More

    11 ಜನ ಜೂಜುಕೋರರ ಬಂಧನ

    ಬೆಳಗಾವಿ: ಅಕ್ರಮ ಜೂಜಾಟದ ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರು 11 ಜೂಜುಕೋರರನ್ನು ಮಂಗಳವಾರ ಬಂಧಿಸಿ, ಅವರಿಂದ 12,400 ನಗದು ವಶಪಡಿಸಿಕೊಂಡಿದ್ದಾರೆ.

    ಇಲ್ಲಿನ ಕನಕದಾಸ ನಗರದ ವಿಜಯ ಪ್ರಕಾಶ ಯಲಜಿ(41), ಮನೋಜ ಸದಾಶಿವ ಕುರುಬರ(26), ಜಾಫರ್ ಹುಸೇನಮಿಯಾ ಬಾಬಾಖಾನ್(33), ಉದಯ ಈರಪ್ಪ ವಾಘೋಕರ(32), ಮಂಜುನಾಥ ಗೋಪಾಲ ಕಾಕತಿ(38), ಮಾರುತಿ ನಾಗಪ್ಪ ಬುಚಡಿ(32), ಶಹಾಪುರದ ಗಣಪತಿ ಸರಸಿಂಗ್ ಢಗೆ(51), ಮಹದೇವ ಗುಂಡು ಪವಾರ(52), ಖಾಸಬಾಗ್‌ದ ನಿವಾಸಿಗಳಾದ ನಾಗೇಶ ನಾರಾಯಣ ಹೆರೇಕರ್(48), ಮೆಹಬೂಬ್ ದಿಲಾವರ ಕರ್ನಾಚೆ(48) ಹಾಗೂ ಕೃಷ್ಣ ನರಸಿಂಗಪ್ಪ ಢಗೆ (59) ಬಂಧಿತರು.

    ಕನಕದಾಸ ನಗರದಲ್ಲಿ ಜೂಜಾಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ, ಆರೋಪಿಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts