ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಕೇಸ್ಗೆ ಸ್ಫೋಟಕ ತಿರುವು ಸಿಕ್ಕಿದ್ದು, ನ್ಯಾಯಾಲಯದಲ್ಲಿ ಸ್ವ-ಇಚ್ಛೆಯಿಂದ ಮರು ಹೇಳಿಕೆ ನೀಡುವುದಾಗಿ ಪೊಲೀಸರ ಮುಂದೆ ಸಿಡಿ ಲೇಡಿ ಹೇಳಿದ್ದಾಳೆ.
ನಾನು ಹೇಳುವುದು ತುಂಬಾ ಇದೆ. ನನ್ನ ಹೇಳಿಕೆ ಪರಿಗಣಿಸಿ ಎಂದು ಸಿಡಿ ಯುವತಿ ತನಿಖಾಧಿಕಾರಿ ಕವಿತಾಗೆ ಪತ್ರ ಬರೆದಿದ್ದಾಳೆ ಎಂದು ಗೊತ್ತಾಗಿದೆ. ಈ ಮೊದಲು ಸಿಡಿ ಲೇಡಿ ನೀಡಿದ್ದ ಹೇಳಿಕೆ ಪರಿಗಣಿಸದಂತೆ ಆಕೆಯ ಪೋಷಕರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ಎಸ್ಐಟಿ ಅಧಿಕಾರಿಗಳಿಗೆ ಹೈಕೋರ್ಟ್ ನೋಟಿಸ್ ನೀಡಿತ್ತು.
ಸಿಡಿ ಕೇಸ್ನ ಕಿಂಗ್ಪಿನ್ ನರೇಶ್ಗೌಡ ಮತ್ತು ಹ್ಯಾಕರ್ ಶ್ರವಣ್ ವಿರುದ್ಧವೇ ಸಿಡಿ ಲೇಡಿ ಹೇಳಿಕೆ ಕೊಟ್ಟಿದ್ದಾಳೆ ಎಂದು ಮೂಲಗಳು ತಿಳಿಸಿವೆ. ಸಿಡಿ ಲೇಡಿ ಮನವಿಯಂತೆ ಮರು ಹೇಳಿಕೆ ಕೊಡಲು ಅವಕಾಶ ಮಾಡಿಕೊಡುವಂತೆ ಎಸ್ಐಟಿ ಅಧಿಕಾರಿಗಳು ಮ್ಯಾಜಿಸ್ಟ್ರೇಟರ ಅನುಮತಿಗಾಗಿ ಕಾಯುತ್ತಿದ್ದಾರೆ.
ನಾವು ಕೆಲದಿನಗಳಿಂದ ಸಿಡಿ ಕೇಸ್ನ ಯುವತಿಯ ಸಂಪರ್ಕದಲ್ಲಿ ಇಲ್ಲ. ಆಕೆಯ ಗಟ್ಸ್ ಮೆಚ್ಚಲೇ ಬೇಕು. ನಾನು ಯಾವುದೇ ಕಾರಣಕ್ಕೂ ವಾಪಸ್ ಹೋಗಲ್ಲ. ಆಕೆಯ ಪರವಾಗಿ ವಕಾಲತ್ತು ಹಾಕಿದ್ದೇವೆ. ಈ ಬೆಳವಣಿಗೆ ಓಡಿ ನನಗೂ ಶಾಕ್ ಆಗಿದೆ ಎಂದು ಯುವತಿ ಪರ ವಕೀಲ ಜಗದೀಶ್ ಹೇಳಿದ್ದಾರೆ.
VIDEO| ಹಾವಿನ ಜತೆ ಸರಸವಾಡಲು ಹೋದ ಯುವಕ ಸಾವು! ಬೆಚ್ಚಿಬೀಳಿಸುತ್ತೆ ಈ ದೃಶ್ಯ
ರೌಡಿಶೀಟರ್ ಪತ್ನಿ ಜತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪ್ರಿಯಕರ! ಮುಂದೆ ಆಗಿದ್ದೆಲ್ಲವೂ ಅವಾಂತರ
ಬಣ್ಣ ಬಣ್ಣದ ಕಾಗೆ ಹಾರಿಸಬೇಡಿ, ಇಂಥದ್ದನ್ನೆಲ್ಲ ತುಂಬಾ ನೋಡಿದ್ದೇವೆ: ಯೋಗೇಶ್ವರ್ ವಿರುದ್ಧ ಪ್ರತಾಪ್ ಸಿಂಹ ಗರಂ
ಬಸ್ ನಿಲ್ದಾಣದಲ್ಲೇ ವಿಷ ಕುಡಿದ ಕೆಎಸ್ಆರ್ಟಿಸಿ ನೌಕರ! ನರಳಾಡುತ್ತಿದ್ದರೂ ಸಾವಿಗೆ ಕಾರಣ ಬಿಚ್ಚಿಟ್ಟ