More

    ಹಾಡುಹಗಲೇ ಬ್ಯಾಂಕ್ ದರೋಡೆ : 1.19 ಕೋಟಿ ರೂ. ಹಣ ಲೂಟಿ

    ಪಟ್ನ : ಸಿನಿಮೀಯ ಮಾದರಿಯಲ್ಲಿ ಗನ್​ಗಳನ್ನು ಹಿಡಿದ ದರೋಡೆಕೋರರು ಬ್ಯಾಂಕಿಗೆ ಲಗ್ಗೆ ಇಟ್ಟು, 1.19 ಕೋಟಿ ರೂಪಾಯಿ ಹಣ ದೋಚಿರುವ ಪ್ರಕರಣ ಬಿಹಾರದಿಂದ ವರದಿಯಾಗಿದೆ. ಕೇಂದ್ರದ ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರೈ ಅವರ ನಿವಾಸದ ಬಳಿಯಲ್ಲೇ ಈ ಘಟನೆ ನಡೆದಿರುವುದು ವಿಪರ್ಯಾಸ.

    ಬಿಹಾರದ ಹಾಜಿಪುರದಲ್ಲಿನ ಎಚ್​ಡಿಎಫ್​ಸಿ ಬ್ಯಾಂಕ್​​ನ ಜಾದುಹ ಶಾಖೆಯಲ್ಲಿ ಈ ದರೋಡೆ ನಡೆದಿದೆ. ಬೆಳಿಗ್ಗೆ ಶಾಖೆಯು ಸಾರ್ವಜನಿಕರ ಸೇವೆಗೆ ತೆರೆದ ಸ್ವಲ್ಪ ಸಮಯದಲ್ಲೇ 5 ಜನ ಬೈಕ್​ಗಳಲ್ಲಿ ಬಂದು, ಬ್ಯಾಂಕಿಗೆ ನುಗ್ಗಿದರು. ಸಿಬ್ಬಂದಿಯನ್ನು ಬೆದರಿಸಿ ಕ್ಯಾಶ್​ ರೂಮಿನಿಂದ ಹಣವನ್ನು ತರಿಸಿಕೊಂಡು ಸುಮಾರು 1.19 ಕೋಟಿ ರೂಪಾಯಿಗಳನ್ನು ಮೂಟೆಗಳಿಗೆ ತುಂಬಿಸಿಕೊಂಡು ಪಲಾಯನ ಮಾಡಿದರು ಎನ್ನಲಾಗಿದೆ.

    ಇದನ್ನೂ ಓದಿ: 5 ರೂಪಾಯಿ ನೋಟು ವಿನಿಮಯ ಮಾಡಿ 30 ಸಾವಿರ ರೂ. ಸಂಪಾದಿಸಿ! ಹೇಗೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ

    ಹಣದ ಮೂಟೆಗಳನ್ನು ತಮ್ಮ ಭುಜದ ಮೇಲೆ ಎತ್ತಿಕೊಂಡು ಬ್ಯಾಂಕ್​ನಿಂದ ಹೊರಹೋಗುವ ಸಮಯದಲ್ಲಿ ಈ ಖದೀಮರ ಮುಖಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಈ ಐವರನ್ನು ಗುರುತಿಸುವುದಕ್ಕಾಗಿ ಸಿಸಿಟಿವಿ ಫೂಟೇಜನ್ನು ಪರಿಶೀಲಿಸಲಾಗುತ್ತಿದೆ. ಬಾರ್ಡರ್​ ಸೀಲ್ ಮಾಡಲಾಗಿದ್ದು, ಪತ್ತೆ ಕಾರ್ಯ ಆರಂಭವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)

    8 ಜಿಲ್ಲೆಗಳಲ್ಲಿ 65,000 ಕರೊನಾ ಪ್ರಕರಣ : ಜಿಲ್ಲಾಧಿಕಾರಿಗಳಿಗೆ ಸಿಎಂ ಕ್ಲ್ಯಾಸ್!

    ನಟ ಸುಶಾಂತ್​ ಸಿಂಗ್ ಬಗೆಗಿನ ಚಲನಚಿತ್ರ ಬಿಡುಗಡೆಗೆ ತಡೆ ಇಲ್ಲ

    ಒಂದು ಹಣ್ಣಿಗೆ 1,000 ರೂ. ಬೆಲೆ ಬಾಳುವ ನೂರ್​ಜಹಾನ್ ಮಾವಿನಹಣ್ಣು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts