ಗುಂಟೂರು: ಪ್ರೇಯಸಿ ತಂದೆಯಿಂದಲೇ ಯುವಕನೊಬ್ಬ ಬರ್ಬರವಾಗಿ ಕೊಲೆಯಾಗಿದ್ದಾನೆ. ಈ ಹತ್ಯೆಯ ಭೀಕರತೆ ಬಗ್ಗೆ ಕೇಳಿದ್ರೆ ಅಯ್ಯೋ, ಪ್ರೀತಿ ಮಾಡಿದ್ದಕ್ಕೆ ಇದೆಂಥಾ ಕ್ರೂರ ಶಿಕ್ಷೆ ಎಂದು ವಿಧಿಯನ್ನೊಮ್ಮೆ ಶಪಿಸುತ್ತೀರಿ!
ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಕೊಪ್ಪರಾವೂರು ಗ್ರಾಮದ ವೆಂಕಟೇಶ್ ಕೊಲೆಯಾದವ. ಇದೇ ಗ್ರಾಮದ ಭಾಸ್ಕರ್ರಾವ್ ಎಂಬುವರ ಮಗಳು ಮತ್ತು ವೆಂಕಟೇಶ್ ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು. ಇವರಿಬ್ಬರ ಗೆಳೆತನ ಪ್ರೀತಿಗೆ ತಿರುಗಿದ್ದು, ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದರು. ಇದಕ್ಕೆ ಯುವತಿಯ ಕುಟುಂಬಸ್ಥರು ವಿರೋಧಿಸಿದ್ದರು. ವೆಂಕಟೇಶ್ನನ್ನು ಮನಸಾರೆ ಪ್ರೀತಿಸುತ್ತಿದ್ದ ಯುವತಿ, ಮದುವೆ ಆದರೆ ಆತನನ್ನೇ ಎಂದು ಪಟ್ಟು ಹಿಡಿದಿದ್ದಳು. ಪ್ರೇಮ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದ ಯುವತಿ ತಂದೆ, ಇದೇ ವಿಚಾರವಾಗಿ ಪಂಚಾಯಿತಿ ಕೂಡ ಮಾಡಿದ್ದ. ಕೆಲ ಸಮಯದವರೆಗೆ ಯುವತಿ-ಯುವಕ ದೂರ ಇರಬೇಕು. ಭೇಟಿ ಆಗಬಾರದು ಎಂದು ತಾಕೀತು ಮಾಡಿದ್ದ. ಇದಕ್ಕೆ ಪ್ರೇಮಿಗಳಿಬ್ಬರೂ ಒಪ್ಪಿದ್ದರು.
ಆದರೆ, ಪರಸ್ಪರ ಫೋನ್ ಮೂಲಕ ಮಾತನಾಡಿಕೊಳ್ಳುತ್ತಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಸಿಟ್ಟಿಗೆದ್ದ ಯುವತಿ ತಂದೆ, ನಿನ್ನೆ(ಮಂಗಳವಾರ) ರಾತ್ರಿ ಮಗಳ ಪ್ರಿಯಕರನಿಗೆ ಕರೆ ಮಾಡಿ ಕರೆಸಿಕೊಂಡಿದ್ದ. ವೆಂಕಟೇಶ್ ಬರುತ್ತಿದ್ದಂತೆ ಯುವತಿ ತಂದೆ ಸೇರಿ 6 ಜನರ ತಂಡ ಮಾರಣಾಂತಿಕ ಹಲ್ಲೆ ಮಾಡಿದೆ. ಅಲ್ಲದೆ ವೆಂಕಟೇಶ್ನ ಎರಡೂ ಕೈಗಳನ್ನ ಕತ್ತರಿಸಿದ್ದಾರೆ. ಕಾಲು ಕತ್ತರಿಸಲು ಯತ್ನಿಸಿ ಪರಾರಿಯಾಗಿದ್ದಾರೆ.
ನೋವಿನಿಂದ ನರಳುತ್ತ ತೀವ್ರ ರಕ್ತಸ್ರಾವವಾಗಿ ಯುವಕ ಅರೆಪ್ರಜ್ಞಾಸ್ಥಿತಿಗೆ ತಲುಪಿದ್ದ. ಈ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ವೆಂಕಟೇಶ್ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರಾದರೂ ಬದುಕಲಿಲ್ಲ. 6 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳಗ್ಗೆ ಮಗ, ಸಂಜೆ ತಂದೆ, ಮರುದಿನ ಮಗಳು, ನಂತರ ಮತ್ತೊಬ್ಬ ಮಗಳ ಸಾವು… ಇನ್ನಿಬ್ಬರ ಸ್ಥಿತಿ ಚಿಂತಾಜನಕ
ಲಾಕ್ಡೌನ್ ಹಿನ್ನೆಲೆ ರಾತ್ರೋರಾತ್ರಿ ಸ್ವಗ್ರಾಮಕ್ಕೆ ಹೊರಟಿದ್ದವರ ಬಾಳಲ್ಲಿ ದುರಂತ! ಮಾರ್ಗಮಧ್ಯೆ ನಾಲ್ವರು ದುರ್ಮರಣ
ಅಕ್ಕಿ ಕೇಳಿದ ರೈತನಿಗೆ ‘ಸಾಯುವುದು ಒಳ್ಳೇದು’ ಎಂದ ಆಹಾರ ಸಚಿವ! ಕತ್ತಿ ಮಾತಿಗೆ ಸಿಎಂ ಬಿಎಸ್ವೈ ಬೇಸರ
ಮಾಲಾಶ್ರೀ ಪತಿ, ನಿರ್ಮಾಪಕ ರಾಮು ಮೃತಪಟ್ಟದ್ದು ಕರೊನಾದಿಂದಲ್ಲ! ಸಾವಿಗೆ ಬೇರೆ ಕಾರಣ ಇದೆ