More

    ಸೈಕ್ಲೋನ್ ಎಫೆಕ್ಟ್: ಬೇಯಿಸಿದ ಅಡಕೆಗೆ ಫಂಗಸ್; ನೆಲಕಚ್ಚಿದ ಗುಣಮಟ್ಟ

    ಆನಂದಪುರ: ಸೈಕ್ಲೋನ್ ಪರಿಣಾಮ ಎರಡ್ಮೂರು ದಿನ ಮಳೆಯಾಗಿದ್ದರಿಂದ ಅಡಕೆ ಸಂಸ್ಕರಣೆಗೆ ತೊಂದರೆಯಾಗಿದ್ದು, ಗುಣಮಟ್ಟ ಕಳೆದುಕೊಂಡಿದೆ.
    ಮಂಗಳವಾರ ಬೆಳಗ್ಗೆ ಬಿಸಿಲು ಕಾಣಿಸಿಕೊಂಡು ರೈತರ ಮೊಗದಲ್ಲಿ ಹರ್ಷ ಮೂಡಿಸಿತ್ತು. ಆದರೆ ಮಧ್ಯಾಹ್ನ ಮತ್ತೆ ಮೋಡವಾಗಿ ತುಂತುರು ಮಳೆಯಾಗಿದೆ. ಇದರಿಂದ ಅಡಕೆ ಒಣಗಿಸುವುದು ಸವಾಲಿನ ಕೆಲಸವಾಗಿದೆ.
    ಬೇಯಿಸಿದ ಅಡಕೆ ಒಣಗಿಸಲು ಬಿಸಿಲು ಇಲ್ಲ. ಮನೆ ಮುಂದಿನ ಕಟ್ಟೆ ಮೇಲೆ, ಅಂಗಳದಲ್ಲಿ ಬೇಯಿಸಿದ ಅಡಕೆಯನ್ನು ಟಾರ್ಪಲ್‌ನಲ್ಲಿ ಹರಡಿದ್ದಾರೆ. ಬೇಯಿಸಿದ ನಂತರ 24 ಗಂಟೆಯೊಳಗೆ ಒಣಗಿಸದ ಕಾರಣ ಹಲವು ರೈತರ ಅಡಕೆಗೆ ಬೂಸ್ಟ್ ಆವರಿಸಿದೆ. ಅಡಕೆ ಒಳಭಾಗದಲಿಯೂ ಫಂಗಸ್ ಹಿಡಿದಿದೆ. ಗೇರುಬೀಸು, ಸುಳಗೋಡು, ಮುಂಬಾಳು, ಹೊಸೂರು, ಜಂಬೂರಮನೆ, ಚನ್ನಶೆಟ್ಟಿಕೊಪ್ಪ ಮತ್ತಿತರ ಗ್ರಾಮಗಳಲ್ಲಿ ಅಡಕೆ ಒಣಗಿಸಲು ಹರಸಾಹಸ ಮಾಡುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts