ಚಿತ್ರದುರ್ಗ: ಬೇಡರ ಶಿವನಕೆರೆ ರೈತ ಮಹಿಳೆಯೊಬ್ಬರಿಗೆ ಸೇರಿದ ಟ್ರಾೃಕ್ಟರ್ನ್ನು ಫೈನಾನ್ಸ್ ಕಂಪನಿಯೊಂದು ಜಪ್ತಿ ಮಾಡಿದೆ ಎಂದು ಆರೋಪಿಸಿ ರೈತರು ಆ ಕಂಪನಿ ಕಚೇರಿ ಬಳಿ ಗುರುವಾರ ಪ್ರತಿಭಟಿಸಿದರು.
ಜಪ್ತಿ ಮಾಡಿದ ಟ್ರಾಕ್ಟರ್ ಹಿಂತಿರುಗಿಸುವಂತೆ ಒತ್ತಾಯಿಸಿದರು. ಸಣ್ಣೀರಮ್ಮ ಎಂಬುವವರು ಖಾಸಗಿ ಕಂಪನಿ ಮೂಲಕ ಸಾಲ ಪಡೆದು ಟ್ರಾೃಕ್ಟರ್ ಖರೀದಿಸಿದ್ದರು. ಕಂತು ಕಟ್ಟಿಲ್ಲವೆಂದು ದೂರಿ ತಿಳಿವಳಿಕೆ ಪತ್ರ ನೀಡದೆ ಕಂಪನಿ ಟ್ರಾೃಕ್ಟರ್ ಜಪ್ತಿ ಮಾಡಿತ್ತು. ವಿಷಯ ತಿಳಿದ ರೈತ ಸಂಘದ ತಾಲೂಕು ಅಧ್ಯಕ್ಷ ಬಸ್ತಿ ಹಳ್ಳಿ ಸುರೇಶ್ಬಾಬು ಮತ್ತಿತರರ ಮುಖಂಡರು, ನಗರದ ಕಂಪನಿ ಕಚೇರಿಗೆ ಆಗಮಿಸಿ ಟ್ರಾಕ್ಟರ್ ಹಿಂತಿರುಗಿಸುವಂತೆ ಒತ್ತಾಯಿಸಿದರು.
ಈ ಪ್ರಕರಣವನ್ನು ಮೇಲಧಿಕಾರಿ ಗಮನಕ್ಕೆ ತರುತ್ತೇನೆ, ಎರಡು ದಿನ ಕಾಲಾವಕಾಶ ಕೊಡಿ ಎಂದು ಕಂಪನಿ ಅಧಿಕಾರಿ ಕೋರಿಕೆ ಮೇರೆಗೆ ರೈತರು ಪ್ರತಿಭಟನೆ ಹಿಂಪಡೆದರು.
ಮೂಖಂಡರಾದ ಸಿ.ನಾಗರಾಜ್, ಕಾಂತರಾಜ್, ಸುರೇಶ್, ಹರೀಶ್, ಮಹಾಂತೇಶ್, ರುದ್ರೇಶ್, ಮನೋಜ್, ಅಂಜಿನಿ, ಸಿದ್ದೇಶ್ ಇದ್ದರು.