ವಿಜಯಪುರ: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದಿಂದ 20 ಸಾವಿರ ಕಿಟ್ ಹಂಚಿಕೆಗೆ ಸಿದ್ಧತೆ ನಡೆಸಲಾಗಿದೆ.
ಭೀಮಾ ಮತ್ತು ಡೋಣಿ ತೀರದ ಕಾಳಜಿ ಕೇಂದ್ರಗಳಿಗೆ ಜಿಲ್ಲಾ ಕೇಂದ್ರದಿಂದ ಕಿಟ್ ರವಾನೆ ಮಾಡಲಾಗುತ್ತಿದೆ.
ಕಿಟ್ ನಲ್ಲಿ ಮೈಸೂರು ಸ್ಯಾಂಡಲ್ ಸೋಪ್, ಬಟ್ಟೆಗೆ ಹಚ್ಚುವ ಡಿಟರ್ಜಂಟ್, ಕೊಬ್ಬರಿ ಎಣ್ಣೆ, ಪೇಸ್ಟ್ ಇರಲಿದೆ.
ಈಗಾಗಲೇ ಕಲಬುರಗಿ, ಯಾದಗಿರಿ, ರಾಯಚೂರ ಮತ್ತಿತರ ಭಾಗಗಳಿಗೆ ರವಾನಿಸಲಾಗಿದ್ದು ಇದೀಗ ವಿಜಯಪುರಕ್ಕೆ ತಂದಿರುವುದಾಗಿ ಮಾರಾಟ ಪ್ರತಿನಿಧಿ ಅರವಿಂದ ಬನಸೋಡೆ ತಿಳಿಸಿದ್ದಾರೆ.