More

    ಹಣಕಾಸಿನ ಗಲಾಟೆಯಲ್ಲಿ ರೌಡಿಶೀಟರ್ ಕೊಲೆ

    ಸವಣೂರ: ಹಣಕಾಸಿನ ವಿಚಾರವಾಗಿ ಗಲಾಟೆ ನಡೆದು ರೌಡಿಶೀಟರ್​ನನ್ನು ಕೊಡಲಿಯಿಂದ ಬರ್ಬರವಾಗಿ ಕೊಚ್ಚಿ ಕೊಲೆಗೈದ ಘಟನೆ ಪಟ್ಟಣದ ಕಾರಡಗಿ ಕ್ರಾಸ್ ಬಳಿ ಭಾನುವಾರ ಸಂಜೆ ಸಂಭವಿಸಿದೆ.

    ಗೋವಾದ ಅನ್ವರಶೇಖ್ ಅಲಿಯಾಸ್ ಹಜರತ್ (40) ಕೊಲೆಯಾದ ರೌಡಿಶೀಟರ್. ಇಮ್ರಾನ್ ಚೌದ್ರಿ (30) ಕೊಲೆ ಮಾಡಿದ ಆರೋಪಿ. ಅನ್ವರಶೇಖ್ ಗೋವಾದಲ್ಲಿ ವಾಸವಾಗಿದ್ದ. ಇಮ್ರಾನ್, ಕಾರಡಗಿ ಕ್ರಾಸ್ ಬಳಿ ಗ್ಯಾರೇಜ್ ಇಟ್ಟುಕೊಂಡಿದ್ದ. ಇಬ್ಬರ ನಡುವೆ ಹಣಕಾಸಿನ ವಿಚಾರವಾಗಿ ಆಗಾಗ ಜಗಳ ನಡೆಯುತ್ತಿತ್ತು. ಭಾನುವಾರ ಸಂಜೆ ಅನ್ವರಶೇಖ್ ಗೋವಾದಿಂದ ಬಂದು ಇಮ್ರಾನ್ ಬಳಿ ಹಣ ಕೇಳಿದ್ದಾನೆ. ಇದರಿಂದ ಇಬ್ಬರ ನಡುವೆ ಜಗಳವಾಗಿದೆ. ಜಗಳ ವಿಕೋಪಕ್ಕೆ ತಿರುಗಿ ಅನ್ವರಶೇಖ್ ಕಾರಿನಲ್ಲಿದ್ದ ಕೊಡಲಿ ತೆಗೆದುಕೊಂಡು ಇಮ್ರಾನ್​ಗೆ ಹೊಡೆಯಲು ಮುಂದಾಗಿದ್ದಾನೆ. ಇಮ್ರಾನ್ ಅದೇ ಕೊಡಲಿಯನ್ನು ಕಸಿದುಕೊಂಡು ಅನ್ವರಶೇಖ್​ನ ತಲೆ, ಮುಖ ಹಾಗೂ ಕುತ್ತಿಗೆಗೆ ಹೊಡೆದು ಕೊಲೆ ಮಾಡಿದ್ದಾನೆ. ನಂತರ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ, ಕೊಲೆ ಮಾಡಿರುವ ವಿಚಾರ ತಿಳಿಸಿದ್ದಾನೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಎಸ್ಪಿ ಹನುಮಂತರಾಯ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಸವಣೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts