More

    ಸಚಿವ ನಿರಾಣಿ ಮನೆಗೆ ಸಿದ್ದು ಭೇಟಿ

    ಬಾಗಲಕೋಟೆ: ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರ ಮುಧೋಳ ನಿವಾಸಕ್ಕೆ ಮಂಗಳವಾರ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ, ಒಂದು ಟೀ ಕುಡಿದು ವಾಪಸ್ಸಾದ ಘಟನೆ ನಡೆಯಿತು.
    ಜಮಖಂಡಿ ತಾಲೂಕಿನ ಹಿರೇಪಡಸಲಗಿ ಗ್ರಾದಮ ಜಮಖಂಡಿ ಶುಗರ್ಸ್ ನಲ್ಲಿ ದಿ.ಸಿದ್ದು ನ್ಯಾಮಗೌಡ ಅವರ ಪುತ್ಥಳಿ ಅನಾವರಣ ಹಾಗೂ ಮುಧೋಳ ನಗರದಲ್ಲಿ ಮಾಜಿ ಸಚಿವ ಆರ್.ಬಿ.ತಿಮ್ಮಾಪುರ ಅವರ 60ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಿದ್ದರಾಮಯ್ಯ ಹೆಲಿಕ್ಯಾಪ್ಟರ್ ನಲ್ಲಿ ಬಂದಿದ್ದರು.
    ಹಿರೇಪಡಸಲಗಿ ಕಾರ್ಯಕ್ರಮ ಮುಗಿಸಿಕೊಂಡು ಮುಧೋಳಕ್ಕೆ ಬಂದಾಗ ಸಚಿವ ಮುರುಗೇಶ್ ನಿರಾಣಿ ಅವರ ಮನೆ ಆವರಣದ ಹೆಲಿಪ್ಯಾಡ್ ನಲ್ಲಿ ಬಂದಿಳಿದರು. ಆಗ ಸಚಿವರ ಸಹೋದರ ಸಂಗಮೇಶ್ ನಿರಾಣಿ ಅವರು ಮನೆಗೆ ಬಂದು ಟೀ ಕುಡಿದು ಹೋಗುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಮಾಜಿ ಸಿಎಂ ಮನೆಗೆ ತೆರಳಿ, ಟೀ ಕುಡಿದು ಬಳಿಕ ಕಾರ್ಯಕ್ರಮಕ್ಕೆ ತೆರಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts