More

    ಹನುಮಾನ ಮಾಲಾಧಾರಿಗಳ ಸೇವೆ ಸ್ಮರಣೀಯ

    ದೇವರಹಿಪ್ಪರಗಿ: ನಮ್ಮ ಕಷ್ಟಕಾರ್ಪಣ್ಯಗಳನ್ನು ದೂರಮಾಡುವ ಮೂಲಕ ಹನುಮಾನ ದೇವರು ಪ್ರತಿ ಗ್ರಾಮ, ಪಟ್ಟಣದಲ್ಲಿ ಪೂಜ್ಯನೀಯ ದೈವವಾಗಿದ್ದಾನೆ ಎಂದು ಶಾಸಕ ರಾಜುಗೌಡ ಪಾಟೀಲ (ಕುದರಿಸಾಲವಾಡಗಿ) ಹೇಳಿದರು.

    ಪಟ್ಟಣದ ಗಂಗಾನಗರದಲ್ಲಿ ಶನಿವಾರ ಬಾಲಹನುಮಾನ ದೇವಸ್ಥಾನದ 10ನೇ ವರ್ಷದ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ಕಳೆದ 10 ವರ್ಷಗಳಿಂದ ಪಟ್ಟಣದ ಬಾಲಹನುಮಾನ ಜಾತ್ರೆ ಮಾಲಾಧಾರಿಗಳ ನೇತೃತ್ವದಲ್ಲಿ ವಿಜೃಂಭಣೆಯಿಂದ ಜರುಗುತ್ತಿರುವುದು ಅವರ ಭಕ್ತಿಭಾವಕ್ಕೆ ಸಾಕ್ಷಿಯಾಗಿದೆ. ಕ್ಷೇತ್ರದಲ್ಲಿ ಕೆರೆ, ಕಾಲುವೆಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಹನುಮನ ಆಶೀರ್ವಾದದಿಂದ ದೇಶದಲ್ಲಿ ಸಮೃದ್ಧತೆ ಕಾಣುವಂತಾಗಲಿ ಎಂದರು.

    ಮುಖಂಡ ಬಿ.ಕೆ.ಪಾಟೀಲ ಮಾತನಾಡಿ, ರಾಮಾಯಣದಲ್ಲಿ ಮುಖ್ಯ ಪಾತ್ರ ವಹಿಸಿದ ಹನುಮಂತ ಈ ರಾಷ್ಟ್ರದ ಎಲ್ಲ ಜಾತಿ, ಮತ, ಸಮುದಾಯಗಳಿಂದ ಪೂಜಿಸ್ಪಡುವ ಏಕೈಕ ದೇವ ಎಂದರೂ ತಪ್ಪಾಗಲಾರದು ಎಂದರು.

    ಧಾರವಾಡದ ಶ್ರೀ ಗುರು ಚೈತನ್ಯ ಆಶ್ರಮದ ಸರ್ಪಭೂಷಣ ದೇವರು, ಪಟ್ಟಣದ ಪರದೇಶಿಮಠ ಶಿವಯೋಗಿ ಶ್ರೀಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

    ಜಾತ್ರಾ ಮಹೋತ್ಸವದ ಅಂಗವಾಗಿ ನಿಂಗು ಯಂಭತ್ನಾಳ ನೇತೃತ್ವದಲ್ಲಿ ಮಾಲಾಧಾರಿಗಳು ಬೆಳಗ್ಗೆ ಹೋಮ ಹವನ, ಪೂಜಾವಿಧಿ ವಿಧಾನಗಳನ್ನು ಶಾಸೋಕ್ತವಾಗಿ ನೆರವೇರಿಸಿ ನಂತರ ಮಹಾಪ್ರಸಾದ ವಿತರಿಸಿದರು.

    ನಿವೃತ್ತ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಸಿ.ಕೆ.ಕುದರಿ, ವಿಜಯಪುರ ಅನುಗ್ರಹ ಆಸ್ಪತ್ರೆಯ ದತ್ತಾತ್ರೇಯ ಹೊಸಮಠ, ಸಮೃದ್ಧಿ ಸಹಕಾರ ಸಂಘದ ಉಪಾಧ್ಯಕ್ಷ ರಿಯಾಜ್ ಯಲಗಾರ, ಪಟ್ಟಣ ಪಂಚಾಯಿತಿ ಸದಸ್ಯರಾದ ರಮೇಶ ಮಸಬಿನಾಳ, ಕಾಸುಗೌಡ ಬಿರಾದಾರ (ಜಲಕತ್ತಿ), ಗುರುರಾರ ಗಡೇದ, ಕಾಶೀನಾಥ ಭಜಂತ್ರಿ, ಮಂಗಳೇಶ ಕಡ್ಲೇವಾಡ, ಉಮೇಶ ರೂಗಿ, ರಾಜು ಮೆಟಗಾರ, ಸಹಿತ ಶಂಕರಗೌಡ ಪಾಟೀಲ(ಯರನಾಳ), ವಿನೋದ ಪಾಟೀಲ, ಮುನ್ನಾ ಮಳಖೇಡ, ಮಕಬೂಲ್ ಬಾಗವಾನ, ಹಾಜೀಲಾಲ್ ಮಸಳಿ, ಸೋಮು ದೇವೂರ, ಪ್ರಕಾಶ ಮಲ್ಲಾರಿ, ವಿನೋದ ಚವ್ಹಾಣ, ಮಲ್ಲು ಜಮಾದಾರ, ಕಾಶೀನಾಥ ತಳಕೇರಿ, ಪ್ರಕಾಶ ಗುಡಿಮನಿ ಹಾಗೂ ಜಾತ್ರಾ ಕಮಿಟಿಯ ಸದಸ್ಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts