More

    ಸಿಂಸೆಯಲ್ಲಿ ನಾಲ್ವರು ಬಾಂಗ್ಲಾದೇಶಿಗರು ಪತ್ತೆ

    ಎನ್.ಆರ್.ಪುರ: ತಾಲೂಕಿನ ಸಿಂಸೆಯ ಭೋವಿ ಕಾಲನಿಯಲ್ಲಿ ಅಕ್ರಮವಾಗಿ ನೆಲೆಸಿದ್ದ ನಾಲ್ವರು ಬಾಂಗ್ಲಾದೇಶಿಯರನ್ನು ಪತ್ತೆಹಚ್ಚಿರುವ ಪೊಲೀಸರು ಅವರೆಲ್ಲರನ್ನೂ ನಿರಾಶ್ರಿತರ ಕೇಂದ್ರಕ್ಕೆ ಸ್ಥಳಾಂತರಿಸಿದ್ದಾರೆ.

    ಪಿಎಸ್​ಐ ವಿ.ಟಿ.ದಿಲೀಪ್​ಕುಮಾರ್ ಜು.19ರಂದು ಬಿ.ಎಚ್.ಕೈಮರದಲ್ಲಿ ಗಸ್ತು ತಿರುಗುತ್ತಿರುವ ವೇಳೆ ಸಿಂಸೆಯ ಬಾಡಿಗೆ ಮನೆಯಲ್ಲಿ ನಾಲ್ವರು ಬಾಂಗ್ಲಾದೇಶಿಯರು ವಾಸವಾಗಿರುವ ಮಾಹಿತಿ ಲಭ್ಯವಾಗಿದೆ. ತಕ್ಷಣ ಸಿಂಸೆಯಲ್ಲಿ ವಿಚಾರಣೆ ನಡೆಸಿದಾಗ ಅವರಿಗೆ ಬಾಂಗ್ಲಾ ಬಿಟ್ಟು ಬೇರೆ ಭಾಷೆ ಬರುತ್ತಿರಲಿಲ್ಲ. ಬಳಿಕ ಬಾಂಗ್ಲಾ ಭಾಷೆ ಮಾತನಾಡಲು ಬರುವ ಕೈಮರದ ನಯಾನ್ ಅಲಿ ಸಹಾಯದಿಂದ ವಿಚಾರಣೆ ಮಾಡಿದಾಗ ಕೆಲಸ ಹುಡುಕಿಕೊಂಡು ಭಾರತಕ್ಕೆ ಬಂದಿದ್ದು ಇಲ್ಲಿ ಗಾರೆ ಕೆಲಸ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ.

    ಬಾಂಗ್ಲಾದೇಶದ ಎಂ.ಡಿ.ಖೈರುಲ್, ಎಂ.ಡಿ.ರುಹಲ್ ಅಮೀನ್, ಮೋಮಿನ್, ಮುರ್​ಸಲೀಂ ಎಂದು ಗುರುತಿಸಲಾಗಿದ್ದು ಅಲ್ಲಿನ ವಿಳಾಸ, ಜನ್ಮ ದಿನಾಂಕದ ದೃಢೀಕರಣ ಪತ್ರ ಪಡೆದಿರುವ ಪೊಲೀಸರು ಬಾಂಗ್ಲಾದೇಶಕ್ಕೆ ವಾಪಸ್ ಕಳಿಸಲು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಸದ್ಯ ನಾಲ್ವರನ್ನು ಚಿಕ್ಕಮಗಳೂರಿನ ನಿರಾಶ್ರಿತ ಕೇಂದ್ರಕ್ಕೆ ಕಳಿಸಲಾಗಿದೆ ಎಂದು ಪಿಎಸ್​ಐ ವಿ.ಟಿ.ದಿಲೀಪ್​ಕುಮಾರ್ ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts