More

    ಅಯ್ಯೋ, ವಿಧಿಯೇ ನೀನೆಷ್ಟು ಕ್ರೂರಿ? ಮುದ್ದಾದ ಯುವತಿ ಬಾಳಿಗೆ ಕೊಳ್ಳಿ ಇಟ್ಟಿದ್ದೇಕೆ? ಮನಕಲಕುತ್ತೆ ಈ ಸ್ಟೋರಿ

    ಕಲಬುರಗಿ: ಅವರಿಬ್ಬರು ಎರಡು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಮನೆಯವರಿಂದಲೂ ಮದುವೆಗೆ ಗ್ರೀನ್​ ಸಿಗ್ನಲ್​ ಸಿಕ್ಕಿತ್ತು. ಇದೇ ಖುಷಿಯಲ್ಲಿ ಬದುಕಿನ ಬಗ್ಗೆ ನೂರಾರು ಕನಸು ಕಂಡಿದ್ದ ಪ್ರೇಮಿಗಳ ಬಾಳಲ್ಲಿ ವಿಧಿ ಅಟ್ಟಹಾಸ ಮೆರೆದಿದ್ದು, ನಡೆಯಬಾರದ್ದು ನಡೆದೇ ಹೋಗಿದೆ… ತಿಂಗಳ ಅಂತರದಲ್ಲಿ ಪ್ರೇಮಿಗಳಿಬ್ಬರೂ ದುರಂತ ಅಂತ್ಯಕಂಡಿದ್ದು, ಮುದ್ದಾದ ಮಕ್ಕಳನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲುಮುಟ್ಟಿದೆ…

    ಕಲಬುರಗಿ ನಗರದ ಯುವತಿ ಶ್ರುತಿ ಮತ್ತು ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ಮೂಲದ ಹನುಮಂತ ದುರಂತ ಅಂತ್ಯ ಕಂಡ ಪ್ರೇಮಿಗಳು. ಇಬ್ಬರೂ ಸಂಬಂಧಿಕರು. ಇದೇ ಸಲುಗೆ ಪ್ರೀತಿಗೆ ತಿರುಗಿತ್ತು. ಕುಟುಂಬಸ್ಥರಿಗೆ ವಿಚಾರ ತಿಳಿದು ಅವರೂ ಮದುವೆ ಮಾಡುವುದಾಗಿ ಹೇಳಿದ್ದರು. ಎಲ್ಲವೂ ಅಂದುಕೊಂಡಂತೆ ಆಯ್ತು, ಇನ್ನು ಕೆಲ ವರ್ಷಗಳಲ್ಲಿ ಹಸಮಣೆ ಏರುತ್ತೇವೆ ಎಂದು ಖುಷಿಯಲ್ಲಿರುವಾಗಲೇ, ಹನುಮಂತನ ಪ್ರಾಣವನ್ನ ಜವರಾಯ ಹೊತ್ತೊಯ್ದ!

    ಒಂದು ತಿಂಗಳ ಹಿಂದೆ ಬಸವನಬಾಗೇವಾಡಿಯಲ್ಲಿ ಕಾಲುಜಾರಿ ಬಾವಿಗೆ ಬಿದ್ದು ಹನುಮಂತ ಮೃತಪಟ್ಟಿದ್ದ. ಪ್ರಿಯಕರನ ಸಾವಿನ ಸುದ್ದಿ ಕೇಳಿ ಕಂಗಾಲಾದ ಪ್ರೇಯಸಿ ಶ್ರುತಿ, ಅಂದಿನಿಂದ ಸರಿಯಾಗಿ ಊಟವನ್ನೂ ಮಾಡದೇ ಕಣ್ಣೀರಿಡುತ್ತಲೇ ಇದ್ದಳು. ಹನಮಂತ ಇಲ್ಲದೆ ಬದುಕುವುದಾದರೂ ಹೇಗೆ? ಅವನಿಲ್ಲದೆ ನಾ ಇರಲಾರೆ… ಎಂದು ಮಾನಸಿಕವಾಗಿ ತುಂಬಾ ನೊಂದಿದ್ದ ಶ್ರುತಿ(18), ನಿನ್ನೆ(ಗುರುವಾರ) ಸಂಜೆ ಕಲಬುರಗಿಯಲ್ಲಿ ತನ್ನ ಮನೆಯ ಬಾಗಿಲಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಪೋಷಕರ ಆಕ್ರಂದನ‌ ಮುಗಿಲು ಮುಟ್ಟಿದೆ. ಕಲಬುರಗಿ ನಗರದ ಪಿಡಬ್ಲುಡಿ ಕ್ವಾಟರ್ಸ್​ನಲ್ಲಿ ಪಾಲಕರೊಂದಿಗೆ ವಾಸವಿದ್ದ ಶ್ರುತಿ, ದ್ವಿತೀಯ ಪಿಯುಸಿ ಓದುತ್ತಿದ್ದಳು.

    ಮದ್ವೆ ಸಂಭ್ರಮ ಬೆನ್ನಲ್ಲೇ ಸೂತಕ ಛಾಯೆ: ಪತ್ನಿ-ಮಗಳ ಜತೆ ಹೇಮಾವತಿ ನಾಲೆಗೆ ಹಾರಿ ಇಂಜಿನಿಯರ್ ಆತ್ಮಹತ್ಯೆ

    ಕೆಎಸ್ಸಾರ್ಟಿಸಿ ಬಸ್​- ಕಾರು ಅಪಘಾತ: ಮದುವೆ ಆರತಕ್ಷತೆಗೆ ಹೊರಟಿದ್ದ ಮೂವರು ಮಹಿಳೆಯರು ಸ್ಥಳದಲ್ಲೇ ಸಾವು

    ಬೇರೆ ಬೇರೆ ಮದ್ವೆ ಆಗಿದ್ರೂ ಮಾಗಡಿಯಲ್ಲಿ ದುರಂತ ಅಂತ್ಯ ಕಂಡ ಜೋಡಿ! ಗರ್ಭಿಣಿ ಪತ್ನಿಯ ಗೋಳಾಟ ನೋಡಲಾಗ್ತಿಲ್ಲ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts