ರಾಮದುರ್ಗ: ಕ್ಷುಲ್ಲಕ ಕಾರಣಕ್ಕೆ ಪಟ್ಟಣದಲ್ಲಿ ಭಾನುವಾರ ಗಲಾಟೆಯಾಗಿದ್ದು ಶ್ರೀರಾಮಸೇನೆ ಕಾರ್ಯಕರ್ತನಿಗೆ ಚಾಕು ಇರಿತವಾಗಿದ್ದು, ಇನ್ನಿಬ್ಬರ ಮೇಲೆ ಹಲ್ಲೆ ಮಾಡಲಾಗಿದೆ. ರಾಮದುರ್ಗ ಪಟ್ಟಣದ ಶ್ರೀರಾಮಸೇನೆ ಕಾರ್ಯಕರ್ತ ಗೋಪಾಲ ತಿಮ್ಮರಡ್ಡಿ ಬಂಡಿವಡ್ಡರಗೆ ಚಾಕು ಇರಿತವಾಗಿದೆ.
ರವಿ ನಾಗಪ್ಪ ಬಂಡಿವಡ್ಡರ ಎಂಬ ಯುವಕನ ತಲೆಗೆ ರಾಡ್ನಿಂದ ಹಲ್ಲೆ ಮಾಡಲಾಗಿದೆ. ಜಗಳ ಬಿಡಿಸಲು ಹೋದ ನಂಜುಂಡಿ ಸಾಬಣ್ಣ ಬಂಡಿವಡ್ಡರ ಎಂಬಾತನ ಮೇಲೆಯೂ ಹಲ್ಲೆಯಾಗಿದೆ. ಗಾಯಾಳುಗಳನ್ನು ರಾಮದುರ್ಗ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಹಲ್ಲೆ ಮಾಡಿದ ಆರೋಪಿ ಅಮೀನ ರಾಜೇಸಾಬ ಜಂಗಲ್ಶೇಖ ಎಂಬಾತನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇನ್ನುಳಿದ ಆರೋಪಿ ಪತ್ತೆಗೆ ಜಾಲ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.