ಬೆಂಗಳೂರು: ಕುಂಬಳಗೋಡು ಪೊಲೀಸ್ ಠಾಣೆ ವ್ಯಾಪ್ತಿಯ ಸನ್ ವರ್ತ್ ಅಪಾರ್ಟ್ಮೆಂಟ್ನಲ್ಲಿ ಸ್ಯಾಂಡಲ್ವುಡ್ನ ಸಹ ನಟಿ ಸವಿ ಮಾದಪ್ಪ(25) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೂ ಮುನ್ನ ಮನದ ನೋವನ್ನು ಎಳೆಎಳೆಯಾಗಿ ಅಕ್ಷರಕ್ಕಿಳಿಸಿದ್ದಾರೆ. ಸವಿ ಮಾದಪ್ಪ(ಸೌಜನ್ಯ) ಸತ್ತದ್ದು ಸೆ.30 ರಂದು. ಆದರೆ, ಸಾಯೋಕೆ 3 ದಿನದ ಹಿಂದೆಯೇ ನಿರ್ಧರಿಸಿದ್ದರು ಎಂಬುದಕ್ಕೆ ಡೆತ್ನೋಟ್ ಸಾಕ್ಷೀಕರಿಸಿದೆ. ನಾಲ್ಕು ಪುಟದ ಡೆತ್ನೋಟ್ ಪೈಕಿ ಮೊದಲ ಪುಟದಲ್ಲಿ ಸೆ.27ರ ದಿನಾಂಕ ನಮೂದಾಗಿದೆ. 2ನೇ ಪುಟದಲ್ಲಿ ಸೆ.28 ಇದೆ. ಕೊನೇ ಪುಟದಲ್ಲಿ 2021ರ ಸೆಪ್ಟೆಂಬರ್ 30 ಎಂದಿದೆ!
ದೊಡ್ಡಬೆಲೆ ಬಳಿಯ ಸನ್ವರ್ತ್ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದ ಸವಿ ಮಾದಪ್ಪ, ಇಂದು(ಸೆ.30) ಬೆಳಗ್ಗೆ ತನ್ನ ಗೆಳೆಯನಿಗೆ ತಿಂಡಿ ತರುವಂತೆ ಹೇಳಿದ್ದರು. ಆತ ಹೊರ ಹೋದ ಬಳಿಕ ಸವಿ ಮಾದಪ್ಪ ನೇಣುಬಿಗಿದುಕೊಂಡು ಸತ್ತಿದ್ದಾರೆ. ಗೆಳೆಯ ವಿವೇಕ್ ತಿಂಡಿ ತೆಗೆದುಕೊಂಡು ವಾಪಸ್ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಕುಂಬಳಗೂಡು ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದು, ಮನೆಯಲ್ಲಿ ಇಂಗ್ಲಿಷ್ನಲ್ಲಿ ಬರೆದಿದ್ದ ಡೆತ್ನೋಟ್ ಸಿಕ್ಕಿದೆ.
‘ಅಪ್ಪ-ಅಮ್ಮ ನನ್ನನ್ನು ಕ್ಷಮಿಸಿ. ನಾನು ನಿಮ್ಮಿಬ್ಬರನ್ನೂ ತುಂಬಾ ಪ್ರೀತಿಸುವೆ. ಸದ್ಯ ನನ್ನ ಮನಸ್ಥಿತಿ ಸರಿ ಇಲ್ಲ. ನಾನು ಸಾವಿನ ಮನೆಗೆ ಹೋಗುತ್ತಿದ್ದೇನೆ. ನನ್ನ ಸಾವಿಗೆ ಯಾರೂ ಕಾರಣರಲ್ಲ. ನನ್ನ ಸಾವಿಗೆ ನಾನೇ ಕಾರಣ. ಅಮ್ಮನನ್ನು ಚೆನ್ನಾಗಿ ನೋಡಿಕೋ ಅಪ್ಪಾ, ನನ್ನ ಮಾನಸಿಕ ಆರೋಗ್ಯ ಅಷ್ಟಾಗಿ ಚೆನ್ನಾಗಿಲ್ಲ. ನಾನು ಏನನ್ನೂ ಸಾಧಿಸಲಿಲ್ಲ. ಅದಕ್ಕೂ ಮೊದಲೇ ಸಾಯುತ್ತಿರುವೆ. ನನ್ನನ್ನು ಕ್ಷಮಿಸಿ’ ಎಂದು ಸ್ನೇಹಿತರು ಮತ್ತು ಸಹೋದರರ ಹೆಸರನ್ನೂ ಬರೆದು ಕ್ಷಮೆ ಕೋರಿದ್ದಾರೆ. ಪದೇಪದೆ ‘pappa and mamma i love u, sorry pappa-mamma’ ಎಂದು ಡೆತ್ನೋಟ್ನಲ್ಲಿ ಬರೆದಿದ್ದಾರೆ. ‘ಶೀಘ್ರದಲ್ಲೇ ಊರಿಗೆ ಬರುವೆ ಎಂದಿದ್ದೆ. ನಾನು ಈ ರೀತಿ ಬರುತ್ತೇನೆ ಅಂದುಕೊಂಡಿರಲಿಲ್ಲ. ದಯವಿಟ್ಟು ಕ್ಷಮಿಸಿ’ ಎಂದೂ ಸವಿ ಮಾದಪ್ಪ ಮನವಿ ಮಾಡಿದ್ದಾರೆ.
ಆತ್ಮಹತ್ಯೆಗೂ ಮುನ್ನಾ ದಿನ ಅಂದ್ರೆ ಸೆ.29ರಂದು ಇನ್ಸ್ಟಾಗ್ರಾಂನಲ್ಲಿ ತನ್ನ ಫೋಟೋ ಅಪ್ಲೋಡ್ ಮಾಡಿಕೊಂಡಿದ್ದ ಸವಿ ಮಾದಪ್ಪ, ‘ಯಾರನ್ನೂ ಕೀಳಾಗಿ ಕಾಣಬೇಡಿ. ನಗುವ ವ್ಯಕ್ತಿಗಳ ಹಿಂದೆಯೂ ಸಾಕಷ್ಟು ನೋವು ತುಂಬಿರುತ್ತೆ. ಇದು ಮೇಲ್ನೋಟಕ್ಕೆ ಯಾರಿಗೂ ತಿಳಿದಿರಲ್ಲ’ ಎಂದು ಬರೆದು ಹ್ಯಾಪಿನೆಸ್, ಸ್ಯಾಡ್ನೆಸ್ ಹ್ಯಾಶ್ ಟ್ಯಾಗ್ ಹಾಕಿದ್ದರು.
ಕೊಡಗು ಜಿಲ್ಲೆ ಕುಶಾಲನಗರ ಮೂಲದ ಸವಿ ಮಾದಪ್ಪ, ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು. ಚೌಕಟ್ಟು, ಫನ್ ಚಿತ್ರಗಳಲ್ಲೂ ಬಣ್ಣ ಹಚ್ಚಿದ್ದರು. ಕೆಲ ಧಾರಾವಾಹಿಗಳಲ್ಲಿ ಸಹನಟಿಯಾಗಿ ಬಣ್ಣ ಹಚ್ಚಿದ್ದ ಯುವ ನಟಿ ಸವಿ ಮಾದಪ್ಪ ಇತ್ತೀಚಿಗೆ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.
ಇತ್ತೀಚಿಗೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ವೊಂದನ್ನು ಹಾಕಿದ್ದ ಸೌಜನ್ಯ, ‘ನಿಮ್ಮ ಜೀವನ ಹಾಗೂ ಗುರಿ ಬಗ್ಗೆಯೇ ಹೆಚ್ಚು ಫೋಕಸ್ ಮಾಡಿದ್ರೆ ನೀವು ನಿಮ್ಮ ಬದುಕಲ್ಲಿ ಹಲವರನ್ನು ಕಳೆದುಕೊಳ್ಳಬೇಕಾಗುತ್ತದೆ’ ಎಂದೂ ಬರೆದುಕೊಂಡಿದ್ದರು.
ಗಂಡಂದಿರನ್ನ ಕಳ್ಕೊಂಡು ತವರಿಗೆ ಬಂದ ಮಗಳ ಕಣ್ಣಿಗೆ ಬಿತ್ತು ತಾಯಿ-ದೊಡ್ಡಪ್ಪನ ಲವ್ವಿಡವ್ವಿ… ಮುಂದಾಗಿದ್ದು ದುರಂತ
ಲಕ್ಷ್ಮೀ ಹೆಬ್ಬಾಳ್ಕರ್ಗೆ ರಾತ್ರಿ ರಾಜಕೀಯ ಚೆನ್ನಾಗಿ ಗೊತ್ತು: ಬಿಜೆಪಿ ಮಾಜಿ ಶಾಸಕರ ವಿವಾದಾತ್ಮಕ ಹೇಳಿಕೆ
ಪ್ರಿಯಕರನ ಕೊಲ್ಲಲು ಮತ್ತೊಬ್ಬನೊಂದಿಗೆ ವಿವಾಹಿತೆಯ ಕಾಮದಾಟ: ಬೆಚ್ಚಿಬೀಳಿಸುತ್ತೆ ಇವಳ ಅಸಲಿ ಮುಖ!