More

    ಸರ್ಕಾರಿ ಶಾಲೆಗೆ ಸೌಲಭ್ಯ ಕಲ್ಪಿಸುವ ಭರವಸೆ

    ಹುಬ್ಬಳ್ಳಿ: ತಾಲೂಕಿನ ಹೆಬಸೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಗೆ ಭೇಟಿ ನೀಡಿದ ಕರ್ನಾಟಕ ನಗರ ಮೂಲ ಸೌಕರ್ಯ ಹಾಗೂ ಹಣಕಾಸು ನಿಗಮ ಅಧ್ಯಕ್ಷ ಹಾಗೂ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಅಲ್ಲಿನ ಕುಂದುಕೊರತೆ ಆಲಿಸಿದರು.

    ತಾಪಂ, ಗ್ರಾಪಂ ಸದಸ್ಯರು, ಎಸ್​ಡಿಎಂಸಿ ಪದಾಧಿಕಾರಿಗಳು, ಶಿಕ್ಷಣ ಪ್ರೇಮಿಗಳು ಮತ್ತು ಶಿಕ್ಷಕರು ಹಾಗೂ ಪಾಲಕರ ಸಮ್ಮುಖದಲ್ಲಿ ಶಾಲಾಭಿವೃದ್ಧಿ ಕುರಿತು ರ್ಚಚಿಸಿದರು. ಅಗತ್ಯ ಸೌಲಭ್ಯ ಕಲ್ಪಿಸಲು ಸ್ಥಳದಲ್ಲಿಯೇ ಅಧಿಕಾರಿಗಳಿಗೆ ಸೂಚಿಸಿದರು.

    ಸರ್ಕಾರಿ ಶಾಲೆಗಳಿಗೆ ಖುದ್ದಾಗಿ ಆಗಮಿಸಿ ಅಹವಾಲು ಸ್ವೀಕರಿಸಿದ ಶಾಸಕರಿಗೆ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ ಸಜ್ಜನ ಅಭಿನಂದಿಸಿದರು.

    ಸಂಭಾಜಿ ಕಲಾಲ, ಮುತ್ತು ಚಾಕಲಬ್ಬಿ, ಅಶೋಕ ಮಂಡಿಗನಾಳ, ಸುರೇಶ ಬಣವಿ, ಶಿವಾನಂದ ಲದ್ದಿ, ಸುರೇಶ ಹೂಗಾರ, ಹನುಮರಡ್ಡಿ ಬಲ್ಲರವಾಡ, ಕಲ್ಮೇಶ ಉಳ್ಳಾಗಡ್ಡಿ, ಗುರುನಾಥ ಹೊಸಮನಿ, ಎಸ್.ಎಲ್. ಬೆಟಗೇರಿ, ಪಿ.ಬಿ. ಗಿರಡ್ಡಿ, ರವಿ ತೆಗ್ಗಿನಕೇರಿ, ಡಿ.ಎಂ. ಪತ್ತಾರ ಮುಂತಾದವರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts