾಳಲ್ಲಿ ದುರಂತ! ಮಾರ್ಗಮಧ್ಯೆ ನಾಲ್ವರು ದುರ್ಮರಣ

    ಅಕ್ಕಿ ಕೇಳಿದ ರೈತನಿಗೆ ‘ಸಾಯುವುದು ಒಳ್ಳೇದು’ ಎಂದ ಆಹಾರ ಸಚಿವ! ಕತ್ತಿ ಮಾತಿಗೆ ಸಿಎಂ ಬಿಎಸ್​ವೈ ಬೇಸರ

    ಮಾಲಾಶ್ರೀ ಪತಿ, ನಿರ್ಮಾಪಕ ರಾಮು ಮೃತಪಟ್ಟದ್ದು ಕರೊನಾದಿಂದಲ್ಲ! ಸಾವಿಗೆ ಬೇರೆ ಕಾರಣ ಇದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts