More

    ರಜನಿಕಾಂತ್​ ಮಾಡಿದ ಆ ಒಂದು ಟ್ವೀಟ್​ಗೆ ಅಪ್ಪು ಅಭಿಮಾನಿಗಳು ಗರಂ!

    ಬೆಂಗಳೂರು: ನಟ ಪುನೀತ್​ ರಾಜ್​ಕುಮಾರ್​ ನಿಧನಕ್ಕೆ ಸಂತಾಪ ಸೂಚಿಸಿದ ನಟ ರಜನಿಕಾಂತ್​ ವಿರುದ್ಧ ಅಪ್ಪು ಅಭಿಮಾನಿಗಳು ಮತ್ತು ನೆಟ್ಟಿಗರು ಗರಂ ಆಗಿದ್ದಾರೆ. ‘ಈಗಲೂ ಲಾಭ ನೋಡಬೇಡಿ’, ‘ಅಪ್ಪು ಸಾವಿನಲ್ಲೂ ಲಾಭ ಮಾಡ್ತೀದ್ದೀರಿ’, ‘ನಿಮ್ಮಂಥ ದಿಗ್ಗಜ ನಟರಿಂದ ನಾವು ಇಂಥಹದ್ದನ್ನು ನಿರೀಕ್ಷಿಸಿರಲಿಲ್ಲ’… ಎಂದು ಕಮೆಂಟ್​ ಬಾಕ್ಸ್​ನಲ್ಲೇ ತಲೈವಾಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಅಷ್ಟಕ್ಕೂ ರಜನಿಕಾಂತ್​ರ ಮೇಲೆ ಅಪ್ಪು ಅಭಿಮಾನಿಗಳು ಸಿಟ್ಟಾಗಿದ್ದೇಕೆ ಗೊತ್ತಾ?

    ಡಾ.ರಾಜ್​ಕುಮಾರ್​ ಕುಟುಂಬಸ್ಥರೊಂದಿಗೆ ರಜನಿಕಾಂತ್​ ಅವರಿಗೆ ಉತ್ತಮ ಬಾಂಧವ್ಯ ಇದೆ. ‘ಅಪ್ಪು’ ಸಿನಿಮಾ 100 ದಿನಗಳ ಸಂಭ್ರಮ ಕಂಡಾಗ 2002ರಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಜನಿಕಾಂತ್​ ಅತಿಥಿಯಾಗಿ ಪಾಲ್ಗೊಂಡಿದ್ದರು. ಅಪ್ಪು ಅವರ ನಟನೆ ಅಂತರಂಗದಿಂದ ಬಂದಿದೆ ಎಂದು ರಜನಿಕಾಂತ್​ ಹಾಡಿಹೊಗಳಿದ್ದರು. ಅ.29ರಂದು ಪುನೀತ್​ ರಾಜ್​ಕುಮಾರ್​ ನಿಧನರಾದ ಸಂದರ್ಭದಲ್ಲಿ ರಜನಿಕಾಂತ್​ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿ ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿದ್ದರು. ರಜನಿಕಾಂತ್​ಗೆ ಅಪ್ಪು ನಿಧನರಾದ ಸುದ್ದಿ ತಡವಾಗಿ ಗೊತ್ತಾಗಿ ತುಂಬಾ ನೋವು ವ್ಯಕ್ತಪಡಿಸಿದ್ದರು ಎಂದು ಸ್ವತಃ ಶಿವರಾಜ್​ಕುಮಾರ್​ ಅವರೇ ಹೇಳಿಕೊಂಡಿದ್ದರು. ಅಪ್ಪು ನಿಧನರಾದ 13ನೇ ದಿನ ಅಂದರೆ ನಿನ್ನೆ(ನ.10) ರಜನಿಕಾಂತ್​ ಅವರು ಪುನೀತ್​ಗೆ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

    ರಜನಿಕಾಂತ್​ ಮಾಡಿದ ಆ ಒಂದು ಟ್ವೀಟ್​ಗೆ ಅಪ್ಪು ಅಭಿಮಾನಿಗಳು ಗರಂ!

    ‘ಪುನೀತ್​ ನನ್ನ ಕಣ್ಣಮುಂದೆ ಬೆಳೆದ ಪ್ರೀತಿ ಪಾತ್ರ ಮತ್ತು ಪ್ರತಿಭಾವಂತ ಮಗು. ಯಶಸ್ಸಿನ ಉತ್ತುಂಗದಲ್ಲಿ ಇರುವಾಗಲೇ ನಮ್ಮನ್ನು ಅಗಲಿಬಿಟ್ಟರು. ಅವರ ಕುಟುಂಬಕ್ಕೆ ಸಾಂತ್ವನ ಹೇಳಲು ಮಾತುಗಳೇ ಬರುತ್ತಿಲ್ಲ. ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಪುನೀತ್​ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ರಜನಿಕಾಂತ್ ಸಂತಾಪ ಸೂಚಿಸಿದ್ದಾರೆ. ಆದರೆ ಅವರು ಸಂತಾಪ ಸೂಚಿಸಲು ಆಯ್ಕೆ ಮಾಡಿಕೊಂಡದ್ದು ತನ್ನ ಮಗಳ hoote aap. ಮಗಳ ಆ್ಯಪ್​ ಪ್ರಮೋಟ್​ ಮಾಡುವ ಸಲುವಾಗಿ ಅದರಲ್ಲೇ ಪುನೀತ್​ಗೆ ಸಂತಾಪ ಸೂಚಿಸಿರುವುದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

    ಮಗಳು ಲಾಂಚ್​ ಮಾಡಿರುವ hoot app ಮೂಲಕ ಅಪ್ಪು ನಿಧನಕ್ಕೆ ಸಂತಾಪ ಸೂಚಿಸಿರುವ ರಜನಿಕಾಂತ್​, ಆ ಲಿಂಕ್​ ಅನ್ನು ಟ್ವಿಟರ್​ನಲ್ಲಿ ಹಾಕಿಕೊಂಡಿದ್ದಾರೆ. ‘ಬೇರೆಲ್ಲಾ ಸೋಶಿಯಲ್​ ಮೀಡಿಯಾ ಬಿಟ್ಟು ಮಗಳ ಹೂಟೆ ಆ್ಯಪ್​ ಬಳಸಿರುವುದು ಸ್ವಾರ್ಥ ಮತ್ತು ಲಾಭದ ಉದ್ದೇಶದಿಂದ. ಇಂತಹ ಸಂದರ್ಭದಲ್ಲಿಯೂ ಮಗಳ ಆ್ಯಪ್​ ಪ್ರಮೋಷನ್​ ಮಾಡಿರೋದು ಸರಿಯಲ್ಲ. ನಿಮ್ಮ ಆ್ಯಪ್​ಗೂ ಸಂತಾಪಗಳು. ನಿಮ್ಮ ಟ್ವಿಟರ್​ ಅನ್ನು ಯಾರು ಹ್ಯಾಂಡಲ್​ ಮಾಡುತ್ತಾರೆ?’ ಎಂದು ನೆಟ್ಟಿಗರು ಕಟುವಾಗಿಯೇ ಟೀಕಿಸಿದ್ದಾರೆ. ಕೆವರು ರಜನಿಕಾಂತ್​ ಪರವಾಗಿಯೂ ಕಮೆಂಟ್​ ಮಾಡಿದ್ದಾರೆ.

    hoot app ವಾಯ್ಸ್​ ಬೇಸಿಡ್​ ಆ್ಯಪ್​ ಆಗಿದ್ದು, ರಜನಿಕಾಂತ್​ ಅವರಿಗೆ ದಾದಾಸಾಹೇಬ್​ ಫಾಲ್ಕೆ ಪ್ರದಾನ ಆದ ದಿನವೇ ಈ ಆ್ಯಪ್​ ಲಾಂಚ್​ ಆಗಿತ್ತು.

    ರಾಮಯ್ಯ ಆಸ್ಪತ್ರೆಗೆ ಕರೆದೊಯ್ದಿದ್ದರೆ ಪುನೀತ್​ ಸಾಯುತ್ತಿರಲಿಲ್ಲ… ಸ್ಲೋ ಪಾಯಿಸನ್​ ಕುರಿತು ಜನರಿಗೆ ಸತ್ಯ ತಿಳಿಸಿ…

    ಪುನೀತ್​ ಬಗ್ಗೆ ಅಶ್ಲೀಲ ಪದ ಬಳಸಿ ಅವಮಾನ: ಸುದೀಪ್​ ಮಗಳು ಸಾನ್ವಿಯಿಂದ ಹಿಗ್ಗಾಮುಗ್ಗಾ ತರಾಟೆ

    ಸಂಭಾವನೆ ಪಡೆಯದೇ ಅಪ್ಪು ಅನೇಕ ಕೆಲಸ ಮಾಡ್ತಿದ್ರು.. ಪುನೀತ್​ರ ಆ ಜಾಗಕ್ಕೆ ಶಿವಣ್ಣ ಆಗ್ತಾರಾ ರಾಯಭಾರಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts