More

    ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ

    ಹಾನಗಲ್ಲ: ಸಾಲ ಸೌಲಭ್ಯ, ಸಹಾಯಧನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಖಿಲ ಕರ್ನಾಟಕ ಕಟ್ಟಡ ಕಾರ್ವಿುಕರ ಮತ್ತು ಇತರೆ ನಿರ್ಮಾಣ ಕಾರ್ವಿುಕರ ಸಂಘದ ಪದಾಧಿಕಾರಿಗಳು ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಸೋಮವಾರ ಮನವಿ ಸಲ್ಲಿಸಿದರು.

    ಗೃಹಭಾಗ್ಯ ಯೋಜನೆಯಲ್ಲಿ ನೀಡಲಾಗುತ್ತಿರುವ 2 ಲಕ್ಷ ರೂ.ಗಳೊಂದಿಗೆ 3 ಲಕ್ಷ ರೂ.ಗಳನ್ನು ಸಾಲದ ರೂಪದಲ್ಲಿ ನೀಡಬೇಕು. ಕಾರ್ವಿುಕರಿಗೆ ಉಪಕರಣ ಖರೀದಿಗೆ ನೀಡುವ 5 ಸಾವಿರ ರೂ. ಸಹಾಯ ಧನವನ್ನು 2 ಲಕ್ಷ ರೂ.ಗೆ ಹೆಚ್ಚಿಸಬೇಕು. ಮಾಸಿಕ ಪಿಂಚಣಿಯನ್ನು 1 ಸಾವಿರದಿಂದ 3 ಸಾವಿರಕ್ಕೇರಿಸಬೇಕು. ಕಾರ್ವಿುಕ ಆರೋಗ್ಯಭಾಗ್ಯ ಯೋಜನೆಯ ವೈದ್ಯಕೀಯ ಸಹಾಯಧನವನ್ನು 25 ಸಾವಿರ ರೂ.ಗೆ ಹೆಚ್ಚಿಸಬೇಕು, ಕಾರ್ವಿುಕ ಚಿಕಿತ್ಸಾಭಾಗ್ಯವನ್ನು 2 ಲಕ್ಷದಿಂದ 5 ಲಕ್ಷಕ್ಕೇರಿಸಬೇಕು, ಅಪಘಾತ ಪರಿಹಾರ ಯೋಜನೆಯಲ್ಲಿ ಮೃತಪಟ್ಟ ಕಾರ್ವಿುಕನಿಗೆ ಎಫ್​ಐಆರ್​ನ್ನು ಅಂತಿಮವಾಗಿ ಪರಿಗಣಿಸದೇ ಮಧ್ಯಂತರವಾಗಿ ಪರಿಗಣಿಸಬೇಕು. ಕಾರ್ವಿುಕರಿಗೆ ಸರ್ಕಾರದ ಎಲ್ಲ ಸೌಲಭ್ಯಗಳೂ ಇಲಾಖೆ ವ್ಯಾಪ್ತಿಯಲ್ಲಿ ಸಕಾಲಕ್ಕೆ ಒದಗಿಸಬೇಕು. ಕಾರ್ವಿುಕರ ಸಂಘದ ಕಚೇರಿಗಾಗಿ ಜಿಲ್ಲಾ ಕೇಂದ್ರದಲ್ಲಿ 10 ಗುಂಟೆ ನಿವೇಶನ ನೀಡಬೇಕು. ಅಗಸರು, ಕ್ಷೌರಿಕರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಮಂಡಕ್ಕಿ ಭಟ್ಟಿ, ಹಮಾಲಿಗರು, ಚಿಂದಿ ಆಯುವವರು, ಮನೆ ಕೆಲಸಗಾರರನ್ನು ಕಾರ್ವಿುಕ ಕಲ್ಯಾಣ ಮಂಡಳಿಗೆ ಸೇರ್ಪಡೆಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

    ಸಂಘಟನೆಯ ರಾಜ್ಯಾಧ್ಯಕ್ಷ ಅಜ್ಜಪ್ಪ ಹಡಪದ, ತಾಲೂಕು ಅಧ್ಯಕ್ಷ ರವಿ ರ್ಬಾ, ಪ್ರಧಾನ ಕಾರ್ಯದರ್ಶಿ ಹೇಮಗಿರಿ ಅಡಿಗಣ್ಣನವರ, ಪದಾಧಿಕಾರಿಗಳಾದ ಶಿವಕುಮಾರ ಹಡಪದ, ಷಣ್ಮುಖಗೌಡ ಪಾಟೀಲ, ನಿಂಗನಗೌಡ ಪಾಟೀಲ, ಜಯನುದ್ದೀನ್ ಮಯಜಾವರ, ಪ್ರೇಮಾ ತಂಬುಳಿ, ಪೂರ್ಣಿಮಾ ತೊಗರಳ್ಳಿ, ಸುಭಾಸ ರ್ಬಾ, ಪುಟ್ಟಪ್ಪ ಕೋಳೂರ, ಪರಶುರಾಮ ಕುಂಟನಹೊಸಳ್ಳಿ, ಬಸನಗೌಡ ಪಾಟೀಲ, ಚಂದ್ರಕಾಂತ ಗೊದಮನಿ, ವೀರಭದ್ರಪ್ಪ ಅಪ್ಪಾಜಿ, ಗಣೇಶ ಕುಮಚಗಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts