More

    ಶೋಕಸಾಗರದ ಮಧ್ಯೆ ಶ್ರೀಗಳ ಅಂತ್ಯಕ್ರಿಯೆ

    ಕುಂದಗೋಳ ಧಾರವಾಡ ಮುರುಘಾಮಠದ ಹಿಂದಿನ ಪೀಠಾಧಿಪತಿ, ಶಿಗ್ಗಾಂವಿ ತಾಲೂಕಿನ ಶ್ಯಾಡಂಬಿಯ ಶ್ರೀ ಶಿವಯೋಗಿ ಸ್ವಾಮೀಜಿಯ ಪಾರ್ಥಿವ ಶರೀರದ ಅಂತ್ಯಕ್ರಿಯೆ, ಶ್ರೀಗಳ ಹುಟ್ಟೂರು ಕುಂದಗೋಳ ತಾಲೂಕಿನ ಪಶುಪತಿಹಾಳ ಗ್ರಾಮದ ಶ್ರೀ ಬಾಲಲೀಲಾ ಮಹಾಂತ ಶಿವಯೋಗಿಗಳ ಮಠದ ಆವರಣದಲ್ಲಿ ಗುರುವಾರ ಶೋಕ ಸಾಗರ ಹಾಗೂ ಅಪಾರ ಭಕ್ತ ಸಮೂಹದ ಮಧ್ಯೆ ಜರುಗಿತು.

    ಇದಕ್ಕೂ ಮುನ್ನ ಗ್ರಾಮದ ಮುಖ್ಯ ಬೀದಿಯಲ್ಲಿ ಅಂತಿಮ ಯಾತ್ರೆ ಜರುಗಿತು. ಹೊಸರಿತ್ತಿಯ ಶ್ರೀ ಗುದ್ದಲೀಶ್ವರ ಸ್ವಾಮೀಜಿ, ಇಂಗಳೇಶ್ವರದ ಶ್ರೀ ಚನ್ನಬಸವ ಸ್ವಾಮೀಜಿ, ಗರಗದ ಶ್ರೀ ವೀರೇಶ್ವರ ಸ್ವಾಮೀಜಿ, ಇಟಗಿಯ ಶ್ರೀ ಮಡಿವಾಳೇಶ್ವರ ಸ್ವಾಮೀಜಿ, ಹತ್ತಿಮತ್ತೂರಿನ ಶ್ರೀ ನಿಜಗುಣ ಶಿವಯೋಗಿಗಳು ಸೇರಿದಂತೆ ವಿವಿಧ ಮಠಾಧೀಶರ ನೇತೃತ್ವದಲ್ಲಿ ಅಂತ್ಯಕ್ರಿಯೆಯ ವಿಧಿ ವಿಧಾನಗಳು ಜರುಗಿದವು.

    ಶ್ರೀಗಳ ಪೂರ್ವಾಶ್ರಮದ ಸಹೋದರಿಯರಾದ ಪಾರ್ವತೆವ್ವ ಹಿರೇಮಠ, ಶಿವಮ್ಮ ಹಿರೇಮಠ, ಶಂಕ್ರಮ್ಮ ಹಿರೇಮಠ, ಬಂಧುಗಳಾದ ಪಂಚಾಕ್ಷರಯ್ಯ ಹಿರೇಮಠ, ಇತರರ ದುಃಖ ಮುಗಿಲು ಮುಟ್ಟಿತ್ತು. ಶಾಸಕಿ ಕುಸುಮಾವತಿ ಶಿವಳ್ಳಿ, ಮುಖಂಡರಾದ ಗುರುರಾಜ ಹುಣಸೀಮರದ, ಸುರೇಶ ಗೌಡಪ್ಪನವರ, ಎಂ.ಆರ್. ಪಾಟೀಲ, ಎಂ.ಎಸ್. ಅಕ್ಕಿ, ತಾಪಂ ಸದಸ್ಯ ಶಿವಲಿಂಗಪ್ಪ ವಡಕಣ್ಣವರ, ಗ್ರಾಪಂ ಅಧ್ಯಕ್ಷ ವೀರನಗೌಡ ಪಾಟೀಲ, ಮೃತ್ಯುಂಜಯ ಜಾವೂರ, ಶೇಖಣ್ಣ ಕಟಗಿ, ಬಸವರಾಜ ನಾಯ್ಕರ್, ಹೊನ್ನಪ್ಪ ಹಸರಾಣಿ, ತಿಪ್ಪಣ್ಣ ಡೊಳ್ಳಿನ , ಚನ್ನಬಸಪ್ಪ ಕನೋಜಿ, ಮಹಾಂತೇಶ ಡೊಳ್ಳಿನ ಇತರರು, ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts