More

    ಶಿವಮೊಗ್ಗ ಹಂದಿಅಣ್ಣಿ ಹತ್ಯೆ ಶಂಕಿತ ಆರೋಪಿಗಳು ಚಿಕ್ಕಮಗಳೂರಿನಲ್ಲಿ ಶರಣಾಗತಿ

    ಚಿಕ್ಕಮಗಳೂರು: ಶಿವಮೊಗ್ಗದಲ್ಲಿ ರೌಡಿ ಹಂದಿಅಣ್ಣಿ ಹತ್ಯೆ ಪ್ರಕರಣದ 8 ಮಂದಿ ಶಂಕಿತ ಆರೋಪಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಬಂದು ಶರಣಾಗಿದ್ದಾರೆ. ಶಂಕಿತ ಆರೋಪಿಗಳಾದ ಕಾರ್ತಿಕ್, ನಿತಿನ್, ಚಂದನ್, ಮದನ್, ಫಾರುಕ್, ಆಂಜನೇಯ, ಮಧುಸೂಧನ್, ಮಧು ಅರಸೀಕೆರೆಯಿಂದ ಬಸ್​ನಲ್ಲಿ ಚಿಕ್ಕಮಗಳೂರಿಗೆ ಆಗಮಿಸಿ ಸೋಮವಾರ ತಡರಾತ್ರಿ ಎಸ್ಪಿ ಕಚೇರಿಗೆ ಬಂದು ಎಸ್ಪಿ ಎಂ.ಎಚ್.ಅಕ್ಷಯ್ ಮುಂದೆ ಸ್ವತಃ ಶರಣಾಗಿದ್ದು ಶಿವಮೊಗ್ಗದಲ್ಲಿ ಹತ್ಯೆ ಮಾಡಿದ್ದಾರೆನ್ನಲಾದ ಶಂಕಿತ ಆರೋಪಿಗಳು ಚಿಕ್ಕಮಗಳೂರು ಪೊಲೀಸರ ಮುಂದೆ ಶರಣಾಗತಿಯಾಗಲು ಕಾರಣ ಏನೆಂಬುದು ಮಾತ್ರ ನಿಗೂಢ ರಹಸ್ಯವಾಗಿದೆ.

    ಜು.14 ರಂದು ಶಿವಮೊಗ್ಗದಲ್ಲಿ ರೌಡಿ ಹಂದಿಅಣ್ಣಿ ಹತ್ಯೆಯಾಗಿದ್ದು ಈ ಸಂಬಂಧ ವಿನೋಬ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನೆ ನಂತರ ತಲೆ ಮರೆಸಿಕೊಂಡಿದ್ದ ಆರೋಪಿಗಳ ಪತ್ತೆಗಾಗಿ ಶಿವಮೊಗ್ಗ ಪೊಲೀಸರು ಬಲೆ ಬೀಸಿದ್ದರೂ ಸುಳಿವು ಪತ್ತೆಯಾಗಿರಲಿಲ್ಲ. ಆದರೆ ಸೋಮವಾರ ರಾತ್ರಿ ಶಂಕಿತ ಆರೋಪಿಗಳು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಪತ್ಯಕ್ಷವಾಗಿ ಸ್ವಯಿಚ್ಚೆಯಿಂದ ಶರಣಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts