More

    ಸೈನಿಕ ಶಾಲೆಯಲ್ಲಿ ಹವಾಮಾನ ಕೇಂದ್ರ ಉದ್ಘಾಟನೆ

    ಕುಶಾಲನಗರ: ಕೂಡಿಗೆಯ ಸೈನಿಕ ಶಾಲೆಯ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ಹವಾಮಾನ ಕೇಂದ್ರವನ್ನು ಆಡಳಿತ ಮಂಡಳಿಯ ಅಧ್ಯಕ್ಷ ಏರ್ ವೈಸ್ ಮಾರ್ಷಲ್ ಪಿ.ಕೆ.ಘೋಷ್ ಶನಿವಾರ ಉದ್ಘಾಟಿಸಿದರು.

    ಈ ಹವಾಮಾನ ಕೇಂದ್ರವು ಉಷ್ಣಾಂಶ ಮಾಪನ, ಮಳೆ ಮಾಪನ, ವಾಯು ದಿಕ್ಸೂಚಿ, ಸ್ಟಿವನ್ ಸನ್ ಸ್ಕ್ರೀನ್ ಮೊದಲಾದ ಆಧುನಿಕ ಉಪಕರಣಗಳನ್ನೊಳಗೊಂಡಿದ್ದು, ವಿದ್ಯಾರ್ಥಿಗಳ ಚಟುವಟಿಕೆ ಆಧಾರಿತ ಕಲಿಕೆಗೆ ಪೂರಕವಾಗಿದೆ ಘೋಷ್ ತಿಳಿಸಿದರು.

    ಆಡಳಿತ ಮಂಡಳಿ ಸಭೆಯಲ್ಲಿ ಪ್ರಾಂಶುಪಾಲ ಆರ್.ಆರ್.ಲಾಲ್, ಆಡಳಿತಾಧಿಕಾರಿ ಕರ್ನಲ್ ಜಿ.ಕಣ್ಣನ್, ಆಡಳಿತಾಧಿಕಾರಿಗಳಾದ ಲೆಫ್ಟಿನೆಂಟ್ ಕರ್ನಲ್ ಅಜಿತ್ ಸಿಂಗ್, ಮೈಸೂರಿನ ಪ್ರಾದೇಶಿಕ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ವಿ.ಪ್ರಸಾದ್, ಕೊಡಗು ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ವೇದಮೂರ್ತಿ, ಮೈಸೂರಿನ ಸಿಪಿಡಬ್ಲ್ಯೂಡಿ ಕಾರ್ಯನಿರ್ವಾಹಕ ಅಭಿಯಂತರ ಮಲ್ಲಿಕಾರ್ಜುನ್, ಸಹಾಯಕ ಅಭಿಯಂತರ ಎಂ.ಎಸ್.ಚಂದ್ರಶೇಖರ್, ಎಲೆಕ್ಟ್ರಿಕಲ್ ಸಹಾಯಕ ಅಭಿಯಂತರ ಟಿ.ನಾಗೇಂದ್ರ, ಕಿರಿಯ ಅಭಿಯಂತರ ಆಶಾ ರಾಮ್ ಹಾಗೂ ಪೋಷಕರ ಪ್ರತಿನಿಧಿಯಾದ ಪ್ರಕಾಶ್ ಕೃಷ್ಣಭಟ್ ಜೋಷಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts