More

    92 ಕೆಜಿ ಗಾಂಜಾ ಜಪ್ತಿ, ತೆಲಂಗಾಣದ ಇಬ್ಬರ ಸೆರೆ

    ಬೀದರ್: ಅಕ್ರಮವಾಗಿ ಸಾಗಿಸುತ್ತಿದ್ದ 11 ಲಕ್ಷ ರೂ. ಮೌಲ್ಯದ 92 ಕೆಜಿ ಗಾಂಜಾವನ್ನು ಭಂಗೂರ ಬಳಿಯ ತೆಲಂಗಾಣ ಗಡಿಯಲ್ಲಿ ಶನಿವಾರ ಜಪ್ತಿ ಮಾಡಲಾಗಿದೆ. ಖಚಿತ ಮಾಹಿತಿ ಮೇರೆಗೆ ಅಬಕಾರಿ ಅಧಿಕಾರಿಗಳು ಜಹೀರಾಬಾದ್ ಕಡೆಯಿಂದ ಬಂದ ವಾಹನ ತಪಾಸಣೆ ಮಾಡಿದಾಗ 4 ಗೋಣಿ ಚೀಲಗಳಲ್ಲಿ ಗಾಂಜಾ ಪತ್ತೆಯಾಗಿದೆ. ಗಾಂಜಾವನ್ನು ತೆಲಂಗಾಣದಿಂದ ಮಹಾರಾಷ್ಟ್ರಕ್ಕೆ ಸಾಗಿಸಲಾಗುತ್ತಿತ್ತು. ಪ್ರಕರಣ ಸಂಬಂಧ ಒಂದು ವಾಹನ ಜಪ್ತಿ ಮಾಡಿ ತೆಲಂಗಾಣದ ಮೇದಕ್ ಜಿಲ್ಲೆಯ ರೇಗೋಡ್ನ ಕತಿಕ್ ಯಾದುಲ್ಲ ಖುರೇಶಿ ಹಾಗೂ ರಂಗಾರಡ್ಡಿ ಜಿಲ್ಲೆಯ ಹಿಸಾಮುದ್ದೀನ್ ಮಹ್ಮದ್ ಅವರನ್ನು ಬಂಧಿಸಲಾಗಿದೆ. ಅಬಕಾರಿ ಜಿಲ್ಲಾಧಿಕಾರಿ ಮಂಜುನಾಥ ಮಾರ್ಗದರ್ಶನದಲ್ಲಿ ಉಪ ಅಧೀಕ್ಷಕ ಆನಂದ ಉಕ್ಕಲಿ, ನಿರೀಕ್ಷಕರಾದ ಸುರೇಶ ಶಂಕರ, ರವೀಂದ್ರ ಪಾಟೀಲ್, ಉಪ ನಿರೀಕ್ಷಕ ದಿಲೀಪಸಿಂಗ್ ಠಾಕೂರ್, ಸಿಬ್ಬಂದಿ ಹುಸೇನ್ಸಾಬ್, ರೋಹಿತ್, ರಾಜಕುಮಾರ, ಟೋನಿ ಸೆಡ್ರಿಕ್, ಅಬ್ದುಲ್ ಅತೀಖ್, ವಿಷ್ಣುವರ್ಧನ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts