More

    ಸತೀಶ್ ಜಾರಕಿಹೊಳಿಗೆ ಕೊಡಿ ಡಿಸಿಎಂ ಪಟ್ಟ- ಮಾನವ ಸಂಕಲ್ಪ ವೇದಿಕೆ ಒತ್ತಾಯ 

    ದಾವಣಗೆರೆ: ಕಾಂಗ್ರೆಸ್ಸಿನ ಫಲಿತಾಂಶಕ್ಕೆ ಕಾರಣೀಕರ್ತರಲ್ಲಿ ಒಬ್ಬರಾದ, ಎಸ್ಟಿ ಸಮುದಾಯದ ಪ್ರಭಾವಿ ಮುಖಂಡ ಸತೀಶ್ ಜಾರಕಿಹೊಳಿ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಹಾಗೂ ಸಂಪುಟದಲ್ಲಿ ಪ್ರಮುಖ ಖಾತೆಯನ್ನು ನೀಡಬೇಕೆಂದು ಮಾನವ ಸಂಕಲ್ಪ ವೇದಿಕೆ ಹಾಗೂ ಸತೀಶ್ ಜಾರಕಿಹೊಳಿ ಅಭಿಮಾನಿಗಳ ಬಳಗ ಆಗ್ರಹಿಸಿದೆ.
    ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಡಾ.ಎ.ಬಿ.ರಾಮಚಂದ್ರಪ್ಪ ಹಾಗೂ ಸತೀಶ್ ಜಾರಕಿಹೊಳಿ ಅಭಿಮಾನಿಗಳ ಬಳಗದ ಮುಖಂಡ ರಾಘು ದೊಡ್ಮನಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಎಸ್ಟಿ ಹಾಗೂ ಎಸ್ಸಿ ಮೀಸಲಾದ ಒಟ್ಟು 37 ಕ್ಷೇತ್ರಗಳಿಂದ ಶಾಸಕರು ಚುನಾಯಿತರಾಗಿದ್ದು ಇದಕ್ಕೆ ಸತೀಶ್ ಜಾರಕಿಹೊಳಿ ಕಾರಣರಾಗಿದ್ದಾರೆ ಎಂದರು.
    ರಾಜ್ಯದಲ್ಲಿ ಈ ಬಾರಿ ರಾಜಕೀಯ ಚಿತ್ರಣ ಬದಲಾಗಿದೆ. ಜಾತ್ಯತೀತ ಮತ್ತು ಸಂವಿಧಾನಪರ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದು ಸಾಗತಾರ್ಹ. ಎಲ್ಲ ಸಮುದಾಯಗಳು ಕಾಂಗ್ರೆಸ್‌ಗೆ ಬೆಂಬಲಿಸಿವೆ. ದಲಿತ, ಹಿಂದುಳಿದ, ಅಲ್ಪಸಂಖ್ಯಾತರು ಕೂಡ ಸ್ಪಂದಿಸಿದ್ದಾರೆ. ಅಧಿಕಾರದಲ್ಲೂ ಸಮತೋಲನವಾದಲ್ಲಿ ಸಾಮಾಜಿಕ ಪ್ರಗತಿ ಕಾಣಬಹುದು. ಹೀಗಾಗಿ ಅಧಿಕಾರದ ಸಮಾನ ಹಂಚಿಕೆ ಆಗಬೇಕು ಎಂದು ಆಗ್ರಹಿಸಿದರು.
    ಕಳೆದ ಬಾರಿ ಎಸ್ಸಿ ಶಾಸಕರಿಗೆ ಡಿಸಿಎಂ ಹುದ್ದೆ ನೀಡದೆ ವಂಚಿಸಿತು. ಈಗ ಕಾಂಗ್ರೆಸ್ ಎಚ್ಚೆತ್ತು ಎಸ್ಟಿ ವರ್ಗಕ್ಕೆ ಡಿಸಿಎಂ ಹುದ್ದೆ ನೀಡಬೇಕು. ಹಿಂದುಳಿದ, ಅಲ್ಪಸಂಖ್ಯಾತ, ಎಸ್ಸಿ, ಸಮುದಾಯ ಹಾಗೂ ಕಡಿಮೆ ಸಂಖ್ಯೆಯಲ್ಲಿ ಆಯ್ಕೆಯಾದ ಶಾಸಕಿಯರಿಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡಬೇಕೆಂದು ಒತ್ತಾಯಿಸಿದರು.
    ಕಾಂಗ್ರೆಸ್ ಪಕ್ಷದ ವಿವಿಧ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿ, ಪಕ್ಷವನ್ನು ಸಂಘಟಿಸಿದ ಸತೀಶ್ ಜಾರಕಿಹೊಳಿ ಅವರಿಗೆ ಡಿಸಿಎಂ ಹುದ್ದೆ ನೀಡಬೇಕು. ಇಲ್ಲವಾದಲ್ಲಿ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ರಾಘು ದೊಡ್ಮನಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಪಿ.ಬಿ.ಅಂಜುಕುಮಾರ್, ಕರಿಯಪ್ಪ ಮಾಳಿಗೇರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts