ಪಟ್ನ : ಸಿನಿಮೀಯ ಮಾದರಿಯಲ್ಲಿ ಗನ್ಗಳನ್ನು ಹಿಡಿದ ದರೋಡೆಕೋರರು ಬ್ಯಾಂಕಿಗೆ ಲಗ್ಗೆ ಇಟ್ಟು, 1.19 ಕೋಟಿ ರೂಪಾಯಿ ಹಣ ದೋಚಿರುವ ಪ್ರಕರಣ ಬಿಹಾರದಿಂದ ವರದಿಯಾಗಿದೆ. ಕೇಂದ್ರದ ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರೈ ಅವರ ನಿವಾಸದ ಬಳಿಯಲ್ಲೇ ಈ ಘಟನೆ ನಡೆದಿರುವುದು ವಿಪರ್ಯಾಸ.
ಬಿಹಾರದ ಹಾಜಿಪುರದಲ್ಲಿನ ಎಚ್ಡಿಎಫ್ಸಿ ಬ್ಯಾಂಕ್ನ ಜಾದುಹ ಶಾಖೆಯಲ್ಲಿ ಈ ದರೋಡೆ ನಡೆದಿದೆ. ಬೆಳಿಗ್ಗೆ ಶಾಖೆಯು ಸಾರ್ವಜನಿಕರ ಸೇವೆಗೆ ತೆರೆದ ಸ್ವಲ್ಪ ಸಮಯದಲ್ಲೇ 5 ಜನ ಬೈಕ್ಗಳಲ್ಲಿ ಬಂದು, ಬ್ಯಾಂಕಿಗೆ ನುಗ್ಗಿದರು. ಸಿಬ್ಬಂದಿಯನ್ನು ಬೆದರಿಸಿ ಕ್ಯಾಶ್ ರೂಮಿನಿಂದ ಹಣವನ್ನು ತರಿಸಿಕೊಂಡು ಸುಮಾರು 1.19 ಕೋಟಿ ರೂಪಾಯಿಗಳನ್ನು ಮೂಟೆಗಳಿಗೆ ತುಂಬಿಸಿಕೊಂಡು ಪಲಾಯನ ಮಾಡಿದರು ಎನ್ನಲಾಗಿದೆ.
ಇದನ್ನೂ ಓದಿ: 5 ರೂಪಾಯಿ ನೋಟು ವಿನಿಮಯ ಮಾಡಿ 30 ಸಾವಿರ ರೂ. ಸಂಪಾದಿಸಿ! ಹೇಗೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ
ಹಣದ ಮೂಟೆಗಳನ್ನು ತಮ್ಮ ಭುಜದ ಮೇಲೆ ಎತ್ತಿಕೊಂಡು ಬ್ಯಾಂಕ್ನಿಂದ ಹೊರಹೋಗುವ ಸಮಯದಲ್ಲಿ ಈ ಖದೀಮರ ಮುಖಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಈ ಐವರನ್ನು ಗುರುತಿಸುವುದಕ್ಕಾಗಿ ಸಿಸಿಟಿವಿ ಫೂಟೇಜನ್ನು ಪರಿಶೀಲಿಸಲಾಗುತ್ತಿದೆ. ಬಾರ್ಡರ್ ಸೀಲ್ ಮಾಡಲಾಗಿದ್ದು, ಪತ್ತೆ ಕಾರ್ಯ ಆರಂಭವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)
8 ಜಿಲ್ಲೆಗಳಲ್ಲಿ 65,000 ಕರೊನಾ ಪ್ರಕರಣ : ಜಿಲ್ಲಾಧಿಕಾರಿಗಳಿಗೆ ಸಿಎಂ ಕ್ಲ್ಯಾಸ್!