ಭೋಪಾಲ್: ಲಾಕ್ಡೌನ್ ಇದ್ದರೂ ಹಲವು ವಿನಾಯ್ತಿಗಳನ್ನು ನೀಡಲಾಗಿದೆ. ಆದರೆ, ಕ್ಷೌರದಂಗಡಿ, ಸಲೂನ್ಗಳನ್ನು ತೆರೆಯುವಂತಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟವಾಗಿ ಹೇಳಿದೆ. ಗ್ರಾಮೀಣ ಪ್ರದೇಶಗಳಲ್ಲಿ ಲಾಕ್ಡೌನ್ ನಿಯಮಗಳು ಕಟ್ಟುನಿಟ್ಟಾಗಿ ಪಾಲನೆಯಾಗೋದು ಕಷ್ಟಸಾಧ್ಯವೇ ಸರಿ.
ಮಧ್ಯಪ್ರದೇಶದ ಖರಗೋನ್ ಜಿಲ್ಲೆಯ ಬಡಗಾಂವ್ ಎಂಬ ಹಳ್ಳಿಯಲ್ಲಿ ಆರು ಜನರಿಗೆ ಸೋಂಕು ತಗುಲಿದೆ. ಇವರೆಲ್ಲರಿಗೆ ಸೋಂಕು ಹರಡಿದ್ದು, ಗ್ರಾಮದಲ್ಲಿದ್ದ ಕ್ಷೌರದಂಗಡಿಯಿಂದಾಗಿ. ಇವರೆಲ್ಲರಿಗೂ ಒಂದೇ ಬಟ್ಟೆ ಹಾಗೂ ಸಾಮಗ್ರಿಗಳನ್ನು ಬಳಸಿ ಕ್ಷೌರಿಕ ಹೇರ್ಕಟ್ ಮಾಡಿದ್ದ. ಹೀಗಾಗಿ ಸದ್ಯ ಇಡೀ ಗ್ರಾಮವನ್ನೇ ಸೀಲ್ ಡೌನ್ ಮಾಡಲಾಗಿದೆ.
ಇಂದೋರ್ನ ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಇತ್ತೀಚೆಗೆ ಗ್ರಾಮಕ್ಕೆ ಹಿಂದಿರುಗಿದ್ದ. ಆತ ಏಪ್ರಿಲ್ 5ರಂದು ಹಳ್ಳಿಯಲ್ಲಿದ್ದ ಕ್ಷೌರದಂಗಡಿಗೆ ತೆರಳಿ ಹೇರ್ಕಟ್ ಮಾಡಿಸಿಕೊಂಡಿದ್ದ. ಬಳಿಕ ಆತನಿಗೆ ಸೋಂಕು ಇರುವುದು ಖಚಿತವಾಗಿತ್ತು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ. ದಿವ್ಯೇಶ್ ವರ್ಮಾ ಮಾಹಿತಿ ನೀಡಿದ್ದಾರೆ.
ಈತನ ಪ್ರಾಥಮಿಕ ಸೋಂಕಿತರ ಪಟ್ಟಿ ಮಾಡುತ್ತಿದ್ದಾಗ ಆತ ಕ್ಷೌರ ಮಾಡಿಸಿಕೊಂಡಿದ್ದು ಬೆಳಕಿಗೆ ಬಂದಿದೆ. ಅದೇ ದಿನ ಒಟ್ಟು 12 ಜನರು ಕ್ಷೌರ ಮಾಡಿಸಿಕೊಂಡಿದ್ದರು. ಅವರನ್ನು ಪರೀಕ್ಷೆಗೊಳಪಡಿಸಿದಾಗ 6 ಜನರು ಸೋಂಕಿಗೆ ಒಳಗಾಗಿರುವುದು ಪತ್ತೆಯಾಗಿದೆ.
ಆದರೆ, ಅಚ್ಚರಿಯ ಸಂಗತಿ ಎಂದರೆ ಕ್ಷೌರಿಕನಲ್ಲಿ ಸೋಂಕು ಪತ್ತೆಯಾಗಿಲ್ಲ. ಆತನ ರಕ್ತ ಹಾಗೂ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಯಲ್ಲಿ ನೆಗೆಟಿವ್ ಎಂದು ವರದಿ ಬಂದಿದೆ.
ತನ್ನೂರಿಗೆ ತೆರಳಲು ಅತನಿಗೆ ಇದನ್ನು ಬಿಟ್ಟರೆ ಬೇರಾವ ದಾರಿಯೂ ಇರಲಿಲ್ಲ, ಇದಕ್ಕಾಗಿ ವೆಚ್ಚವಾಗಿದ್ದೆಷ್ಟು ಗೊತ್ತೆ?