More

    6 ಲಕ್ಷ ರೂ.ಮೌಲ್ಯದ ಬೆಳ್ಳುಳ್ಳಿ ಕಳವು

    ಚಿತ್ರದುರ್ಗ: ಚಿತ್ರದುರ್ಗ ತಾಲೂಕು ದಂಡಿನಕುರಬಹಟ್ಟಿ ಗ್ರಾಮದ ಗೋದಾಮಿನಲ್ಲಿದ್ದ ಅಂದಾಜು 6 ಲಕ್ಷ ರೂ.ಮೌಲ್ಯದ ಬೆಳ್ಳುಳ್ಳಿಯನ್ನು ದುಷ್ಕ ರ್ಮಿಗಳು ಕಳವು ಮಾಡಿದ್ದಾರೆ.
    ಚಿತ್ರದುರ್ಗದ ಕೃಷಿಉತ್ಪನ್ನ ಮಾರುಕಟ್ಟೆ ವರ್ತಕ ಜಿ.ಎಂ.ಬಸವಕಿರಣ್ ಅವರು, ದಂಡಿನ ಕುರುಬರಹಟ್ಟಿ ಜಯಶೀಲರೆಡ್ಡಿ ಅವರ ಜ ಮೀನಿನ ಗೋದಾಮಿನಲ್ಲಿ, ಮಧ್ಯಪ್ರದೇಶದಿಂದ ತರಿಸಿದ್ದ 1100 ಚೀಲ ಬೆಳ್ಳುಳ್ಳಿಯನ್ನಿಟ್ಟಿದ್ದು, ದುಷ್ಕರ್ಮಿಗಳು ಗೋದಾಮಿನ ಹಿಂದಿನ ಷಟರ್ಸ್‌ ಮುರಿದು, 50 ಕೆಜಿ ತೂಕದ 150 ಚೀಲ ಬೆಳ್ಳುಳ್ಳಿ ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ.
    ಡಿ.5 ರ ರಾತ್ರಿ 7.30ನಂತರದಲ್ಲಿ ಈ ಕೃತ್ಯ ನಡೆದಿದ್ದು,ಡಿ.7ರಂದು ಬೆಳಗ್ಗೆ ಇದನ್ನು ಗಮನಿಸಿದ ಬಸವಕಿರಣ್ ಅವರು ದೂರು ನೀಡಿದ್ದಾರೆ. ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ನಡೆಸಿದ್ದಾರೆ.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts