More

    ಜಾರಕಿಹೊಳಿ ಸಿಡಿ ಕೇಸ್​: ತನಿಖಾಧಿಕಾರಿಗಳ ಮುಂದೆ ನರೇಶ್​ಗೌಡ, ಶ್ರವಣ್ ಹಾಜರ್​​! ಮುಂದೇನಾಗುತ್ತೆ?

    ಬೆಂಗಳೂರು: ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಅಶ್ಲೀಲ ವಿಡಿಯೋ ವೈರಲ್​ ಆಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಈ ಕೇಸ್​ನ ಸೂತ್ರಧಾರಿಗಳೆಂದೇ ಹೇಳಲಾದ ಬಿ.ಎಂ.ನರೇಶ್​ ಗೌಡ ಮತ್ತು ಶ್ರವಣ್​ ಇವರಿಬ್ಬರು ಇಂದು ಎಸ್​ಐಟಿ(ವಿಶೇಷ ತನಿಖಾ ತಂಡ) ಮುಂದೆ ಹಾಜರಾಗಿದ್ದಾರೆ.

    ನರೇಶ್​ ಮತ್ತು ಶ್ರವಣ್​ಗೆ ಜೂ.8ರಂದು ನಿರೀಕ್ಷಣಾ ಜಾಮೀನು ಮಂಜೂರಾಗಿತ್ತು. ಜಾಮೀನು ಸಿಕ್ಕ ನಾಲ್ಕು ದಿನಕ್ಕೆ ಅಂದರೆ ಜೂ.12ರಂದು ತಮ್ಮ ವಕೀಲರೊಂದಿಗೆ ಆಡುಗೋಡಿ ಟೆಕ್ನಿಕಲ್​ ಸೆಂಟರ್​ನಲ್ಲಿ ತನಿಖಾಧಿಕಾರಿಗಳ ಮುಂದೆ ಹಾಜರಾಗಿದ್ದು, ಸಿಸಿಬಿ ಎಸಿಪಿ ಧರ್ಮೇಂದ್ರ ವಿಚಾರಣೆ ನಡೆಸುತ್ತಿದ್ದಾರೆ. ಈ ಇಬ್ಬರೂ ಏನೆಲ್ಲ ಬಾಯ್ಬಿಡ್ತಾರೆ ಎಂಬುದು ಕೆಲ ಹೊತ್ತಿನಲ್ಲೇ ಗೊತ್ತಾಗಲಿದೆ. ಇದನ್ನೂ ಓದಿರಿ ನನ್ನ ಪತ್ನಿ ಪರಪುರುಷನೊಂದಿಗೆ ಓಡಿಹೋಗಿದ್ದಾಳೆ… ಎಂದವನ ಅಜ್ಜಿ ಹೊಲದಲ್ಲಿ ಅಡಗಿತ್ತು ಭಯಾನಕ ರಹಸ್ಯ!

    ಇತ್ತ ನರೇಶ್​ ಮತ್ತು ಶ್ರವಣ್​ನನ್ನು ಬಂಧಿಸುವಲ್ಲಿ ತನಿಖಾಧಿಕಾರಿಗಳು ಸ್ವತಂತ್ರರು ಎಂದು ಕೋರ್ಟ್​ ಹೇಳಿತ್ತು. ಅವಶ್ಯವಿದ್ದಲ್ಲಿ ಬಂಧಿಸುವ ಸಾಧ್ಯತೆ ಇದ್ದು, ಶ್ರವಣ್​ ಮತ್ತು ನರೇಶ್​ ಕಥೆ ಏನಾಗುತ್ತೆ ಎಂಬ ಕುತೂಹಲ ಹೆಚ್ಚಿದೆ.

    ಅಶ್ಲೀಲ ಸಿಡಿ ಬಯಲಾಗುತ್ತಿದ್ದಂತೆ ನರೇಶ್​ ಮತ್ತು ಶ್ರವಣ್​ ವಿರುದ್ಧ ರಮೇಶ್​ ಜಾರಕಿಹೊಳಿ ಹನಿಟ್ರ್ಯಾಪ್​ ಮತ್ತು ಬ್ಯ್ಲಾಕ್​ಮೇಲ್​ ಆರೋಪ ಮಾಡಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು.

    ಮಗಳ ಮದ್ವೆ ತಪ್ಪಿಸಲು ಪ್ರಿಯಕರನೊಂದಿಗೆ ಸೇರಿ ಭಾವಿ ಅಳಿಯನ ತಂದೆಯನ್ನೇ ಕೊಂದ ತಾಯಿ!

    ರೇಣುಕಾಚಾರ್ಯ ಮೇಲೆ ಕೇಸ್​ ದಾಖಲಿಸಲು ಮುಂದಾದ ತಹಸೀಲ್ದಾರ್​ ವಿರುದ್ಧ ಕರೊನಾ ಸೋಂಕಿತರ ಪ್ರತಿಭಟನೆ

    ನನ್ನ ಪತ್ನಿ ಪರಪುರುಷನೊಂದಿಗೆ ಓಡಿಹೋಗಿದ್ದಾಳೆ… ಎಂದವನ ಅಜ್ಜಿ ಹೊಲದಲ್ಲಿ ಅಡಗಿತ್ತು ಭಯಾನಕ ರಹಸ್ಯ!

    ಸಿಂಧೂರಿ ಪರ ಮೈಸೂರಲ್ಲಿ ಸಹಿ ಸಂಗ್ರಹ ಅಭಿಯಾನ: ಮತ್ತೆ ಜಿಲ್ಲಾಧಿಕಾರಿಯನ್ನಾಗಿ ನೇಮಿಸಲು ಒತ್ತಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts