ಮುಂಬೈ: ಎರಡು ತಿಂಗಳ ಹಿಂದೆ ಪತಿಯೊಂದಿಗೆ ಜಗಳವಾಡಿ ಮೂರು ಮಕ್ಕಳೊಂದಿಗೆ ಮನೆ ಬಿಟ್ಟು ಹೋಗಿದ್ದ ಮಹಿಳೆಯ ಮೃತದೇಹ ಕಾಡಿನಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಗಂಡನಿಂದಾಗಿ ನೊಂದ ಮಹಿಳೆ ತನ್ನ ಮಕ್ಕಳೊಂದಿಗೆ ನೇಣಿಗೆ ಶರಣಾಗಿರುವುದಾಗಿ ಹೇಳಲಾಗಿದೆ.
ಇದನ್ನೂ ಓದಿ: ಜಾನಪದ ಕಲಾವಿದರಿಗೆ ತಿಂಗಳಿಗೆ 5 ಸಾವಿರ ವಿದ್ಯಾರ್ಥಿವೇತನ ಘೋಷಣೆ
ಇಂತದ್ದೊಂದು ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಂಡಿ ತಾಲೂಕಿನಲ್ಲಿ ನಡೆದಿದೆ. ರಂಜನಾ (30) ಮತ್ತು ಶ್ರೀಪಥ್ ದಂಪತಿಗೆ ಮೂರು ಮಕ್ಕಳಿದ್ದರು. ಆದರೂ ಶ್ರೀಪಥ್ ರಂಜನಾಳ ದೂರದ ಸಂಬಂಧಿ ಸವಿತಾ ಜತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಈ ವಿಚಾರವಾಗಿ ದಂಪತಿಯ ಮಧ್ಯೆ ಆಗಾಗ ಜಗಳವಾಗುತ್ತಿತ್ತು. ಎರಡು ತಿಂಗಳ ಹಿಂದೆ ಶ್ರೀಪಥ್ ಸವಿತಾಳನ್ನು ಮದುವೆಯಾಗಿ ಮನೆಗೆ ಕರೆದುಕೊಂಡು ಬಂದಿದ್ದಾನೆ. ಈ ವಿಚಾರವಾಗಿ ದೊಡ್ಡ ಜಗಳವೇ ಆಗಿದೆ. ನಾಲ್ಕು ದಿನ ಅವರೊಂದಿಗೆ ರಂಜನಾ ಬದುಕಿದ್ದಾಳೆ. ಅಕ್ಟೋಬರ್ 20ರಂದು ಮತ್ತೊಮ್ಮೆ ಜಗಳವಾಡಿದ್ದು, ತನ್ನ ಮೂರು ಮಕ್ಕಳೊಂದಿಗೆ ಮನೆ ಬಿಟ್ಟು ಹೋಗಿದ್ದಾಳೆ.
ಮನೆ ಬಿಟ್ಟು ಹೋದ ರಂಜನಾ ಮತ್ತು ಮಕ್ಕಳಿಗಾಗಿ ಶ್ರೀಪಥ್ ಹುಡುಕಾಡಿದ್ದಾನೆ. ನಂತರ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿರುವ ದೂರು ದಾಖಲಿಸಿದ್ದಾನೆ. ಗುರುವಾರ ಗ್ರಾಮಸ್ಥರೊಬ್ಬರು ಕಾಡೊಳಗೆ ಕಟ್ಟಿಗೆ ತರಲು ಹೋದಾಗ ದುರ್ವಾಸನೆ ಬಂದಿದೆ. ಏನೆಂದು ಹುಡುಕಿದಾಗ ಒಂದು ಮರದಲ್ಲಿ ನಾಲ್ಕು ದೇಹಗಳು ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ. ಪೊಲೀಸರಿಗೆ ವಿಷಯ ತಿಳಿಸಿ, ಶವ ಗುರುತಿಸಲು ಶ್ರೀಪಥ್ ಮತ್ತು ಸವಿತಾರನ್ನು ಕರೆಸಲಾಗಿದೆ. ಕೊಳೆತ ಸ್ಥಿತಿಯಲ್ಲಿದ್ದ ದೇಹಗಳನ್ನು ರಂಜನಾ, ದರ್ಶನ್ (12), ರೋಹಿತ್ (9), ರೋಷಿಣಿ(6) ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ಕಾಂಗ್ರೆಸ್ ಬಿಜೆಪಿ ಒಟ್ಟಾಗಿದಾವೆ! ನಾವು ಮೈತ್ರಿ ಮುರೀತೀವೆ ಎಂದ ಮೈತ್ರಿ ಪಕ್ಷ
ಶವ ಗುರುತಿಸಿದ ಶ್ರೀಪಥ್ ದಂಪತಿ ಮನೆಗೆ ಹೋಗಿ ವಿಷ ಕುಡಿದು ಸಾಯುವ ಪ್ರಯತ್ನ ಮಾಡಿದ್ದಾರೆ. ಆದರೆ ಅಷ್ಟರಲ್ಲಿ ಸ್ಥಳಕ್ಕೆ ಬಂದ ಪೊಲೀಸರು ದಂಪತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರ ವಿರುದ್ಧ ರಂಜನಾ ಆತ್ಮಹತ್ಯೆ ಪ್ರೇರೇಪಣೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. (ಏಜೆನ್ಸೀಸ್)
8 ವರ್ಷ ಪ್ರೀತಿಸಿ ಮದುವೆಯಾದ ತಂಗಿ; ಮನೆಗೆ ಕರೆಸಿದ ಅಣ್ಣ ಎಂತಹ ಗಿಫ್ಟ್ ಕೊಟ್ಟ ಗೊತ್ತಾ?
ಮಗನಿಗೆ ನೋವಾಗಬಾರದೆಂದು ಕೊಂದೇ ಬಿಟ್ಟ! ಮಗನ ಶವದ ಜತೆಯೇ ರಾತ್ರಿ ಮಲಗಿದ