More

    ಕೈಯಲ್ಲಿ ಮಚ್ಚು ಹಿಡಿದು, ಗ್ರಾಪಂ ಸದಸ್ಯೆಯನ್ನ ಹೊತ್ತೊಯ್ದ ಚಿಕ್ಕಪ್ಪ! ಕತ್ತಲಲ್ಲಿ ನಡೆಯಿತು ಘೋರ ದುರಂತ

    ಮಡಿಕೇರಿ: ಸಂಬಂಧಿಕರೊಬ್ಬರ ಮಗುವಿನ ಬರ್ತ್​ ಡೇ ಪಾರ್ಟಿಗೆಂದು ತನ್ನ ಮಗಳೊಂದಿಗೆ ಹೋಗುತ್ತಿದ್ದ ಗ್ರಾಮ ಪಂಚಾಯಿತಿ ಸದಸ್ಯೆ ದುರಂತ ಅಂತ್ಯ ಕಂಡಿದ್ದು, ಈಕೆಯ ಸಾವು ಹುಟ್ಟು ಹಾಕಿರುವ ಅನುಮಾನ ಅಷ್ಟಿಷ್ಟಲ್ಲ.

    ಮಡಿಕೇರಿ ತಾಲೂಕಿನ ಚೆಂಬು ಗ್ರಾಮದಲ್ಲಿ ಕಮಲ(35) ಮತ್ತು ಇವಳ ಚಿಕ್ಕಪ್ಪ ಮುತ್ತು ಪಯಸ್ವಿನಿ(50) ಮೃತರು. ಕಮಲ ಚೆಂಬು ಗ್ರಾಮ ಪಂಚಾಯಿತಿಯ ದಬ್ಬಡ್ಕ ವಾರ್ಡ್‌ನ ಸದಸ್ಯೆ. ಈಕೆಗೆ ಮದುವೆ ಆಗಿ ಒಬ್ಬ ಮಗಳೂ ಇದ್ದಾಳೆ. ಆದರೂ ವರಸೆಯಲ್ಲಿ ಚಿಕ್ಕಪ್ಪನಾದ ಮುತ್ತು ಜತೆ ಅಕ್ರಮ ಸಂಬಂಧ ಇತ್ತಂತೆ.

    ಸೆ.15ರ ಸಂಜೆ ಸಂಬಂಧಿಕರೊಬ್ಬರ ಮನೆಗೆ ಬರ್ತ್​ ಡೇ ಪಾರ್ಟಿಗೆಂದು ಮಗಳೊಂದಿಗೆ ಕಮಲ ಹೋಗುತ್ತಿದ್ದಳು. ಮಾರ್ಗಮಧ್ಯೆ ಸಂಪಾಜೆ ಸಮೀಪದ ಪಯಸ್ವಿನಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಬಳಿ ಕಮಲಳನ್ನು ಅಡ್ಡಗಟ್ಟಿದ ಮುತ್ತು ಕೆಲಕಾಲ ವಾಗ್ವಾದ ನಡೆಸಿದ್ದ. ಜತೆಯಲ್ಲಿದ್ದ ಸಂಬಂಧಿಕರನ್ನು ಬೆದರಿಸಿ ಕಳುಹಿಸಿದ್ದ. ಬಳಿಕ ಕಮಲಾಳನ್ನು ನದಿಗೆ ತಳ್ಳಿದ್ದ. ಮತ್ತೆ ನೀರಿಗೆ ಧುಮುಕಿ ಆಕೆಯನ್ನ ಜೀವಂತವಾಗಿ ಹೆಗಲ ಮೇಲೆ ಹೊತ್ತುಕೊಂಡು ಎರಡೂವರೆ ಕಿಲೋ ಮೀಟರ್ ದೂರದವರೆಗೆ ನಡೆದುಕೊಂಡೇ ಸಾಗಿದ್ದ. ಆತನ ಕೈಯಲ್ಲಿ ಕತ್ತಿ ಇತ್ತಂದೆ. ಹಾಗಾಗಿ ಸ್ಥಳೀಯರು ಅವನ ಬಳಿ ತಕ್ಷಣಕ್ಕೆ ಹೋಗುವ ಧೈರ್ಯ ಮಾಡಿರಲಿಲ್ಲ. ಸುದ್ದಿ ಸುಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದರು. ಗ್ರಾಮಸ್ಥರೊಮದಿಗೆ ಹುಡುಕಾಟ ನಡೆಸಿದರೂ ಅವರಿಬ್ಬರೂ ಸಿಕ್ಕಿರಲಿಲ್ಲ.

    ಮರುದಿನ ಬೆಳಗ್ಗೆ ಅಂದರೆ ಸೆ,16ರ ಬೆಳಗ್ಗೆ ಅವರಿಬ್ಬರ ಶವಗಳು ಮರವೊಂದರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ. ಕಮಲಾಳನ್ನು ಕೊಂದು ಶವವನ್ನು ಮರಕ್ಕೆ ನೇತುಹಾಕಿದ ಮುತ್ತು, ಬಳಿಕ ತಾನೂ ಅದೇ ಮರಕ್ಕೆ ನೇಣುಬಿಗಿದುಕೊಂಡು ಸತ್ತಿದ್ದಾನೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ. ಮಡಿಕೇರಿ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ವರಸೆಯಲ್ಲಿ ಮಗಳು ಆಗಬೇಕಿದ್ದ ಕಮಲ ಜತೆ ಮುತ್ತು ಅಕ್ರಮ ಸಂಬಂಧ ಹೊಂದಿದ್ದ. ಇತ್ತೀಚಿಗೆ ಕಮಲಳ ಗಂಡನ ಜತೆ ಮುತ್ತುಗೆ ಗಲಾಟೆ ಆಗಿತ್ತು. ಅಂದಿನಿಂದ ಮುತ್ತು ಆಕೆಯ ಮನೆಗೆ ಬರುವುದನ್ನ ನಿಲ್ಲಿಸಿದ್ದ ಎನ್ನಲಾಗಿದೆ. ಸೆ.15ರಂದು ಆಕೆಯನ್ನ ಕಂಡ ಮುತ್ತು, ಜಗಳ ತೆಗೆದು ಕೊಂದಿದ್ದ. ಕೊನೆಗೆ ಆಕೆಯನ್ನು ಬಿಟ್ಟಿರಲಾಗದೆ, ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ತನಿಖೆ ಬಳಿಕ ಸತ್ಯಾಸತ್ಯತೆ ತಿಳಿಯಲಿದೆ.

    ಮಗುವಿಗೆ ಜನ್ಮ ನೀಡಿ ಅವಿವಾಹಿತೆ ಸಾವು: ಆ ಇಬ್ಬರಲ್ಲಿ ಮಗುವಿನ ತಂದೆ ಯಾರು? ಶಿವಮೊಗ್ಗದಲ್ಲೊಂದು ವಿಚಿತ್ರ ಲವ್ ಕೇಸ್​

    ಸಾವಿನಲ್ಲೂ ನಾಲ್ವರ ಪ್ರಾಣ ಉಳಿಸಿ ಸಾರ್ಥಕತೆ ಮೆರೆದ ಹಾವೇರಿ ಯುವತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts