ಪಾಲಕ್ಕಾಡ್: ಕೇವಲ ಹನ್ನೊಂದು ತಿಂಗಳ ಮಗುವೊಂದು ಬಕೆಟ್ ನೀರಿನೊಳಕ್ಕೆ ಬಿದ್ದು ಉಸಿರುಗಟ್ಟಿ ಮೃತಪಟ್ಟ ಘಟನೆ ಕೇರಳದ ಪಾಲಕ್ಕಾಡ್ ಸಮೀಪದ ಚಲಸ್ಸೇರಿ ಎಂಬಲ್ಲಿ ನಡೆದಿದೆ. ಪಾಲಕರ ಕ್ವಾರಂಟೈನ್ ಕಾಲದಲ್ಲಿ ಬಂದರೆಗಿದ ಆಪತ್ತು ಇದು. ಮಗುವಿನ ಹೆಸರು ಮೊಹಮ್ಮದ್ ಇಸ್ಖಾನ್. ಚಲಸ್ಸೇರಿ ನಿವಾಸಿ ಸಾದಿಕ್ ಎಂಬುವವರ ಪುತ್ರ.
ಇದನ್ನೂ ಓದಿ: ಬಾಲಿವುಡ್ನ ಸಂಗೀತ ನಿರ್ದೇಶಕ ವಾಜಿದ್ ಖಾನ್ ನಿಧನ
ಸಾದಿಕ್ ಅವರ ಆಪ್ತ ಸಂಬಂಧಿಕರಿಗೆ ಕರೊನಾ ವೈರಸ್ ಪಾಸಿಟಿವ್ ಆದ ಕಾರಣ, ಸಾದಿಕ್ ಮತ್ತು ಆತನ ಪತ್ನಿಗೆ ಕ್ವಾರಂಟೈನ್ ಕೂರುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಸೂಚಿಸಿದ್ದರು. ಹೀಗಾಗಿ ತಮ್ಮ 11 ತಿಂಗಳ ಮಗುವನ್ನು ಹತ್ತಿರದ ಸಂಬಂಧಿಕರ ಬಳಿ ಬಿಟ್ಟಿದ್ದರು.
ಇದನ್ನೂ ಓದಿ: ಬಾಲಿವುಡ್ ನಟ ಅರ್ಷದ್ ವಾರ್ಸಿ ಚಾಲಕರಾಗಿ ಕೆಲಸ ಮಾಡಿದ್ದ ಬಿಗ್ ಬಿ ಪುತ್ರ ಅಭಿಷೇಕ್ ಬಚ್ಚನ್
ಶನಿವಾರ ರಾತ್ರಿ ಬಾತ್ರೂಮ್ನಲ್ಲಿ ತುಂಬಿಟ್ಟಿದ್ದ ಬಕೆಟ್ ನೀರಿನೊಳಕ್ಕೆ ಮಗು ಬಿದ್ದಿದೆ. ಈ ವಿಷಯ ಗೊತ್ತಾಗುತ್ತಿದ್ದಂತೆ ಮಗುವನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಿಲ್ಲ. ಮಗುವಿನ ಪ್ರಾಣ ಉಳಿಸುವುದು ಸಾಧ್ಯವಾಗಿಲ್ಲ.
ಮಗುವಿನ ಮೃತದೇಹವನ್ನು ಬಳಿಕ ಖಾಸಗಿ ಆಸ್ಪತ್ರೆಯಿಂದ ತ್ರಿಶ್ಶೂರ್ ಮೆಡಿಕಲ್ ಕಾಲೇಜಿಗೆ ಸ್ಥಳಾಂತರಿಸಿದ್ದು ಕೋವಿಡ್ 19 ಟೆಸ್ಟ್ಗೆ ಒಳಪಡಿಸಲಾಗಿದೆ. ಇದರ ಫಲಿತಾಂಶ ಇನ್ನೂ ಬಂದಿಲ್ಲ. ಚಲಸ್ಸೇರಿ ಪೊಲೀಸ್ ಠಾಣೆಯ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್)