More

    ವೈದ್ಯಾಧಿಕಾರಿ ವರ್ಗಾವಣೆಗೆ ವಿರೋಧ

    ಶಿರಸಿ: ತಾಲೂಕಿನ ಭೈರುಂಬೆ ಆಯುರ್ವೆದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಪೂರ್ಣಿಮಾ ಅವರನ್ನು ದಿಢೀರ್ ಸಿದ್ದಾಪುರ ತಾಲೂಕು ಹೆಗ್ಗರಣಿ ಆಸ್ಪತ್ರೆಗೆ ನಿಯೋಜಿಸಿರುವುದನ್ನು ವಿರೋಧಿಸಿ ಗುರುವಾರ ಸ್ಥಳೀಯ ಮುಖಂಡರು ಆಸ್ಪತ್ರೆ ಆವರಣದಿಂದ ಗ್ರಾಮ ಪಂಚಾಯಿತಿವರೆಗೆ ಮೌನ ಮೆರವಣಿಗೆಯಲ್ಲಿ ತೆರಳಿ ಪಿಡಿಒ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

    ಭೈರುಂಬೆಯಲ್ಲಿ ಸುಸಜ್ಜಿತ ಆಸ್ಪತ್ರೆಯು ನಿರ್ವಣವಾಗಿದೆ. ಆದರೆ, ಇಲ್ಲಿರುವ ಪೂರ್ಣಾವಧಿ ವೈದ್ಯರನ್ನು ವರ್ಗಾವಣೆ ಮಾಡಿ ವಾರದಲ್ಲಿ ಎರಡು ದಿನ ಮಾತ್ರ ಸೇವೆಗೆ ಲಭ್ಯರಿರುವಂತೆ ಉಮ್ಮಚಗಿ ಆಸ್ಪತ್ರೆಯ ವೈದ್ಯರಾದ ಡಾ. ಯೋಗೇಶ ಮಡಗಾಂವಕರ ಅವರನ್ನು ನಿಯೋಜಿಸಿರುವ ಕ್ರಮ ಸರಿಯಲ್ಲ. ಮಂಗನ ಕಾಯಿಲೆ ಹಾಗೂ ಕರೊನಾ ರೋಗದ ಭಯವಿರುವ ಹಿನ್ನೆಲೆಯಲ್ಲಿ ಪೂರ್ಣಾವಧಿ ವೈದ್ಯರು ಭೈರುಂಬೆ ಆಸ್ಪತ್ರೆಗೆ ಬೇಕು. ಈಗಾಗಲೇ ಉತ್ತಮ ಚಿಕಿತ್ಸೆಗೆ ಹೆಸರಾಗಿರುವ ಕೆಲ ತಿಂಗಳ ಹಿಂದೆ ನೇಮಕವಾಗಿರುವ ಡಾ.ಪೂರ್ಣಿಮಾ ಅವರನ್ನೇ ಮುಂದುವರಿಸಬೇಕೆಂದು ಒತ್ತಾಯಿಸಿದರು. ಭೈರುಂಬೆ ಗ್ರಾಮ ಪಂಚಾಯಿತಿ ಅಧಿಕಾರಿ ಜಯವೀರ ಭಟ್ಟ ಮನವಿ ಸ್ವೀಕರಿಸಿ ಮೇಲಧಿಕಾರಿಗಳ ಗಮನಕ್ಕೆ ತರುವ ಭರವಸೆ ನೀಡಿದರು. ಈ ವೇಳೆ ಭಾರತೀಯ ಕಿಸಾನ್ ಸಂಘದ ನರಸಿಂಹ ಮೂರ್ತಿ ಅಶೀಸರ, ಎಪಿಎಂಸಿ ಸದಸ್ಯೆ ಸವಿತಾ ಹೆಗಡೆ ಹುಳಗೋಳ, ಮಧು ಭಟ್ಟ, ಶಿವರಾಮ ಹೆಗಡೆ, ಸುರೇಶ ಹಕ್ಕಿಮನೆ, ಉಮಾಪತಿ ಭಟ್ಟ ಮುಂತಾದವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts