ಚಿಕ್ಕಮಗಳೂರು: ತರೀಕೆರೆ ತಾಲೂಕು ಅತ್ತಿಗನಾಳು ಗ್ರಾಮದ ಡ್ಯಾಂಪುರ ಎಂಬಲ್ಲಿ ಶುಕ್ರವಾರ ಗಾಂಜಾ ಸೊಪ್ಪು ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ತರೀಕೆರೆ ಪಟ್ಟಣದ ಶಕೀಲ್ ಹಾಗೂ ಭದ್ರಾವತಿ ಸೀಗೆಬಾಗೆಯ ಇಮ್ತಿಯಾಜ್ ಎಂಬಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 80 ಸಾವಿರ ರೂ. ಮೌಲ್ಯದ 8 ಕೆ.ಜಿ. 100 ಗ್ರಾಂ ಗಾಂಜಾಸೊಪ್ಪು ವಶಪಡಿಸಿಕೊಳ್ಳಲಾಗಿದೆ. ಎಸ್ಪಿ ಎಂ.ಎಚ್.ಅಕ್ಷಯ್ ನಿರ್ದೇಶನದಲ್ಲಿ ಡಿಸಿಐಬಿ ಪೊಲೀಸ್ ನಿರೀಕ್ಷಕ ಕೆ.ಸತ್ಯನಾರಾಯಣ್, ಪಿಎಸ್ಐ ಪುದ್ದು, ಎಎಸ್ಐಗಳಾದ ರಂಗಯ್ಯ, ವೀರೇಂದ್ರ, ಸಿಬ್ಬಂದಿ ಶೇಷಪ್ಪಶೆಟ್ಟಿ, ಮಹೇಶ್, ರವೀಂದ್ರ, ಭರತ್ಕುಮಾರ್ ಹಾಗೂ ನಟರಾಜ್ ಈ ಕಾರ್ಯಾಚರಣೆ ನಡೆಸಿದ್ದಾರೆ.