ಮಂಗಳೂರು: ಕೋವಿಡ್ ಸೋಂಕಿಗೆ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ನೋವಿನಲ್ಲೇ ಬಂದು ಮೃತದೇಹ ಪಡೆದ ಸಂಬಂಧಿಕರಿಗೆ ಅಂತ್ಯಸಂಸ್ಕಾರಕ್ಕೂ ಮುನ್ನ ಶಾಕ್ ಕಾದಿತ್ತು. ಇದು ತಮ್ಮವರದ್ದಲ್ಲ, ಬೇರೆ ಯಾರದ್ದೋ ಎಂದು ಗೊತ್ತಾಗುತ್ತಿದ್ದಂತೆ ಕಕ್ಕಾಬಿಕ್ಕಿಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು (ಸೋಮವಾರ) ಸಂಭವಿಸಿದೆ.
ಸುರತ್ಕಲ್ನ ರೀಜೆಂಟ್ ಪಾರ್ಕ್ನ ಜಗದೀಶ್ ಶೆಟ್ಟಿ(65) ಎಂಬುವವರು ಕೋವಿಡ್ ಸೋಂಕಿನಿಂದ ಸುರತ್ಕಲ್ನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಶವವನ್ನು ಮೃತರ ಕುಟುಂಬಸ್ಥರಿಗೆ ಆಸ್ಪತ್ರೆಯವರು ಹಸ್ತಾಂತರಿಸಿದ್ದರು.
ಆದರೆ ಮೃತದೇಹದಲ್ಲಿ ಕಾರ್ಕಳದ ಸುಧಾಕರ ಶೆಟ್ಟಿ ಹೆಸರಿರುವುದನ್ನ ಜಗದೀಶ್ರ ಕುಟುಂಬಸ್ಥರ ಗಮನಕ್ಕೆ ಬಂದಿದ್ದು, ಮೃತದೇಹ ಅದಲು-ಬದಲು ಆಗಿರುವುದು ಗೊತ್ತಾಗಿದೆ. ಕೂಡಲೇ ಈ ಬಗ್ಗೆ ಆಸ್ಪತ್ರೆಯವರ ಗಮನಕ್ಕೆ ತಂದರು. ಅಷ್ಟರಲ್ಲಿ ಜಗದೀಶ್ ಶೆಟ್ಟಿ ಅವರ ಮೃತದೇಹವನ್ನು ಸುಧಾಕರ ಶೆಟ್ಟಿ ಶವ ಎಂದು ಕಾರ್ಕಳಕ್ಕೆ ತೆಗೆದುಕೊಂಡು ಹೋಗಲಾಗಿತ್ತು.
ಅಂತ್ಯಸಂಸ್ಕಾರಕ್ಕೂ ಮುನ್ನವೇ ವಿಚಾರ ಗೊತ್ತಾಗುತ್ತಿದ್ದಂತೆ ವಾಪಸ್ ಜಗದೀಶ್ ಶೆಟ್ಟಿ ಶವವನ್ನು ಸುರತ್ಕಲ್ನ ಆಸ್ಪತ್ರೆಗೆ ತರಲಾಯಿತು.
ತಾಯಿ ಗರ್ಭದಿಂದ ಮಗುವಿನ ಕಾಲು ಹೊರ ಬಂದಿದೆ.. ಯಾರಾದರೂ ಹೆರಿಗೆ ಮಾಡಿ… ಆಸ್ಪತ್ರೆ ಬಾಗಿಲಲ್ಲಿ ಕುಟುಂಬಸ್ಥರ ಆಕ್ರಂದನ
ಕರೊನಾದಿಂದ ಶಿಕ್ಷಕ ಸಾವು, ಪಿಪಿಇ ಕಿಟ್ ಧರಿಸಿ ಅಂತ್ಯಸಂಸ್ಕಾರ ನೇರವೇರಿಸಿದ ವಿದ್ಯಾರ್ಥಿಗಳು!