ಬೆಂಗಳೂರು: ಅ. 14 ಭಾರತದ ಪಾಲಿಗೆ ಮಹತ್ವದ ದಿನ. ಏಕೆಂದರೆ ಆ ದಿನ ಭಾರತ ಮತ್ತು ಪಾಕಿಸ್ತಾನ ತಂಡಗಳು ಐಸಿಸಿಯ ವಿಶ್ವಕಪ್ನಲ್ಲಿ ಮತ್ತೊಮ್ಮೆ ಎದುರಾಗುತ್ತಿವೆ. ದೇಶದ ಜನರು ಮಾತ್ರವಲ್ಲ, ಇಡೀ ಜಗತ್ತು ಸಾಂಪ್ರದಾಯಿಕ ಎದುರಾಳಿಗಳ ಕ್ರಿಕೆಟ್ ಕದನಕ್ಕೆ ತುದಿಗಾಲಲ್ಲಿ ನಿಂತು ಕಾಯುತ್ತಿದೆ.
ಅ. 14ರಂದು ಗುಜರಾತಿನ ಅಹಮದಾಬಾದ್ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂಡೋ-ಪಾಕ್ ಕ್ರಿಕೆಟ್ ಕದನ ನಡೆಯಲಿದೆ. ಈಗಾಗಲೇ ಈ ಪಂದ್ಯದ ಟಿಕೆಟ್ಗಳು ಸೋಲ್ಡೌಟ್ ಆಗಿವೆ. ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಪಂದ್ಯಗಳೇ ಹಾಗೆ ಹೈವೋಲ್ಟೆಜ್ನಿಂದ ಕೂಡಿರುತ್ತವೆ. ಕ್ರಿಕೆಟ್ ಹುಟ್ಟುವಿನಿಂದ ಹಿಡಿದು ಇಂದಿನವರೆಗೂ ಇಂಡೋ-ಪಾಕ್ ಕದನ ರೋಚಕತೆ ಕಾಯ್ದುಕೊಂಡಿದೆ. ಅದರಲ್ಲೂ ವಿಶ್ವಕಪ್ ಕದನಗಳ ಬಗ್ಗೆಯಂತೂ ಹೇಳತೀರದು, ಐಸಿಸಿ ಟಿ20 ಮತ್ತು ಏಕದಿನ ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿ ಒಟ್ಟು 14 ಬಾರಿ ಉಭಯ ತಂಡಗಳು ಮುಖಾಮುಖಿಯಾಗಿವೆ. ಗಮನಾರ್ಹ ಸಂಗತಿ ಏನೆಂದರೆ, ಏಕದಿನ ವಿಶ್ವಕಪ್ನಲ್ಲಿ ಏಳು ಬಾರಿಯೂ ಭಾರತವೇ ವಿಜಯೋತ್ಸವ ಆಚರಿಸಿದೆ. ಟಿ20 ವಿಶ್ವಕಪ್ನಲ್ಲಿಯೂ 7 ಬಾರಿ ಉಭಯ ತಂಡಗಳು ಸೆಣಸಾಡಿದ್ದು, ಪಾಕಿಸ್ತಾನ 2021ರಲ್ಲಿ ಒಂದು ಬಾರಿ ಗೆಲುವು ದಾಖಲಿಸಿದೆ. ಎರಡು ಮಾದರಿಯಲ್ಲೂ ಭಾರತವೇ ಪಾರುಪತ್ಯ ಸಾಧಿಸಿದೆ. ಇಂಡೋ-ಪಾಕ್ ಕದನ ಅನೇಕ ರೋಚಕ ಕ್ಷಣಗಳಿಗೆ ಸಾಕ್ಷಿಯಾಗಿದ್ದು, ಅದರಲ್ಲೊಂದು ಘಟನೆ ಇಂದಿಗೂ ಮೈನವಿರೇಳಿಸುವ ರೋಚಕ ಕ್ಷಣವಾಗಿಯೇ ಉಳಿದುಕೊಂಡಿದೆ. ಅದರಲ್ಲೂ ಕನ್ನಡಿಗರಿಗಂತೂ ಈ ಕ್ಷಣ ಹೆಮ್ಮೆಯ ಸಂಗತಿ ಎನ್ನಬಹುದು.
ಕನ್ನಡಿಗನನ್ನು ಕೆಣಕಿ ಕೈ ಸುಟ್ಟಿಕೊಂಡ ಪಾಕ್ ಬ್ಯಾಟರ್
1996ರ ವಿಶ್ವಕಪ್ ಕ್ರಿಕೆಟ್ ಪ್ರಿಯರ ಮನದಲ್ಲಿ ಇನ್ನು ಹಚ್ಚಹಸಿರಾಗಿದೆ. ಬೆಂಗಳೂರಿನಲ್ಲಿ ನಡೆದ ಕ್ವಾರ್ಟರ್ಫೈನಲ್ ಕದನದಲ್ಲಿ ಕನ್ನಡಿಗ ವೆಂಕಟೇಶ್ ಪ್ರಸಾದ್ ಹಾಗು ಪಾಕ್ನ ಆಮೀರ್ ಸೊಹೈಲ್ ನಡುವಿನ ಕದನವೇ ಬಲು ರೋಚಕವಾಗಿತ್ತು. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಭಾರತ ನೀಡಿದ್ದ 288 ರನ್ ಟಾರ್ಗೆಟ್ ಬೆನ್ನಟ್ಟಿದ ಪಾಕಿಸ್ತಾನ ಉತ್ತಮ ಸ್ಥಿತಿಯಲ್ಲಿಯೇ ಇತ್ತು. ಕೇವಲ 45 ಎಸೆತದಲ್ಲಿ 51 ರನ್ ಸಿಡಿಸಿದ್ದ ಆಮೀರ್ ಸೊಹೈಲ್ ತಂಡಕ್ಕೆ ಉತ್ತಮ ಆರಂಭ ದೊರಕಿಸಿಕೊಟ್ಟಿದ್ದರು. ಭಾರತದ ಬೌಲರ್ಗಳನ್ನು ಕಾಡಿದ ಸೊಹೈಲ್, ಅದೇ ಅಹಂನಲ್ಲಿ ವೆಂಕಟೇಶ್ ಪ್ರಸಾದ್ ಎಸೆತವನ್ನು ಬೌಂಡರಿಗಟ್ಟಿದರು. ಬಳಿಕ ಚೆಂಡು ತೋರಿಸಿ ಅಣಕಿಸಿದ್ದರು. ಆದರೆ, ಮರು ಎಸೆತದಲ್ಲಿಯೇ ಪ್ರಸಾದ್ ಅವರನ್ನು ಬೌಲ್ಡ್ ಮಾಡುವ ಮೂಲಕ ಸೇಡು ತೀರಿಸಿಕೊಂಡಿದ್ದರು. ಈ ಸನ್ನಿವೇಶ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಸದ್ದುಮಾಡಿತ್ತು. ಅಲ್ಲದೆ, ಜಗತ್ತಿನ ಎದುರು ಪಾಕಿಸ್ತಾನ ಭಾರೀ ಮುಖಭಂಗ ಅನುಭವಿಸಿತು.
ಇದನ್ನೂ ಓದಿ: VIDEO | ಈ ಟ್ರೋಫಿ ನನ್ನ ಜೀವನ; ಕ್ರಿಕೆಟ್ ಫ್ಯಾನ್ ಸುಧೀರ್ ಕುಮಾರ್ ಚೌಧರಿ ಹಿಂಗಂದಿದ್ಯಾಕೆ?
ವಾಕರ್ ಯೂನಿಸ್ ಅಸಮಾಧಾನ
ಅಂದು ಮೈದಾನದಲ್ಲಿ ನಡೆದ ಘಟನೆಯನ್ನು ಹಿಂದೊಮ್ಮೆ ಮೆಲುಕು ಹಾಕಿದ್ದ ಪಾಕ್ ಮಾಜಿ ನಾಯಕ ವಾಕರ್ ಯೂನಿಸ್, ನನಗೆ ನಿಜಕ್ಕೂ ಆಶ್ಚರ್ಯವಾಯಿತು. ಆಮೀರ್ ಅವರ ವರ್ತನೆ ನನಗೆ ನಂಬಲು ಸಾಧ್ಯವಾಗಲಿಲ್ಲ. ಆಮೀರ್ ವರ್ತನೆಯಿಂದಾಗಿ ಉತ್ತಮ ಸ್ಥಿತಿಯಲ್ಲಿದ್ದರೂ ಪಂದ್ಯ ಸೋತೆವು ಎಂದು ಪಂದ್ಯದ ಕುರಿತು ವಾಕರ್ ಹೇಳಿಕೊಂಡಿದ್ದರು. ಅಂದಿನ ಪಂದ್ಯಕ್ಕೆ ಆಮೀರ್ ಸೋಹೈಲ್ ಅವರೇ ಪಾಕ್ ತಂಡದ ನಾಯಕತ್ವ ವಹಿಸಿದ್ದರು. ಇದೇ ಪಂದ್ಯದಲ್ಲಿ ವಾಕರ್ ಯೂನಿಸ್ ಸಹ ಆಡಿದ್ದರು.
This moment is etched forever in every cricket fan’s minds. Perfect time to take everyone in a rewind!!! Happy Birthday Venkatesh Prasad! pic.twitter.com/uXemQmYjkq
— BCCI (@BCCI) August 5, 2018
ಪಂದ್ಯದ ಫಲಿತಾಂಶ ಏನಾಗಿತ್ತು?
ಮೊದಲು ಬ್ಯಾಟಿಂಗ್ ಮಾಡಿದ ಭಾರತ ನವಜೋತ್ ಸಿಂಗ್ ಸಿಂಧು (93ರನ್, 115 ಎಸೆತ, 11 ಬೌಂಡರಿ) ಹಾಗೂ ಅಜಯ್ ಜಡೇಜಾ (45 ರನ್, 25 ಎಸೆತ, 4 ಬೌಂಡರಿ, 2 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ಫಲವಾಗಿ ಭಾರತ 8 ವಿಕೆಟ್ಗೆ 287 ರನ್ಗಳಿಸಿದರೆ, ಪ್ರತಿಯಾಗಿ ಪಾಕಿಸ್ತಾನ ನಾಯಕ ಆಮೀರ್ ಸೊಹೈಲ್ (55ರನ್, 46 ಎಸೆತ, 9 ಬೌಂಡರಿ, 1 ಸಿಕ್ಸರ್) ಹಾಗೂ ಸಯೀದ್ ಅನ್ವರ್ (48ರನ್, 32 ಎಸೆತ, 5 ಬೌಂಡರಿ, 2 ಸಿಕ್ಸರ್) ಜೋಡಿ ಬಿರುಸಿನ ಬ್ಯಾಟಿಂಗ್ ನಡುವೆಯೂ ಕನ್ನಡಿಗರಾದ ವೆಂಕಟೇಶ್ ಪ್ರಸಾದ್ (45ಕ್ಕೆ 3) ಹಾಗೂ ಅನಿಲ್ ಕುಂಬ್ಳೆ (48ಕ್ಕೆ 3) ಜೋಡಿಯ ಮಾರಕ ಬೌಲಿಂಗ್ ದಾಳಿಗೆ ನಲುಗಿ 49 ಓವರ್ಗಳಲ್ಲಿ 9 ವಿಕೆಟ್ಗೆ 248 ರನ್ ಗಳಿಸಿ ಪಾಕ್ ಸೋಲನ್ನು ಅನುಭವಿಸಿತು. (ಏಜೆನ್ಸೀಸ್)
14 ಬಾರಿ ಮುಖಾಮುಖಿ ಒಮ್ಮೆ ಮಾತ್ರ ಗೆಲುವು! ಸಾಂಪ್ರದಾಯಿಕ ಎದುರಾಳಿಗಳ ವಿಶ್ವಕಪ್ ಹಾದಿ ಹೀಗಿದೆ….
ಇಶಾನ್ಗೆ ಒಲಿಯಲಿದೆಯಾ ಓಪನಿಂಗ್ ಅದೃಷ್ಟ? ಜಾರ್ಖಂಡ್ ಆಟಗಾರನ ಟ್ರ್ಯಾಕ್ ರೆಕಾರ್ಡ್ ಹೀಗಿದೆ ನೋಡಿ….