ಬೆಂಗಳೂರು: ಯಾರ ಸಹಾಯವೂ ಇಲ್ಲದೇ ಖುದ್ದಾಗಿ ಕಲಿತು ಇಂಜಿನಿಯರ್ ಆಗಿ, ಬಿಟ್ಸ್ ಪಿಲಾನಿಯಲ್ಲಿ ಕಂಪ್ಯೂಟರ್ ಸೈನ್ಸ್ನಲ್ಲಿ ಎಂಎಸ್ಸಿ ಮಾಡಿ, ಇಸ್ರೋದಲ್ಲಿ ರಾಕೆಟ್ ವಿಜ್ಞಾನಿಯಾಗಿ ಕೆಲಸ ಮಾಡಿದ 59 ರಾಜೇಂದ್ರ ಬಾಬು ಇದೀಗ ನೀಟ್ ಪರೀಕ್ಷೆಗೆ ಸಜ್ಜಾಗುತ್ತಿದ್ದಾರೆ.
ಈ ವರ್ಷ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಗೆ (NEET) ಯಶಸ್ವಿಯಾಗಿ ಕಾಣಿಸಿಕೊಂಡಿರುವ ರಾಜಾಜಿನಗರ V ಬ್ಲಾಕ್ನ ರಾಜನ್ ಬಾಬು ಮುಂದಿನ ವರ್ಷ ಪರೀಕ್ಷೆಗೆ ಹಾಜರಾಗಲು ಸಿದ್ಧರಾಗುತ್ತಿದ್ದಾರೆ, ಅವರು ಹೆಚ್ಚು ಅಂಕಗಳನ್ನು ಗಳಿಸಿ ಸರ್ಕಾರಿ ಕೋಟಾದ ಅಡಿಯಲ್ಲಿ MBBS ಸೀಟು ಗಿಟ್ಟಿಸಿಕೊಳ್ಳಲು ನಿರ್ಧರಿಸಿದ್ದಾರೆ. ಅವರ ಮಗ ಮತ್ತು ಮಗಳು ಈಗಾಗಲೇ ಎಂಬಿಬಿಎಸ್ ಓದುತ್ತಿದ್ದಾರೆ.
1963 ರಲ್ಲಿ ಜನಿಸಿದ ಬಾಬು, ಕುಟುಂಬದಲ್ಲಿನ ಆರ್ಥಿಕ ಮುಗ್ಗಟ್ಟಿನಿಂದ ಶಾಲೆಗೆ ಹೋಗಲಾಗಲಿಲ್ಲ. ಅವರ ವಯಸ್ಸಿನ ನೆರೆಹೊರೆಯ ಹುಡುಗರು ತರಗತಿಯಲ್ಲಿದ್ದಾಗ, ಇವರು ತಮ್ಮ ಕುಟುಂಬಕ್ಕೆ ನೆರವಾಗಲು ಪವರ್ ಲೂಮ್ಗಳಲ್ಲಿ ಕೆಲಸ ಮಾಡಬೇಕಾಗಿತ್ತು. ಅನಾರೋಗ್ಯದಿಂದ ಕಷ್ಟಪಡುತ್ತಿದ್ದ ತಂದೆ, ಗೃಹಿಣಿ ತಾಯಿ ಮತ್ತು ಹಿರಿಯ ಸಹೋದರಿಯರ ಕುಟುಂಬ ಅವವರದ್ದಾಗಿತ್ತು. ಅವರು ಅಧ್ಯಯನ ಮಾಡಲು ಹಂಬಲಿಸುತ್ತಿದ್ದರೂ ಈ ಎಲ್ಲಾ ಸಮಸ್ಯೆಗಳಿಂದ ಅದು ಸಾಧ್ಯ ಆಗಿರಲಿಲ್ಲ.
ಅವರು ಖಾಸಗಿ ಅಭ್ಯರ್ಥಿಯಾಗಿ 10 ನೇ ತರಗತಿ ಪರೀಕ್ಷೆಗೆ ಹಾಜರಾಗುವ ಮೂಲಕ ಅಧ್ಯಯನವನ್ನು ಮುಂದುವರಿಸಿದರು. ’10ನೇ ತರಗತಿ ಪಾಸ್ ಆದ ನಂತರ ಅಂಕಪಟ್ಟಿಯ ಆಧಾರದ ಮೇಲೆ, ನಾನು ಎಲೆಕ್ಟ್ರಿಕಲ್ ಇಂಜಿನಿಯರಿಂಗ್ನಲ್ಲಿ ಡಿಪ್ಲೊಮಾಗೆ ಸೇರಿಕೊಂಡೆ. ಇದೇ ಸಮಯದಲ್ಲಿ ಐದು ವರ್ಷಗಳಿಗೂ ಹೆಚ್ಚು ಮೈಕೋ ಬಾಷ್ನೊಂದಿಗೆ ಕೆಲಸ ಮಾಡಿದೆ’ ಏಂದು ರಾಜೇಂದ್ರ ಬಾಬು ತಮ್ಮ ಬಾಲ್ಯವನ್ನು ನೆನಪಿಸಿಕೊಂಡರು.
ರಾಜೇಂದ್ರ ಬಾಬು ‘ನಾನು ವೈದ್ಯನಾಗುವುದು ಹಣ ಸಂಪಾದಿಸಲು ಅಲ್ಲ. ಬದಲಾಗಿ ನಾನು ಸಂಶೋಧನೆಯತ್ತ ಗಮನ ಹರಿಸುತ್ತೇನೆ. ಕರೊನಾ ಸಮದರ್ಭ ಸಾರ್ವಜನಿಕರು ಹೇಗೆ ಬಳಲುತ್ತಿದ್ದರು ಎಂಬುದನ್ನು ನಾನು ನೋಡಿದ್ದೆ. ನನ್ನ ತಾಯಿ ಕೂಡ ಕರೊನಾದಿಂದ ಸಾವನ್ನಪ್ಪಿದ್ದಾರೆ. ರೋಗಿಗಳ ಮೂಲಭೂತ ಅಗತ್ಯಗಳನ್ನು ಪೂರೈಸುವ ವೈದ್ಯಕೀಯ ಜಗತ್ತು ಸಮಾಜಕ್ಕೆ ಏನನ್ನಾದರೂ ನೀಡಬೇಕು’ ಎಂದು ತಮ್ಮ ಆಶಯವನ್ನು ವ್ಯಕ್ತಪಡಿಸಿದರು.
ಶಾಸಕ ಸುರೇಶ್ ಕುಮಾರ್ ಮಂಗಳವಾರ ರಾಜನ್ ಬಾಬು ಅವರನ್ನು ಭೇಟಿ ಮಾಡಿದ್ದು ನಂತರ ಅವರ ಸಾಹಸ ಗಾಥೆಯ ಬಗ್ಗೆ ಫೇಸ್ಬುಕ್ನಲ್ಲಿ ಬರೆದಿದ್ದಾರೆ. ವಿಶಿಷ್ಟ ವ್ಯಕ್ತಿತ್ವ ಹೊಂದಿರುವ ರಾಜೇಂದ್ರ ಬಾಬು ನೋಡಿ ನಾವೆಲ್ಲರು ಸ್ಫೂರ್ತಿ ಪಡೆಯಬೇಕು.