More

    18ರಿಂದ ಕಲ್ಲೇಶ್ವರ ಸ್ವಾಮಿ,ವೀರಭದ್ರೇಶ್ವರ ಸ್ವಾಮಿ ಜಾತ್ರೆ


    ಚಿತ್ರದುರ್ಗ:ಚಿತ್ರದುರ್ಗ ತಾಲೂಕು ಗೊಡಬನಾಳ್ ಗ್ರಾಮದಲ್ಲಿ ಶ್ರೀ ಕಲ್ಲೇಶ್ವರ ಸ್ವಾಮಿ ಮತ್ತು ಶ್ರೀ ವೀರಭದ್ರೇಶ್ವರ ಸ್ವಾಮಿ ಜಾತ್ರಾ ಮ ಹೋತ್ಸವ ಏ.18ರಿಂದ 23ವರೆಗೆ ಜರುಗಲಿದೆ. 18ರಂದು ಕಲ್ಲೇಶ್ವರ ಸ್ವಾಮಿ ಹಾಗೂ 19ರಂದು ವೀರಭದ್ರೇಶ್ವರ ಸ್ವಾಮಿಗೆ ಕಂಕಣಧಾರಣೆ, 20 ರಂದು ಕಲ್ಲೇಶ್ವರ ಸ್ವಾಮಿಗೆ ವೃಷಭೋತ್ಸವ, ವೀರಭದ್ರೇಶ್ವರ ಸ್ವಾಮಿಗೆ ಹೂವಿನೋತ್ಸವ, 21ರಂದು ರಾತ್ರಿ ಗುಗ್ಗಳೋತ್ಸವ ಮತ್ತು ವೀರ ಗಾಸೆ, 22ರಂದು ಬೆಳಗ್ಗೆ ಕೆಂಡಾರ್ಚನೆ,ಗಜೋತ್ಸವ ಮಹೂರ್ತ ಹಾಗೂ ರಾತ್ರಿ ಹೂವಿನ ಪಲ್ಲಕ್ಕಿ ಉತ್ಸವ ನಡೆಯಲಿದೆ.
    23ರಂದು ಸಂಜೆ ಮಹಾರಥೋತ್ಸವ,ಉಯ್ಯಲೆ,ಶ್ರೀ ಆಂಜನೇಯ ಸ್ವಾಮಿಗೆ ದೊಡ್ಡ ಎಡೆ, ರಾತ್ರಿ ಓಕಳಿ ಹಾಗೂ ಕಂಕಣ ವಿಸರ್ಜನೆ ನೆರವೇರಲಿದೆ. 23ರಂದು ಬೆಳಗ್ಗೆ 10ರಿಂದ ಅನ್ನಸಂರ್ಪಣೆ ಇರುತ್ತದೆ ಎಂದು ಶ್ರೀ ಕಲ್ಲೇಶ್ವರ ಸ್ವಾಮಿ ಟ್ರಸ್ಟ್ ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts