More

    ಗುದನಾಳಕ್ಕೆ ಏರ್‌ಪ್ರೆಶರ್‌ನಿಂದ ಗಾಳಿ ಬಿಟ್ಟ ಸ್ನೇಹಿತ: ಕರುಳು ಛಿದ್ರವಾಗಿ ಯುವಕ ಸಾವು

    ಬೆಂಗಳೂರು: ತಮಾಷೆ ಮಾಡಲು ಹೋಗಿ ತನ್ನ ಸ್ನೇಹಿತನ ಪ್ರಾಣವನ್ನೇ ತೆಗೆದ ವ್ಯಕ್ತಿಯೊಬ್ಬ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
    ಗುದನಾಳಕ್ಕೆ ಏರ್ ಪ್ರೆಶರ್ ಪೈಪ್‌ನಿಂದ ಗಾಳಿ ಬಿಟ್ಟ ಪರಿಣಾಮ ಒತ್ತಡ ಹೆಚ್ಚಾಗಿ ದೇಹದೊಳಗಿನ ಕರುಳು ಛಿದ್ರವಾಗಿ ಯುವಕ ಸಾವನ್ನಪ್ಪಿದ್ದಾನೆ. ಯೋಗೇಶ್ (೨೪) ಮೃತಪಟ್ಟ ಯುವಕ. ಈ ಘಟನೆಗೆ ಕಾರಣನಾದ ಆರೋಪಿ ಮುರುಳಿ (೨೫) ಎಂಬಾತನನ್ನು ಬಂಧಿಸಲಾಗಿದೆ. ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾ. ೨೫ ರಂದು ಈ ಘಟನೆ ನಡೆದಿದ್ದು, ಮೃತನ ಸಹೋದರ ನೀಡಿದ ದೂರನ್ನು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
    ಮೃತ ಯೋಗೇಶ್ ಡೆಲವರಿ ಏಜೆಂಟ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಮೂಲತಃ ದೇವನಹಳ್ಳಿ ತಾಲೂಕಿನವನಾಗಿದ್ದು, ಧಣಿಸಂದ್ರದ ಅಜ್ಜಿಮನೆಯಲ್ಲಿ ವಾಸವಾಗಿದ. ಏಪ್ರಿಲ್ನಲ್ಲಿ ಈತನ ಸಹೋದರಿಗೆ ವಿವಾಹ ನಿಶ್ಚಿತವಾಗಿತ್ತು. ಹೀಗಾಗಿ ಮದುವೆ ಕೆಲಸ-ಕಾರ್ಯಗಳಿಗಾಗಿ ಓಡಾಡುತ್ತಿದ್ದ. ಮಾ. ೨೫ರ ಸಂಜೆ ಧಣಿಸಂದ್ರದ ಸಿಎನ್‌ಎಸ್ ಕಾರ್ ಸ್ಪಾ ಸರ್ವೀಸ್ ಸೆಂಟರ್‌ಗೆ ಬೈಕನ್ನು ಸರ್ವೀಸ್ ಮಾಡಿಸಲು ಹೋಗಿದ್ದ. ಈ ಸೆಂಟರ್‌ನಲ್ಲಿ ಸ್ನೇಹಿತ ಮುರುಳಿ ಕೆಲಸ ಮಾಡುತ್ತಿದ್ದ್ದ. ತಮಾಷೆ ಮಾಡಲು ಹೋಗಿ ಮೊದಲು ಮುಖಕ್ಕೆ ಏರ್ ಪ್ರೆಶರ್ ಬಿಟ್ಟಿದ್ದ ನಂತರ ಬರ್ಮೋಡ ರೀತಿಯ ಬಟ್ಟೆ ಹಾಕಿಕೊಂಡಿದ್ದ ನಿಂತಿದ್ದ ಯೋಗೇಶ್‌ಗೆ ಮುರುಳಿ ಹಿಂದೆಯಿಂದ ತೆರಳಿ ಏಕಾಏಕಿ ಆತನ ಗುದನಾಳಕ್ಕೆ ಏರ್ ಪ್ರೆಶರ್‌ನಿಂದ ಗಾಳಿ ಬಿಟ್ಟಿದ್ದಾನೆ. ಗಾಳಿಯ ಒತ್ತಡ ಹೆಚ್ಚಾಗಿ ದೇಹದ ಕರುಳು ಸ್ಫೋಟಗೊಂಡು ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಕೂಡಲೇ ಮುರುಳಿಯನ್ನು ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಯೊಗೇಶ್ ಸಾವನ್ನಪ್ಪಿದ್ದಾನೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿ ಮುರುಳಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts