More

    ಮಗು ಸಾಯುವ ಭಯದಲ್ಲಿ 8 ತಿಂಗಳ ಗರ್ಭಿಣಿ ಆತ್ಮಹತ್ಯೆ! ಈ ಸಾವಿಗೆ ಹಿಂದಿನ ದುರ್ಘಟನೆಯೇ ಕಾರಣವಾಯ್ತಾ?

    ಚನ್ನರಾಯಪಟ್ಟಣ: ಹುಟ್ಟುವ ಮಗು ಸಾಯಬಹುದು ಎಂಬ ಭಯದಲ್ಲಿ 8 ತಿಂಗಳ ಗರ್ಭಿಣಿ ಮಗು ಹುಟ್ಟುವ ಮೊದಲೇ ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನಲ್ಲಿ ಸಂಭವಿಸಿದೆ.

    ಶ್ರವಣಬೆಳಗೊಳ ಹೋಬಳಿ ರಾಜಪುರ ಗ್ರಾಮದ ಮಲ್ಲಿಕಾರ್ಜುನ್ ಅವರ ಪತ್ನಿ ಶಿಲ್ಪಾ ಆತ್ಮಹತ್ಯೆ ಮಾಡಿಕೊಂಡವರು. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕು ಸಾಸಲುಕೊಪ್ಪಲು ಗ್ರಾಮದ ಶಿಲ್ಪಾಗೆ 4 ವರ್ಷದ ಹಿಂದೆ ಮಲ್ಲಿಕಾರ್ಜುನ್ ಜತೆ ವಿವಾಹ ಆಗಿತ್ತು.

    ಈ ಹಿಂದೆ ಇವರಿಗೆ ಎರಡು ಬಾರಿ ಹೆಣ್ಣು ಮಗು ಜನಿಸಿದ್ದು, 17 ದಿನಗಳಲ್ಲಿಯೇ ಕಂದಮ್ಮಗಳು ಮೃತಪಟ್ಟಿದ್ದವು. ಈಗ 8 ತಿಂಗಳ ಗರ್ಭಿಣಿಯಾಗಿದ್ದ ಶಿಲ್ಪಾ, 3ನೇ ಮಗುವಿಗೆ ಜನ್ಮನೀಡಬೇಕಿತ್ತು. ಈ ಬಾರಿಯೂ ಜನಿಸುವ ಮಗು ಹೆಚ್ಚು ದಿನ ಬದುಕುವುದಿಲ್ಲವೇನೋ ಎಂಬ ಭಯದಿಂದ ಅಡುಗೆ ಮನೆಯ ಛಾವಣಿಗೆ ನೇಣುಬಿಗಿದುಕೊಂಡು ಮಂಗಳವಾರ(ಅ.5) ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮೃತಳ ಮಾವ ಬಸವರಾಜ್ ಹಿರೀಸಾವೆ ಠಾಣೆಗೆ ದೂರು ನೀಡಿದ್ದಾರೆ.

    ತಹಸೀಲ್ದಾರ್ ಜೆ.ಬಿ.ಮಾರುತಿ ಸಮ್ಮುಖದಲ್ಲಿ ಚನ್ನರಾಯಪಟ್ಟಣ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಮೃತದೇಹವನ್ನು ವೀಕ್ಷಿಸಿದ ಬಳಿಕ ಮರಣೋತ್ತರ ಪರೀಕ್ಷೆ ನಡೆಸಲಾಯಿತು ಎಂದು ಹಿರೀಸಾವೆ ಠಾಣೆ ಎಸ್​ಐ ಶ್ರೀನಿವಾಸ್ ತಿಳಿಸಿದ್ದಾರೆ. ಹಿರೀಸಾವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಬಿಎಸ್​ವೈ ಆಪ್ತನ ಮನೆ ಮೇಲೆ ಐಟಿ ದಾಳಿ! ವಿಜಯೇಂದ್ರ, ರಾಘವೇಂದ್ರರ ವ್ಯವಹಾರದಲ್ಲೂ ಉಮೇಶನ ಕೈಚಳಕ…

    ಮಹಾಲಯ ಅಮಾವಾಸ್ಯೆ ದಿನವೇ ದುರಂತ: ತಾಯಿ-ಮಗ ಕಾರಿನಲ್ಲೇ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts