More

    ಬೇಟೆಗಾರರನ್ನು ಹಿಡಿಯಲು ಹೋದ ಎಸ್​ಐ ಸೇರಿ ಮೂವರು ಪೊಲೀಸರು ಗುಂಡೇಟಿಗೆ ಬಲಿ

    ಭೋಪಾಲ್​: ಬೇಟೆಗಾರರನ್ನು ಹಿಡಿಯಲು ಹೋದ ಮೂವರು ಪೊಲೀಸರು ಬೇಟೆಗಾರರ ಗುಂಡೇಟಿಗೆ ಬಲಿಯಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

    ಬೇಟೆಗಾರರು ಕೃಷ್ಣಮೃಗ ಬೇಟೆಯಾಡಲು ಗ್ರಾಮದ ಸಮೀಪದ ಅರಣ್ಯದಲ್ಲಿ ಹೋಗಿರುವ ಮಾಹಿತಿ ಪಡೆದ ಪೊಲೀಸರು, ಕೂಡಲೇ ಸ್ಥಳಕ್ಕೆ ತಲುಪಿದ್ದಾರೆ. ಈ ವೇಳೆ ನಡೆದ ಕಾರ್ಯಾಚರಣೆಯಲ್ಲಿ ಪೊಲೀಸರು ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.

    ಶನಿವಾರ ಮುಂಜಾನೆ 3 ಗಂಟೆಗೆ ಅರಣ್ಯ ಪ್ರದೇಶಕ್ಕೆ ತಲುಪಿದ ಪೊಲೀಸರ ತಂಡ ಬೇಟೆಗಾರರನ್ನು ಸುತ್ತುವರಿದಿದ್ದರು. ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಬೇಟೆಗಾಗಿ ತಂದಿದ್ದ ಬಂದೂಕಿನಿಂದಲೇ ಪೊಲೀಸರ ಮೇಲೆ ಹಾರಿಸಿದ್ದಾರೆ. ಕೂಡಲೇ ಎಸ್​ಐ ಸೇರಿ ಮೂವರು ಪೊಲೀಸರು ಸಾವನ್ನಪ್ಪಿದ್ದಾರೆ.

    ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ ಅವರು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. (ಏಜೆನ್ಸೀಸ್​)

    ಕಚೇರಿಗೆ ಬಂದು ಕೆಲಸ ಮಾಡಿ ಅಂದಿದ್ದಕ್ಕೆ 800 ಉದ್ಯೋಗಿಗಳಿಂದ ರಾಜೀನಾಮೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts