ಚಿಕ್ಕಮಗಳೂರು: ಬಿಟ್ಟಿ ಏನಾದ್ರು ಸಿಗುತ್ತೆ ಜನರ ಕ್ಯೂ ಮೈಲಿಗಟ್ಟಲೇ ನಿಲ್ಲುತ್ತೆ. ಇನ್ನು ಪುಕ್ಕಟ್ಟೆ ಬಿಯರ್ ಅಂದ್ರೆ ಬಿಡ್ತಾರಾ? ಲಾಟಿ ಏಟಿಗೂ ಬಗ್ಗದೆ ನಾ ಮುಂದು-ತಾ ಮುಂದು ಎಂಬಂತೆ ನುಗ್ಗುತ್ತಾರೆ.
ಇಂತಹ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಎಂ.ಸಿ.ಹಳ್ಳಿ ಬಳಿ ಇಂದು(ಮಂಗಳವಾರ) ಸಂಭವಿಸಿದೆ. ಮದ್ಯದ ಬಾಟಲಿ ತುಂಬಿಕೊಂಡು ಬೆಂಗಳೂರಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದ ಲಾರಿ ಎಂ.ಸಿ.ಹಳ್ಳಿ ಬಳಿ ಅಪಘಾತಕ್ಕೀಡಾಯಿತು.
ಬಿಯರ್ ಬಾಟಲಿಗಳು ಚೆಲ್ಲಾಪಿಲ್ಲಿಯಾಗಿದ್ದವು. ಸುದ್ದಿ ತಿಳಿಯುತ್ತಿದ್ದಂತೆ ಬಿಯರ್ಗಾಗಿ ಮುಗಿಬಿದ್ದ ಜನ ಕೈಗೆ ಸಿಕ್ಕಷ್ಟು ದೋಚಿಕೊಂಡು ಹೋದರು. ಹಲವರು ಪರಸ್ಪರ ಜಗಳ ಮಾಡುತ್ತಲೇ ಲಾರಿ ಹತ್ತಿ ಬಾಟಲಿ ಎತ್ತಿಕೊಳ್ಳುವಲ್ಲಿ ಸಫಲರಾದರು.
ನೂರಾರು ಜನ ಜಮಾಯಿಸಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಒಬ್ಬೊಬ್ಬರು ನಾಲ್ಕೈದು ಬಿಯರ್ ಬಾಟಲಿ ಹಿಡಿದುಕೊಂಡು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಅಷ್ಟರಲ್ಲಿ ಸ್ಥಳಕ್ಕೆ ಬಂದ ಪೊಲೀಸರು, ಜನರನ್ನು ಚದುರಿಲು ಲಾಠಿ ಏಟು ಕೊಟ್ಟರೂ ಬಗ್ಗದ ಜನ ಕೈಗೆ ಸಿಕ್ಕಷ್ಟು ಬಿಯರ್ ಎತ್ತಿಕೊಂಡು ಹೋದರು.
ಬಿಯರ್ ಬಾಟಲಿ ಎತ್ತಿಕೊಳ್ಳಲು ಜನರು ಮುಗಿಬಿದ್ದ ದೃಶ್ಯ ನೋಡಲು ವಿಜಯವಾಣಿ ಫೇಸ್ಬುಕ್ ಲಿಂಕ್ ಅನ್ನು ಕ್ಲಿಕ್ ಮಾಡಿ https://www.facebook.com/VVani4U/videos/256304799538378
ರೌಡಿಶೀಟರ್ ಪತ್ನಿ ಜತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪ್ರಿಯಕರ! ಮುಂದೆ ಆಗಿದ್ದೆಲ್ಲವೂ ಅವಾಂತರ
ಗೃಹ ನಿರ್ಮಾಣ ಸಂಭ್ರಮಕ್ಕೆ ಕೊಳ್ಳಿ ಇಟ್ಟ ಜವರಾಯ, ಶಾಮಿಯಾನ ಅವಳಡಿಸುತ್ತಿದ್ದ ನಾಲ್ವರು ದುರ್ಮರಣ
ಪ್ರತಿಭಟನಾನಿರತ ಸಾರಿಗೆ ನೌಕರರನ್ನ ಅಟ್ಟಾಡಿಸಿ ಹೊಡೆದ ಪೊಲೀಸರು
VIDEO| ದಿನಕ್ಕೆರಡು ಬಾರಿ ಕಲ್ಲಿಗೆ ಹಾಲುಣಿಸುತ್ತಿದೆ ಹಸು! ಪುರೋಹಿತರು ಹೇಳಿದ್ದ ಭವಿಷ್ಯ ನಿಜವಾಯ್ತೆ?
ಗಂಡನ ಬಿಟ್ಟು ಅತ್ತೆಮಗನ ಜತೆ ಬಂದವಳ ಬದುಕಲ್ಲಿ ದುರಂತ! ಪ್ರಿಯಕರನಿಂದಲೇ ನಡೆಯಿತು ಘೋರ ಕೃತ್ಯ