More

    ಪ್ರಿಯತಮೆಯ ದೇಹವನ್ನು 35 ತುಂಡು ಮಾಡಿದ ಪ್ರಿಯಕರ; ಅಪರಾತ್ರಿ ಗುಟ್ಟಾಗಿ ಒಂದೊಂದೇ ಪೀಸ್ ವಿಲೇವಾರಿ…!

    ನವದೆಹಲಿ: ಡೇಟಿಂಗ್​ನಲ್ಲಿದ್ದಾಗ ಹುಡುಗಿ ತನ್ನ ಪ್ರಿಯಕರನ ಬಳಿ ಹೇಳಿದ್ದಿಷ್ಟೇ… ನನ್ನನ್ನು ವಿವಾಹವಾಗೆಂದು. ಆದರೆ ಹುಡುಗ ಮಾತ್ರ ಮದುವೆಯಾಗಲು ತಿರಸ್ಕರಿಸಿದ್ದಾನೆ. ಈ ವಿಚಾರವಾಗಿ ಡೇಟಿಂಗ್ ಜೋಡಿಗಳ ನಡುವೆ ಆರಂಭವಾದ ಗಲಾಟೆ ಯುವತಿಯ ಭೀಕರ ಕೊಲೆಯ ಮೂಲಕ ಅಂತ್ಯವಾಗಿದೆ.

    ಇದೀಗ ಯುವತಿಯ ಕೊಲೆಯ ಸುದ್ದಿ ಕೇಳುತ್ತಿದ್ದಂತೆ ಎಲ್ಲರೂ ಬೆಚ್ಚಿ ಬಿದ್ದಿದ್ದಾರೆ. ತನ್ನ ಜೊತೆಗೆ ಡೇಟಿಂಗ್ ಮಾಡುತ್ತಿದ್ದ ಯುವತಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಆರೋಪಿ ಅಫ್ತಾನ್ ಅಮೀನ್. ಇದಷ್ಟೇ ಅಲ್ಲದೇ, ಮೃತದೇಹವನ್ನು 35 ತುಂಡುಗಳನ್ನಾಗಿ ಮಾಡಿ ಮನೆಯ ಫ್ರಿಡ್ಜ್​ನಲ್ಲಿಟ್ಟಿದ್ದಾನೆ. ನಂತರ ಬೆಳಗ್ಗೆ 2 ಗಂಟೆಗೆ ಎದ್ದು, 18 ದಿನಗಳ ಅಂತರದಲ್ಲಿ ಯಾರ ಅರಿವಿಗೂ ಬಾರದಂತೆ ದೆಹಲಿಯ ವಿವಿಧ ಕಡೆಗಳಲ್ಲಿ ಮೃತದೇಹದ ವಿವಿಧ ಭಾಗಗಳನ್ನು ಎಸೆದಿದ್ದಾನೆ. ಇದೀಗ ಆರೋಪಿಯನ್ನು ಬಂಧಿಸುವಲ್ಲಿ ದೆಹಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ಕೊಲೆಯಾದ ಶ್ರದ್ಧಾ ಮತ್ತು ಅಫ್ತಾನ್ ಅಮೀನ್ ಎಂಬಾತ ಲಿವಿಂಗ್ ಇನ್ ರಿಲೇಷನ್​ನಲ್ಲಿ ಕೆಲವು ಸಮಯದಿಂದ ಒಟ್ಟಾಗಿದ್ದರು. ಶ್ರದ್ಧಾ ದೆಹಲಿಯ ಅಂತಾರಾಷ್ಟ್ರೀಯ ಕಂಪೆನಿಯೊಂದರ ಉದ್ಯೋಗಿ. ಅಲ್ಲಿ ಪರಿಚಯವಾದ ಹುಡುಗ ಅಫ್ತಾನ್ ಅಮೀನ್. ಇಬ್ಬರ ಪರಿಚಯ ನಿಧಾನವಾಗಿ ಪ್ರೀತಿಯತ್ತ ತಿರುಗಿದೆ. ನಂತರ ಇಬ್ಬರೂ ಪರಸ್ಪರ ಒಪ್ಪಿಗೆಯೊಂದಿಗೆ ಡೇಟಿಂಗ್ ಮಾಡುತ್ತಿದ್ದರು.

    ಮನೆಯವರ ವಿರೋಧ ಲೆಕ್ಕಿಸದೇ ಮುಸ್ಲಿಂ ಯುವಕನ ಜತೆ ಹೋದ ಯುವತಿಯ ಗತಿ ಏನಾಯ್ತು ನೋಡಿ!

