More

    ಫೆ.24ಕ್ಕೆ ಸೇವಾಲಾಲ್ ಜಯಂತಿ

    ಹೊಳಲ್ಕೆರೆ: ಪಟ್ಟಣದಲ್ಲಿ ಫೆ.24ರಂದು ಸಂತ ಶ್ರೀ ಸೇವಾಲಾಲ್ ಅವರ 281ನೇ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ತಾಲೂಕು ಬಂಜಾರ ಸಂಘದ ಅಧ್ಯಕ್ಷ ಕುಮಾರ್‌ನಾಯ್ಕ ತಿಳಿಸಿದರು.

    ಒಂಟಿಕಂಬ ಮುರುಘಾ ಮಠದಲ್ಲಿ 33 ತಾಂಡಾಗಳ ಕಾರ್ಯಕರ್ತರೊಂದಿಗೆ ಸೋಮವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

    ಸಮಿತಿ ಗೌರವಾಧ್ಯಕ್ಷ-ಹಿರಿಯ ವಕೀಲ ಕೆ.ಆರ್.ಈಶ್ವರ್‌ನಾಯ್ಕ. ಅಧ್ಯಕ್ಷ-ರಾಜೇಶ್‌ನಾಯ್ಕ. ಉಪಾಧ್ಯಕರು-ವೆಂಕಟೇಶ್‌ನಾಯ್ಕ, ಆರ್.ಉಮಾಪತಿ, ಕೆ.ಟಿ.ಜಯನಾಯ್ಕ, ವಿಜಯನಾಯ್ಕ, ಬಸವರಾಜ್‌ನಾಯ್ಕ, ಪುಟ್ಟನಾಯ್ಕ, ಮೂರ್ತಿನಾಯ್ಕ, ನಿರ್ದೇಶಕರಾಗಿ ಈ.ಚಂದ್ರಾನಾಯ್ಕಾ, ಜಗದೀಶ್‌ನಾಯ್ಕ, ಬಸವರಾಜ್ ನಾಯ್ಕ, ಕುಮಾರ್ ನಾಯ್ಕ, ಸುಶೀಲಾಬಾಯಿ, ಪರಮೇಶ್ವರ್ ನಾಯ್ಕ, ಮಂಜ್ಯಾನಾಯ್ಕ, ದಿನೇಶ್‌ನಾಯ್ಕ, ಅಶೋಕ್‌ನಾಯ್ಕ ಅವರನ್ನು ನೇಮಕ ಮಾಡಲಾಯಿತು.

    ತೀಜ್ ಸಮಿತಿಗೆ ಮಂಜ್ಯಾನಾಯ್ಕ, ಮೂರ್ತಿನಾಯ್ಕ, ರಮೇಶ್ ನಾಯ್ಕ, ಸೋಮೇಶ್ ನಾಯ್ಕ, ಸಿ.ರವಿಕುಮಾರ್‌ನಾಯ್ಕ, ಸ್ತಬ್ಧಚಿತ್ರ ಸಮಿತಿಗೆ ರಂಗಸ್ವಾಮಿ, ಗೋಪಾಲನಾಯ್ಕ, ಸುಧೀರ್ ನಾಯ್ಕ, ಜಗದೀಶ್ ನಾಯ್ಕ ಇವರನ್ನು ನೇಮಕ ಮಾಡಲಾಯಿತು.

    ಎಂ.ಚಂದ್ರಾನಾಯ್ಕಾ ಸ್ವಾಗತಿಸಿದರು. ವೆಂಕಟೇಶ್ ನಾಯ್ಕ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts