More

    ಬೆಳಗಾವಿಯಲ್ಲಿ ಹೆಣ್ಣು ಮಗುವಿನ ಹೊಟ್ಟೆ, ಮರ್ಮಾಂಗ ಸುಟ್ಟರು! ಬೆಚ್ಚಿಬೀಳಿಸುತ್ತೆ ಇವರ ಕ್ರೂರತನ

    ಕೊಕಟನೂರ(ಬೆಳಗಾವಿ): ಥೂ, ಎಂತಹ ಕ್ರೂರ ಜನರಿದ್ದಾರೆ ಗೊತ್ತಾ? ಹಾಲುಗಲ್ಲದ ಕಂದಮ್ಮನ ಹೊಟ್ಟೆ, ಮರ್ಮಾಂಗವನ್ನೇ ಸುಟ್ಟಿ ವಿಕೃತಿ ಮೆರೆದಿದ್ದಾರೆ. ಅಷ್ಟೇ ಅಲ್ಲ, ಕಿಡಿಗೇಡಿಗಳು ಆ ಮಗುವನ್ನ ಪೊದೆಯಲ್ಲಿ ಬಿಸಾಕಿ ಹೋಗಿದ್ದಾರೆ.

    ಇಂತಹ ಅಮಾನವೀಯ ಘಟನೆ ಹಲ್ಯಾಳ ಗ್ರಾಮದ ಕೃಷ್ಣಾ ನದಿ ದಡದ ಜಾಬಗೌಡರ ತೋಟದ ವಸತಿ ಪ್ರದೇಶದಲ್ಲಿ ಗುರುವಾರ ಕಂಡು ಬಂದಿದೆ. ಅಂದಾಜು 1 ವರ್ಷದ ಹೆಣ್ಣು ಮಗುವಿನ ಮೇಲೆ ವಿಕೃತವಾಗಿ ಹಲ್ಲೆ ನಡೆಸಿ, ಎಸೆದು ಹೋಗಿದ್ದಾರೆ.

    ಹೊಟ್ಟೆ ಹಾಗೂ ಮರ್ಮಾಂಗ ಜಾಗದಲ್ಲಿ ಸುಟ್ಟ ಗುರುತು ಪತ್ತೆಯಾಗಿದೆ. ಸಾರ್ವಜನಿಕರು ಮಗುವನ್ನು ರಕ್ಷಿಸಿ, ಚಿಕಿತ್ಸೆಗಾಗಿ ಅಥಣಿ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

    ಈ ಮಗುವಿನ ಪಾಲಕರು ಯಾರೆಂದು ತಿಳಿದುಬಂದಿಲ್ಲ. ವಾಮಾಚಾರ ಅಥವಾ ಅತ್ಯಾಚಾರ ಮಾಡುವ ಉದ್ದೇಶದಿಂದ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠ ಲಕ್ಷ್ಮಣ ನಿಂಬರಗಿ ಗುರುವಾರ ಸಂಜೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

    ಪದೇಪದೆ ಸರ್ಪಗಳು ಬರುತ್ತಿವೆ… ಎಂದು ಮನೆಯಲ್ಲಿ ಬಾವಿ ತೋಡಿದ ದಂಪತಿ! ವಾರದ ಬಳಿಕ ಕಾದಿತ್ತು ಶಾಕ್​

    ಟ್ಯೂಷನ್​ ಮುಗಿಸಿ ಮನೆಗೆ ಬಂದ ಬಾಲಕ ಚೀರಾಡುತ್ತಾ ಹೊರ ಓಡಿದ… ಒಳಹೊಕ್ಕ ಸ್ಥಳೀಯರಿಗೆ ಕಾದಿತ್ತು ಶಾಕ್​!

    ಬೇಲೂರಿನ ಪ್ರೇಮಿಗಳು ಶಿವಮೊಗ್ಗದಲ್ಲಿ ಪತ್ತೆ! ಪ್ರಿಯಕರ ವಾಹನದಿಂದ ಜಿಗಿಯುತ್ತಿದ್ದಂತೆ ಪ್ರೇಯಸಿ ಹೈಡ್ರಾಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts