ಲಾಕ್ಡೌನ್ ಹೊತ್ತಲ್ಲಿ ಸಿನಿಮಾ ಸಂಬಂಧಿ ಕೆಲಸಗಳು ಸ್ಥಗಿತಗೊಂಡಿದ್ದರು, ಫೋನ್ನಲ್ಲೇ ಒಂದಷ್ಟು ಮಾತುಕತೆಗಳು ನಡೆದಿರುತ್ತವೆ. ಮುಂದಿನ ಸಿನಿಮಾ ಸೇರಿ ಹಲವು ವಿಚಾರಗಳು ಅಲ್ಲಿ ವಿನಿಮಯ ಆಗಿರುತ್ತವೆ. ಈಗ ಅಂಥದ್ದೇ ಒಂದು ಸುದ್ದಿ ಟಾಲಿವುಡ್ನಲ್ಲಿ ಸದ್ದು ಮಾಡುತ್ತಿದೆ. ಅದೇನೆಂದರೆ, ಅಲ್ಲು ಅರ್ಜುನ್ ಚಿತ್ರವನ್ನು ನಿರ್ದೇಶಿಸುವಂತೆ ಖ್ಯಾತ ನಿರ್ದೇಶಕ ಕೊರಟಾಲ ಶಿವನಿಗೆ ಆಫರ್ ಕೊಡಲಾಗಿದೆಯಂತೆ. ಸಂಭಾವನೆ ವಿಚಾರವಾಗಿಯೂ ಮಾತುಕತೆ ಆಗಿದೆಯಂತೆ. ಬರೋಬ್ಬರಿ 13 ಕೋಟಿ ನೀಡುವುದಾಗಿ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್, ಕೊರಟಾಲ ಶಿವಗೆ ಬೇಡಿಕೆ ಇಟ್ಟಿದ್ದಾರಂತೆ.
ಇದನ್ನೂ ಓದಿ: ಜೂನ್ನಿಂದ ಸಿನಿಮಾ ಚಿತ್ರೀಕರಣಕ್ಕೆ ಅನುವು!; ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ ಸ್ಟಾರ್ಗಳು
ಹೀಗೆ ಬೇಡಿಕೆ ಇಡಲು ಕಾರಣ ಶಿವ ನಿರ್ದೇಶನದ ಈ ಹಿಂದಿನ ಸಿನಿಮಾಗಳು. ಈಗಾಗಲೇ ಮಿರ್ಚಿ, ಶ್ರೀಮಂತುಡು, ಜನತಾ ಗ್ಯಾರೇಜ್, ಭರತ್ ಅನೇ ನೇನು ಇದೀಗ ಮೆಗಾಸ್ಟಾರ್ ಚಿರಂಜೀವಿ ಜತೆಗೆ ಆಚಾರ್ಯ ಶೀರ್ಷಿಕೆಯ ಸಿನಿಮಾ ಮಾಡುತ್ತಿದ್ದಾರೆ. ಆಚಾರ್ಯ ಹೊರತುಪಡಿಸಿ ಮಿಕ್ಕ ಎಲ್ಲ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಒಳ್ಳೇ ಫಸಲನ್ನೇ ತೆಗೆದಿವೆ. ಹಾಗಾಗಿ ಶಿವನಿಗೆ ಮಣೆ ಹಾಕಿದ್ದಾರೆ ನಿರ್ದೇಶಕರು.
ಇದನ್ನೂ ನೋಡಿ: Photo Gallery| ಬರ್ತಡೇ ಸಂಭ್ರಮದಲ್ಲಿ ರಾಗಿಣಿ: ತುಪ್ಪದ ಬೆಡಗಿಯ ಬೋಲ್ಡ್ ಫೋಟೋಸ್!
ಇನ್ನೊಂದೆಡೆ ಲಾಕ್ಡೌನ್ನಲ್ಲೇ ಅಲ್ಲು ಅರ್ಜುನ್ಗಾಗಿ ಶಿವ ಕಥೆಯೊಂದನ್ನು ಸಿದ್ಧಪಡಿಸಿಕೊಂಡಿದ್ದು, ಆ ಕಥೆಯನ್ನು ಅರ್ಜುನ್ಗೂ ಹೇಳಿದ್ದಾರಂತೆ. ಸದ್ಯ ಪುಷ್ಪ ಚಿತ್ರದಲ್ಲಿ ಅಲ್ಲು ಅರ್ಜುನ್ ಬಿoಜಿಯಾಗಿದ್ದರೆ, ಇತ್ತ ಚಿರಂಜೀವಿ ಜತೆಗೆ ಆಚಾರ್ಯ ಸಿನಿಮಾ ಕೆಲಸಗಳಲ್ಲಿ ಕೊರಟಾಲ ಶಿವ ತೊಡಗಿಸಿಕೊಳ್ಳಲಿದ್ದಾರೆ. ಅವರವರ ಈ ಪ್ರಾಜೆಕ್ಟ್ಗಳು ಮುಗಿದ ಬಳಿಕವಷ್ಟೇ ಇಬ್ಬರ ಕಾಂಬಿನೇಷನ್ ಸಿನಿಮಾಕ್ಕೆ ಚಾಲನೆ ಸಿಗಲಿದೆ. (ಏಜೆನ್ಸೀಸ್)
ಕೆಮ್ಮಿಲ್ಲ, ಶೀತ ಇಲ್ಲ ಆದರೂ ಈ ಬಾಲಿವುಡ್ ನಟನಿಗೆ ಕರೊನಾ ಪಾಸಿಟಿವ್!