    ಶ್ರದ್ಧಾ ಮತ್ತು ಅಫ್ತಾನ್ ತಮ್ಮ ಪ್ರೀತಿಯನ್ನು ಪೋಷಕರಿಗೆ ತಿಳಿಸಿದ್ದಾರೆ. ಆದರೆ ಇವರಿಬ್ಬರ ಪ್ರೀತಿಯನ್ನು ಮನೆಯವರು ಒಪ್ಪಿಲ್ಲ. ಈ ವೇಳೆ ಇಬ್ಬರೂ ಮನೆಯಿಂದ ಹೊರಬಂದು ದೆಹಲಿಯ ಫ್ಲಾಟ್ ಒಂದರಲ್ಲಿ ಒಟ್ಟಾಗಿ ವಾಸಿಸುತ್ತಿದ್ದರು. ಈ ವೇಳೆ ಇಬ್ಬರ ನಡುವೆ ಬಿರುಕು ಮೂಡಿದೆ.

    ಪೊಲೀಸ್ ಮಾಹಿತಿಯ ಪ್ರಕಾರ, ಕಳೆದ ಮೇ ತಿಂಗಳಿನಲ್ಲಿ ಇಬ್ಬರ ನಡುವೆ ಜಗಳ ಆಗಿತ್ತು. ನಂತರದಲ್ಲಿ ಅಫ್ತಾಬ್ ಅಮೀನ್ ಶ್ರದ್ಧಾಳನ್ನು ಕೊಲೆ ಮಾಡಿದ್ದಾನೆ. ಕೊಲೆಯಾದ ನಂತರ ಆಕೆಯ ದೇಹವನ್ನು 35 ತುಂಡುಗಳನ್ನಾಗಿ ಮಾಡಿ, ಮನೆಯ ಫ್ರಿಡ್ಜ್​​ನಲ್ಲಿಟ್ಟಿದ್ದಾನೆ.

    ಶ್ರದ್ಧಾಳನ್ನು ಕೊಲೆ ಮಾಡಿ, ದೇಹದ ತುಂಡುಗಳನ್ನು ಫ್ರಿಡ್ಜ್​ನಲ್ಲಿಟ್ಟಿದ್ದ ಆರೋಪಿ, ಮುಂದಿನ 18 ದಿನಗಳಲ್ಲಿ ದೆಹಲಿಯ ವಿವಿಧ ಸ್ಥಳಗಳಲ್ಲಿ ದೇಹದ ತುಂಡುಗಳನ್ನು ಎಸೆದಿದ್ದಾನೆ. ಬೆಳಗ್ಗೆ 2 ಗಂಟೆಗೆ ಯಾರಿಗೂ ಗೊತ್ತಾಗದ ರೀತಿ ಮೃತದೇಹದ ತುಂಡುಗಳನ್ನು ಮನೆಯಿಂದ ಹೊರಸಾಗಿಸಿದ್ದಾನೆ.

    26 ವರ್ಷದ ಶ್ರದ್ಧಾ ತನ್ನ ಕುಟುಂಬದ ಫೋನ್ ಕರೆಗಳಿಗೆ ಪ್ರತಿಕ್ರಿಯಿಸದೇ ಇರುವುದನ್ನು ಅರಿತ ಪೋಷಕರು, ಮಗಳನ್ನು ನೋಡಲೆಂದು ದೆಹಲಿಯಲ್ಲಿ ತಂಗಿದ್ದ ಫ್ಲಾಟ್​ಗೆ ಬಂದಿದ್ದಾರೆ. ಈ ವೇಳೆ ಅಲ್ಲಿ ಮಗಳು ಇರದಿರುವುದನ್ನು ಅರಿತ ಪೋಷಕರು, ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಅಪಹರಣದ ಆರೋಪದಲ್ಲಿ ದೂರು ದಾಖಲಿಸಿಕೊಂಡು, ಅಫ್ತಾಬ್ ಅಮೀನ್​ನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಶ್ರದ್ಧಾ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ.

    ನಾವಿಬ್ಬರು ಡೇಟಿಂಗ್​ನಲ್ಲಿದ್ದೆವು. ಈ ವೇಳೆ ಶ್ರದ್ಧಾ ನನ್ನನ್ನು ಮದುವೆಯಾಗು ಎಂದು ಪ್ರತಿದಿನ ಒತ್ತಾಯಿಸುತ್ತಿದ್ದಳು. ಇದು ನಮ್ಮಬ್ಬರ ನಡುವೆ ಹಲವು ಬಾರಿ ಜಗಳಕ್ಕೆ ಕಾರಣವಾಗಿತ್ತು. ಈ ವೇಳೆ ಕೊಲೆ ನಡೆದಿದೆ ಎಂದು ಆರೋಪಿ ಅಫ್ತಾಬ್ ಅಮೀನ್​ ತನಿಖೆಯ ವೇಳೆ ಹೇಳಿಕೊಂಡಿದ್ದಾನೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts