More

    ಸುಸ್ಥಿರ ಅಭಿವೃದ್ಧಿಗೆ ಗ್ರಾಪಂ ಸದಸ್ಯರು ಕೈಜೋಡಿಸಿ

    ಔರಾದ್: ಸುಸ್ಥಿರ ಅಭಿವೃದ್ಧಿ ಗುರಿಗಳು ವಿಶ್ವಸಂಸ್ಥೆಯ 2030ರ ಕಾರ್ಯಸೂಚಿಯ ಭಾಗವಾಗಿದ್ದು, ಇವುಗಳನ್ನು ಸಾಧಿಸಲು ಸಮಗ್ರ ಸಾಕ್ಷ್ಯ ಆಧರಿತ ಚೌಕಟ್ಟಿನಲ್ಲಿ 17 ವಿವಿಧ ಗುರಿಗಳು, 169 ಉದ್ದೇಶಿತ ಧ್ಯೇಯಗಳು ಹಾಗೂ 232 ಸೂಚಕಗಳನ್ನು ಒದಗಿಸಲಾಗಿದೆ. ಗ್ರಾಪಂ ಸದಸ್ಯರು ಗ್ರಾಮ ಮಟ್ಟದಲ್ಲಿ ಹವಾಮಾನಕ್ಕೆ ಸಂಬಂಧಿಸಿದ ಯೋಜನೆಗಳನ್ನು ಅಳವಡಿಸಿಕೊಳ್ಳುವಂತೆ ತಾಪಂ ಇಒ ಬಿರೇಂದ್ರಸಿಂಗ್ ಠಾಕೂರ್ ತಿಳಿಸಿದರು.

    ತಾಪಂ ಸಭಾಂಗಣದಲ್ಲಿ ಬುಧವಾರ ರಿಲಯನ್ಸ್ ಫೌಂಡೇಷನ್ ಬೀದರ್, ತಾಲೂಕು ಪಂಚಾಯಿತಿ ಸಹಯೋಗದಲ್ಲಿ ಗ್ರಾಪಂ ಸದಸ್ಯರಿಗೆ ಹವಾಮಾನ ಸ್ಥಿತಿ ಸ್ಥಾಪಕತ್ವ ಮತ್ತು ಸುಸ್ಥಿರ ಅಭಿವೃದ್ಧಿ ಬಗ್ಗೆ ಹಮ್ಮಿಕೊಂಡಿದ್ದ ಒಂದು ದಿನದ ಕಾಯರ್ಾಗಾರದಲ್ಲಿ ಮಾತನಾಡಿದ ಅವರು, ಬಡತನ ನಿಮರ್ೂಲನೆ, ಮಾನವ ಅಭಿವೃದ್ಧಿ, ಲಿಂಗ ಮತ್ತು ಸಾಮಾಜಿಕ ಸಮಾನತೆ ಹಾಗೂ ಹವಾಮಾನ ಬದಲಾವಣೆಯನ್ನು ಪರಿಹರಿಸಲು ಹಲವಾರು ನೀತಿಗಳು, ಸ್ಕೀಮ್ಗಳು ಮತ್ತು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಅರಣ್ಯ ಪ್ರದೇಶದೊಳಗೆ ಮತ್ತು ಹೊರಗೆ ತ್ಯಾಜ್ಯ ನಿರ್ವಹಣೆ, ಸೌರ, ಮಣ್ಣು ಮತ್ತು ನೀರಿನ ಸಂರಕ್ಷಣೆಗೆ ಉತ್ತೇಜನ ನೀಡಬೇಕಾಗಿದೆ ಎಂದರು.

    ರಿಲಯನ್ಸ್ ಫೌಂಡೇಷನ್ ಜಿಲ್ಲಾ ಯೋಜನಾಧಿಕಾರಿ ರಾಮಚಂದ್ರ ಶೇರಿಕಾರ ಮಾತನಾಡಿ, ಹವಾಮಾನ ಸಂಬಂಧಿತ ವಿಪತ್ತುಗಳಿಂದ ಉಂಟಾಗುವ ಮಾನವ ಮತ್ತು ಆಥರ್ಿಕ ನಷ್ಟವನ್ನು ಕಡಿಮೆ ಮಾಡಲು ಏಳು ಗುರಿಗಳನ್ನು ಹೊಂದಲಾಗಿದೆ. ಅವು ಹವಾಮಾನ ಮತ್ತು ಅಪಾಯಗಳನ್ನು ನಿರ್ವಹಿಸಲು ರಾಷ್ಟ್ರಗಳು ಮತ್ತು ಸಮುದಾಯಗಳಿಗೆ ಗಣನೀಯವಾಗಿ ಸಹಾಯ ಮಾಡುತ್ತವೆ. ಪ್ರಸ್ತುತ ಹವಾಮಾನ ಸ್ಥಿತಿಸ್ಥಾಪಕತ್ವದ ಪ್ರಯತ್ನಗಳು ಸಾಮಾಜಿಕ, ಆಥರ್ಿಕ, ತಾಂತ್ರಿಕ ಮತ್ತು ರಾಜಕೀಯ ಕಾರ್ಯತಂತ್ರಗಳನ್ನು ಸಮಾಜದ ಎಲ್ಲ ಮಾಪಕಗಳಲ್ಲಿ ಅಳವಡಿಸಲಾಗಿದೆ. ಇಂದಿನ ಯುವ ಪೀಳಿಗೆ ಇದರ ಬಗ್ಗೆ ಗಂಭೀರ ಚಿಂತನೆ ಮಾಡುವ ಅಗತ್ಯವಿದೆ ಎಂದರು.

    ತಾಪಂ ಸಹಾಯಕ ನಿದರ್ೇಶಕ ಸುದೇಶ ಕೋಟೆ, ಹಣಮಂತರಾವ ಕೌಟಗೆ, ಪಪಂ ಮುಖ್ಯಾಧಿಕಾರಿ ಶಿವಕುಮಾರ ಘಾಟೆ ಹವಾಮಾನ ಸ್ಥಿತಿ ಸ್ಥಾಪಕತ್ವ ಮತ್ತು ಸುಸ್ಥಿರ ಅಭಿವೃದ್ಧಿ ಬಗ್ಗೆ ಹಲವಾರು ಸಂಗತಿಗಳನ್ನು ತಿಳಿಸಿದರು. ಸಂಪನ್ಮೂಲ ವ್ಯಕ್ತಿ ರಾಜೇಂದ್ರ ಮಾಳಿ ವಿಶೇಷ ಉಪನ್ಯಾಸ ನೀಡಿದರು.

    ರಿಲಯನ್ಸ್ ಸಹಾಯಕ ಯೋಜನಾಧಿಕಾರಿ ಸಂಗಪ್ಪ ಅತಿವಾಳ, ಧೂಪತ್ಮಹಾಗಾಂವ ಗ್ರಾಪಂ ಅಧ್ಯಕ್ಷ ಶ್ರೀನಿವಾಸ ಜೊನ್ನೇಕೇರೆ, ಬಾದಲಗಾಂವ ಗ್ರಾಪಂ ಅಧ್ಯಕ್ಷೆ ಅನೀತಾ ಬಿರಾದಾರ, ಮಲ್ಲಪ್ಪ ಗೌಡ, ಬಸವರಾಜ ಸ್ವಾಮಿ, ವಿಷ್ಣು ಕುಲಕಣರ್ಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts