ಬೆಂಗಳೂರು: ನಟ ಪುನೀತ್ ರಾಜ್ಕುಮಾರ್ ಅವರು ನಮ್ಮನ್ನೆಲ್ಲ ಅಗಲಿ ಇಂದಿಗೆ ಒಂದು ತಿಂಗಳು. ಆದರೆ ಅವರ ಅಗಲಿಕೆ ನೋವು ಮಾತ್ರ ಕುಟುಂಬಸ್ಥರು ಮತ್ತು ಅಭಿಮಾನಿಗಳನ್ನು ಕಾಡುತ್ತಲೇ ಇದೆ. ಅಪ್ಪುಗಾಗಿ ಮನ ಮಿಡಿಯುತ್ತಲೇ ಇದೆ. ಒಂದು ತಿಂಗಳ ಪುಣ್ಯಸ್ಮರಣೆ ಹಿನ್ನೆಲೆ ಸೋಮವಾರ ಬೆಳಗ್ಗೆ ಕಂಠೀರ ಸ್ಟುಡಿಯೋಗೆ ಆಗಮಿಸಿದ ದೊಡ್ಮನೆ ಕುಟುಂಬಸ್ಥರು ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದರು. ಅಶ್ವಿನಿ ಪುನೀತ್ ರಾಜ್ಕುಮಾರ್, ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಸೇರಿ ಕುಟುಂಬ ಸದಸ್ಯರು ದೀಪ ಬೆಳಗಿ ಭಾವುಕರಾದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಘಣ್ಣ, ಪುನೀತ್ ಮಾಡುತ್ತಿದ್ದ ಸಮಾಜಮುಖಿ ಕಾರ್ಯಗಳನ್ನು ಹೇಳಿಕೊಂಡು ಮುಂದುವರಿಸಬಾರದು. ಹಾಗೆಲ್ಲ ಮಾಡಿದ್ರೆ ಅಪ್ಪುಗೆ ದ್ರೋಹ ಮಾಡಿದ್ದಂತೆ ಎಂದರು.
ಪುನೀತ್ ಮಾಡುತ್ತಿದ್ದ ಸಮಾಜಮುಖಿ ಕಾರ್ಯಗಳನ್ನು ಹೇಳಿಕೊಂಡು ಮುಂದುವರಿಸಬಾರದು. ಅದನ್ನು ಗೊತ್ತಾಗದಂತೆಯೇ ಮಾಡಬೇಕು. ನಾವು ಏನೇ ಸಹಾಯ ಮಾಡಿದರೂ ಯಾರಿಗೂ ಗೊತ್ತಾಗದಂತೆ ಮಾಡಬೇಕು ಎಂಬುದು ಅವನ ಉದ್ದೇಶ ಆಗಿತ್ತು. ಕೆಲವೊಂದು ವಿಷಯ ಅವನೊಂದಿಗೆ ಮಣ್ಣಾಗ್ಬೇಕಂತ ಅಪ್ಪು ಅನ್ಕೊಂಡಿದ್ದ. ಕೆಲವೊಂದು ವಿಚಾರದಲ್ಲಿ ನಾವು ಸುಮ್ಮನೆ ಇದ್ದುಬಿಡಬೇಕು, ನಾನು ಏನೆಲ್ಲ ಮಾಡ್ತಿದ್ದೀವಿ ಅಂತ ಹೇಳಿಕೊಂಡು ಮಾಡಿದರೆ ಅವನಿಗೆ ದ್ರೋಹ ಮಾಡಿದಂತೆ ಆಗುತ್ತದೆ. ನಾನು ಈ ತರ ಮಾಡ್ತಿದ್ದೀವಿ ಅಂತ ನಾವು ಹೇಳಿಕೊಳ್ಳಬಾರದು. ಮುಂದೆ ಅದಾಗಿಯೇ ಜನರಿಗೆ ಗೊತ್ತಾಗಬೇಕು. ನಮ್ಮ ಕುಟುಂಬದ ಪ್ರತಿಯೊಬ್ಬರೂ ಅಪ್ಪು ಮಾಡುತ್ತಿದ್ದ ಕೆಲಸವನ್ನು ಮುಂದುವರಿಸಿಕೊಂಡು ಹೋಗ್ತಾರೆ. ಅದಕ್ಕೆ ಅವನೇ ದಾರಿ ತೋರಬೇಕು. ಅಪ್ಪುಗೇ ನಾನು ಕೇಳಿಕೊಳ್ಳುತ್ತೇನೆ. ಇದಕ್ಕೆಲ್ಲ ನೀನೇ ಒಂದು ದಾರಿ ತೋರಪ್ಪ ಎಂದು ರಾಘಣ್ಣ ಭಾವುಕರಾದರು.
ಸೇವೆಯನ್ನು ಹೀಗೆ ಮಾಡಬೇಕು ಎಂದು ಅಭಿಮಾನಿಗಳಿಗೆ ಅಪ್ಪು ತೋರಿಸಿಕೊಟ್ಟಿದ್ದಾನೆ. ಅದನ್ನೇ ನಾವೆಲ್ಲ ಮುಂದುವರಿಸಿಕೊಂಡು ಹೋಗ್ತೀವಿ ಎಂದು ರಾಘಣ್ಣ ಹೇಳಿದರು.
ವಿವಾದದ ಸುಳಿಯಲ್ಲಿ ‘ಗರುಡ ಗಮನ ವೃಷಭ ವಾಹನ’ ಸಿನಿಮಾ: ಮಾದಪ್ಪ ಭಕ್ತರಿಂದ ಆಕ್ರೋಶ
ಸ್ಕೂಟಿ ನಂಬರ್ ಪ್ಲೇಟ್ ಮೇಲೆ ‘SEX’, ಮುಜುಗರಕ್ಕೀಡಾದ ಯುವತಿ ಇದರ ಸಹವಾಸವೇ ಬೇಡ ಅಂತ ಮೂಲೆಗಿಟ್ಟಳು