More

    ಸಮಾಜಕ್ಕೆ ಮಠಗಳ ಕೊಡುಗೆ ಅನನ್ಯ

    ಕಾಳಗಿ: ಜನರ ಸಂಕಷ್ಟಗಳನ್ನು ನಿವಾರಿಸುವಲ್ಲಿ ಮಠಗಳು ಶ್ರಮಿಸುತ್ತಿದ್ದು, ಸಮಾಜದಲ್ಲಿನ ಜನರಿಗೆ ಸೂಕ್ತ ಮಾರ್ಗದರ್ಶನ ನೀಡಿ ಉತ್ತಮ ದಾರಿಯಲ್ಲಿ ಕೊಂಡೊಯ್ಯುತ್ತಿರುವುದು ಶ್ಲಾಘನೀಯ. ಸಮುದಾಯಕ್ಕೆ ಮಠಗಳ ಕೊಡುಗೆ ಅಪಾರವಿದೆ ಎಂದು ಸಂಸದ ಡಾ.ಉಮೇಶ ಜಾಧವ್ ಹೇಳಿದರು.

    ರೇವಗ್ಗಿ(ರಟಕಲ್) ರೇವಣಸಿದ್ಧೇಶ್ವರ ಗುಡ್ಡದಲ್ಲಿ ಗೋಪಾಲದೇವ ಜಾಧವ್ ಮೆಮೋರಿಯಲ್ ಟ್ರಸ್ಟ್ನಿಂದ ನಿರ್ಮಿಸಿರುವ 51 ಅಡಿ ಎತ್ತರದ ಜಗದ್ಗುರು ರೇಣುಕಾಚಾರ್ಯರ ಮೂರ್ತಿಯನ್ನು ಸೋಮವಾರ ಅನಾವರಣಗೊಳಿಸಿ ಮಾತನಾಡಿ, ಇದೊಂದು ಅತಿ ಪುಣ್ಯ ಭೂಮಿಯಾಗಿದೆ. ಅಪಾರ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಅವರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಕ್ಷೇತ್ರ ವಿಕಾಸಕ್ಕೆ ಇನ್ನಷ್ಟು ಕಾರ್ಯಕ್ರಮ ಹಾಕಿಕೊಳ್ಳಲಾಗುವುದು ಎಂದರು.

    ಬೆಣ್ಣೆತೋರಾ ಜಲಾಶಯದಿಂದ 245 ಕೋಟಿ ರೂ. ವೆಚ್ಚದಲ್ಲಿ ಜೆಜೆಎಂ ಯೋಜನೆಯಡಿ ರೇವಗ್ಗಿಯಲ್ಲಿ ಎರಡು ಎಕರೆಯಲ್ಲಿ ನೀರು ಶೇಖರಣೆ ಘಟಕ ಸ್ಥಾಪಿಸಲಾಗಿದ್ದು, ಸುಮಾರು 97 ಹಳ್ಳಿಗಳಿಗೆ ಕುಡಿವ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಸಕ್ಕರೆ ಕಾರ್ಖಾನೆ, ಐನಾಪುರ ಏತ ನೀರಾವರಿ ಯೋಜನೆ ಜಾರಿ ಮಾಡುವ ಮೂಲಕ ಅನೇಕ ಅಭಿವೃದ್ಧಿ ಕಾರ್ಯ ಮಾಡಲಾಗಿದೆ. ಎಲ್ಲರ ಸೇವಕನಾಗಿ ದುಡಿಯುತ್ತಿರುವ ಡಾ.ಅವಿನಾಶ ಜಾಧವ್ಗೆ ಮತ್ತೊಮ್ಮೆ ಬೆಂಬಲಿಸಿ ಎಂದು ಮನವಿ ಮಾಡಿದರು.

    ರಟಕಲ್ ಶ್ರೀ ಸಿದ್ಧರಾಮ ಸ್ವಾಮೀಜಿ, ನರನಾಳದ ಶ್ರೀ ಶಿವಕುಮಾರ ಶಿವಾಚಾರ್ಯರು ಆಶೀರ್ವಚನ ನೀಡಿದರು. ಶಾಸಕ ಡಾ.ಅವಿನಾಶ ಜಾಧವ್ ಮಾತನಾಡಿದರು.
    ಹೊನ್ನಕಿರಣಗಿಯ ಶ್ರೀ ಚಂದ್ರಗುಂಡ ಶಿವಾಚಾರ್ಯರು, ಸೊನ್ಯಾಲಗಿರಿಯ ಶ್ರೀ ಪರ್ವತಲಿಂಗ ಪರಮೇಶ್ವರ ಮಹಾರಾಜರು, ರಟಕಲ್ನ ಶ್ರೀ ರೇವಣಸಿದ್ಧ ಶಿವಾಚಾರ್ಯರು, ಸೂಗೂರು(ಕೆ)ದ ಶ್ರೀ ಡಾ.ಚನ್ನರುದ್ರಮುನಿ ಶಿವಾಚಾರ್ಯರು, ಚಂದನಕೇರಾದ ಶ್ರೀ ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ಕೋಡ್ಲಿಯ ಶ್ರೀ ಬಸವಲಿಂಗ ಶಿವಾಚಾರ್ಯರು, ಗೌರಿಗುಡ್ಡದ ಶ್ರೀ ರೇವಣಸಿದ್ದ ಶರಣರು ಸಾನ್ನಿದ್ಯ ವಹಿಸಿದ್ದರು.

    ಗ್ರೇಡ್-1 ತಹಸೀಲ್ದಾರ್ ಸಂಗಯ್ಯ ಸ್ವಾಮಿ, ನಾಗನಾಥ ತರಗೆ, ಶಿವರಾಜ ಪಾಟೀಲ್ ಗೊಣಗಿ, ಬಸವರಾಜ ಪಾಟೀಲ್ ಬೆಡಸೂರ, ಇಮ್ತಿಯಾಜ್ ಅಲಿ ಹೆರೂರ್, ರಾಜು ಜಾಧವ್, ದತ್ತಾತ್ರೇಯ ರಾಯಗೋಳ, ಸಂಜುಕುಮಾರ ತೆಳಮನಿ, ಗೊರಕನಾಥ ರಾಠೋಡ್, ಸಿದ್ದಯ್ಯ ಮಠಪತಿ, ಸಿದ್ದು ಚಟ್ನಳ್ಳಿ, ರೇವಣಸಿದ್ಧ ಬಡಾ, ನಾಗೇಶ ಬಿರಾದಾರ, ವೀರಯ್ಯ ಮಠಪತಿ ಮುಕರಂಬಾ, ಶಾಂತಕುಮಾರ ನಾಗೂರ, ಬಸವರಾಜ ಹುಡುಗಿ, ರವಿ ಸಿಂಗೆ, ಶಿವಶರಣಪ್ಪ ಚನ್ನೂರ, ಗಂಗಾಧರಸ್ವಾಮಿ ರೇವಗ್ಗಿ, ವಿಜಯಕುಮಾರ ಚೇಂಗಟಾ, ಪ್ರಶಾಂತ ಕದಮ, ರಮೇಶ ಕಿಟ್ಟದ, ರಾಮು ರಾಠೋಡ್, ಶರಣು ಬುಬಲಿ, ಜಗನ್ನಾಥ ತೇಲಿ, ಸುಂದರ ಡಿ. ಸಾಗರ, ಇತರರಿದ್ದರು.

    ರೇವಣಸಿದ್ಧೇಶ್ವರ ಗುಡ್ಡ ಪವಿತ್ರ ಸ್ಥಳ. ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಕಾಮಧೇನು. ನನ್ನ ತಂದೆ ಹೆಸರಿನ ಗೋಪಾಲದೇವ ಜಾಧವ್ ಮೆಮೋರಿಯಲ್ ಟ್ರಸ್ಟಿನಿಂದ 51 ಅಡಿ ಎತ್ತರದ ರೇಣುಕಾಚಾರ್ಯರ ಮೂರ್ತಿ ಮರು ಪ್ರತಿಷ್ಠಾಪಿಸಲಾಗಿದ್ದು, ದೇವಸ್ಥಾನ ಅಭಿವೃದ್ಧಿಗೆ ಸದಾ ಶ್ರಮಿಸುವೆ.
    | ಡಾ.ಉಮೇಶ ಜಾಧವ್, ಸಂಸದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts