More

    13 ಕೋಟಿ ಕೊಡ್ತಿನಿ, ನನ್ನ ಚಿತ್ರ ನಿರ್ದೇಶಿಸು; ಈ ನಿರ್ದೇಶಕನಿಗೆ ಅಲ್ಲು ಅರ್ಜುನ್​ ಆಫರ್​!

    ಲಾಕ್​ಡೌನ್​ ಹೊತ್ತಲ್ಲಿ ಸಿನಿಮಾ ಸಂಬಂಧಿ ಕೆಲಸಗಳು ಸ್ಥಗಿತಗೊಂಡಿದ್ದರು, ಫೋನ್​ನಲ್ಲೇ ಒಂದಷ್ಟು ಮಾತುಕತೆಗಳು ನಡೆದಿರುತ್ತವೆ. ಮುಂದಿನ ಸಿನಿಮಾ ಸೇರಿ ಹಲವು ವಿಚಾರಗಳು ಅಲ್ಲಿ ವಿನಿಮಯ ಆಗಿರುತ್ತವೆ. ಈಗ ಅಂಥದ್ದೇ ಒಂದು ಸುದ್ದಿ ಟಾಲಿವುಡ್​ನಲ್ಲಿ ಸದ್ದು ಮಾಡುತ್ತಿದೆ. ಅದೇನೆಂದರೆ, ಅಲ್ಲು ಅರ್ಜುನ್​ ಚಿತ್ರವನ್ನು ನಿರ್ದೇಶಿಸುವಂತೆ ಖ್ಯಾತ ನಿರ್ದೇಶಕ ಕೊರಟಾಲ ಶಿವನಿಗೆ ಆಫರ್ ಕೊಡಲಾಗಿದೆಯಂತೆ. ಸಂಭಾವನೆ ವಿಚಾರವಾಗಿಯೂ ಮಾತುಕತೆ ಆಗಿದೆಯಂತೆ. ಬರೋಬ್ಬರಿ 13 ಕೋಟಿ ನೀಡುವುದಾಗಿ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್​, ಕೊರಟಾಲ ಶಿವಗೆ ಬೇಡಿಕೆ ಇಟ್ಟಿದ್ದಾರಂತೆ.

    ಇದನ್ನೂ ಓದಿ: ಜೂನ್​ನಿಂದ ಸಿನಿಮಾ ಚಿತ್ರೀಕರಣಕ್ಕೆ ಅನುವು!; ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ ಸ್ಟಾರ್​ಗಳು

    ಹೀಗೆ ಬೇಡಿಕೆ ಇಡಲು ಕಾರಣ ಶಿವ ನಿರ್ದೇಶನದ ಈ ಹಿಂದಿನ ಸಿನಿಮಾಗಳು. ಈಗಾಗಲೇ ಮಿರ್ಚಿ, ಶ್ರೀಮಂತುಡು, ಜನತಾ ಗ್ಯಾರೇಜ್​, ಭರತ್​ ಅನೇ ನೇನು ಇದೀಗ ಮೆಗಾಸ್ಟಾರ್ ಚಿರಂಜೀವಿ ಜತೆಗೆ ಆಚಾರ್ಯ ಶೀರ್ಷಿಕೆಯ ಸಿನಿಮಾ ಮಾಡುತ್ತಿದ್ದಾರೆ. ಆಚಾರ್ಯ ಹೊರತುಪಡಿಸಿ ಮಿಕ್ಕ ಎಲ್ಲ ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ಒಳ್ಳೇ ಫಸಲನ್ನೇ ತೆಗೆದಿವೆ. ಹಾಗಾಗಿ ಶಿವನಿಗೆ ಮಣೆ ಹಾಕಿದ್ದಾರೆ ನಿರ್ದೇಶಕರು.

    13 ಕೋಟಿ ಕೊಡ್ತಿನಿ, ನನ್ನ ಚಿತ್ರ ನಿರ್ದೇಶಿಸು; ಈ ನಿರ್ದೇಶಕನಿಗೆ ಅಲ್ಲು ಅರ್ಜುನ್​ ಆಫರ್​!

    ಇದನ್ನೂ ನೋಡಿ: Photo Gallery| ಬರ್ತಡೇ ಸಂಭ್ರಮದಲ್ಲಿ ರಾಗಿಣಿ: ತುಪ್ಪದ ಬೆಡಗಿಯ ಬೋಲ್ಡ್​​​ ಫೋಟೋಸ್​!

    ಇನ್ನೊಂದೆಡೆ ಲಾಕ್​ಡೌನ್​ನಲ್ಲೇ ಅಲ್ಲು ಅರ್ಜುನ್​ಗಾಗಿ ಶಿವ ಕಥೆಯೊಂದನ್ನು ಸಿದ್ಧಪಡಿಸಿಕೊಂಡಿದ್ದು, ಆ ಕಥೆಯನ್ನು ಅರ್ಜುನ್​ಗೂ ಹೇಳಿದ್ದಾರಂತೆ. ಸದ್ಯ ಪುಷ್ಪ ಚಿತ್ರದಲ್ಲಿ ಅಲ್ಲು ಅರ್ಜುನ್​ ಬಿoಜಿಯಾಗಿದ್ದರೆ, ಇತ್ತ ಚಿರಂಜೀವಿ ಜತೆಗೆ ಆಚಾರ್ಯ ಸಿನಿಮಾ ಕೆಲಸಗಳಲ್ಲಿ ಕೊರಟಾಲ ಶಿವ ತೊಡಗಿಸಿಕೊಳ್ಳಲಿದ್ದಾರೆ. ಅವರವರ ಈ ಪ್ರಾಜೆಕ್ಟ್​ಗಳು ಮುಗಿದ ಬಳಿಕವಷ್ಟೇ ಇಬ್ಬರ ಕಾಂಬಿನೇಷನ್​ ಸಿನಿಮಾಕ್ಕೆ ಚಾಲನೆ ಸಿಗಲಿದೆ. (ಏಜೆನ್ಸೀಸ್​)

    ಕೆಮ್ಮಿಲ್ಲ, ಶೀತ ಇಲ್ಲ ಆದರೂ ಈ ಬಾಲಿವುಡ್​ ನಟನಿಗೆ ಕರೊನಾ ಪಾಸಿಟಿವ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts