ಚನ್ನರಾಯಪಟ್ಟಣ: ಹುಟ್ಟುವ ಮಗು ಸಾಯಬಹುದು ಎಂಬ ಭಯದಲ್ಲಿ 8 ತಿಂಗಳ ಗರ್ಭಿಣಿ ಮಗು ಹುಟ್ಟುವ ಮೊದಲೇ ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನಲ್ಲಿ ಸಂಭವಿಸಿದೆ.
ಶ್ರವಣಬೆಳಗೊಳ ಹೋಬಳಿ ರಾಜಪುರ ಗ್ರಾಮದ ಮಲ್ಲಿಕಾರ್ಜುನ್ ಅವರ ಪತ್ನಿ ಶಿಲ್ಪಾ ಆತ್ಮಹತ್ಯೆ ಮಾಡಿಕೊಂಡವರು. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕು ಸಾಸಲುಕೊಪ್ಪಲು ಗ್ರಾಮದ ಶಿಲ್ಪಾಗೆ 4 ವರ್ಷದ ಹಿಂದೆ ಮಲ್ಲಿಕಾರ್ಜುನ್ ಜತೆ ವಿವಾಹ ಆಗಿತ್ತು.
ಈ ಹಿಂದೆ ಇವರಿಗೆ ಎರಡು ಬಾರಿ ಹೆಣ್ಣು ಮಗು ಜನಿಸಿದ್ದು, 17 ದಿನಗಳಲ್ಲಿಯೇ ಕಂದಮ್ಮಗಳು ಮೃತಪಟ್ಟಿದ್ದವು. ಈಗ 8 ತಿಂಗಳ ಗರ್ಭಿಣಿಯಾಗಿದ್ದ ಶಿಲ್ಪಾ, 3ನೇ ಮಗುವಿಗೆ ಜನ್ಮನೀಡಬೇಕಿತ್ತು. ಈ ಬಾರಿಯೂ ಜನಿಸುವ ಮಗು ಹೆಚ್ಚು ದಿನ ಬದುಕುವುದಿಲ್ಲವೇನೋ ಎಂಬ ಭಯದಿಂದ ಅಡುಗೆ ಮನೆಯ ಛಾವಣಿಗೆ ನೇಣುಬಿಗಿದುಕೊಂಡು ಮಂಗಳವಾರ(ಅ.5) ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮೃತಳ ಮಾವ ಬಸವರಾಜ್ ಹಿರೀಸಾವೆ ಠಾಣೆಗೆ ದೂರು ನೀಡಿದ್ದಾರೆ.
ತಹಸೀಲ್ದಾರ್ ಜೆ.ಬಿ.ಮಾರುತಿ ಸಮ್ಮುಖದಲ್ಲಿ ಚನ್ನರಾಯಪಟ್ಟಣ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಮೃತದೇಹವನ್ನು ವೀಕ್ಷಿಸಿದ ಬಳಿಕ ಮರಣೋತ್ತರ ಪರೀಕ್ಷೆ ನಡೆಸಲಾಯಿತು ಎಂದು ಹಿರೀಸಾವೆ ಠಾಣೆ ಎಸ್ಐ ಶ್ರೀನಿವಾಸ್ ತಿಳಿಸಿದ್ದಾರೆ. ಹಿರೀಸಾವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಎಸ್ವೈ ಆಪ್ತನ ಮನೆ ಮೇಲೆ ಐಟಿ ದಾಳಿ! ವಿಜಯೇಂದ್ರ, ರಾಘವೇಂದ್ರರ ವ್ಯವಹಾರದಲ್ಲೂ ಉಮೇಶನ ಕೈಚಳಕ…